AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

‘ಓಂ ಶಾಂತಿ ಓಂ’ ಸಿನಿಮಾದಲ್ಲಿನ ಒಂದು ದೃಶ್ಯವನ್ನು ದೀಪಿಕಾ ಪಡುಕೋಣೆ ಅಭಿನಯಿಸಿ ತೋರಿಸಿದರು. ಅದನ್ನು ಅಮಿತಾಭ್​ ಅನುಕರಿಸಬೇಕಿತ್ತು. ಅದಕ್ಕಾಗಿ ಅವರು ತುಂಬ ಕಷ್ಟಪಟ್ಟರು.

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​
ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್
TV9 Web
| Edited By: |

Updated on: Sep 05, 2021 | 4:24 PM

Share

ಭಾರತೀಯ ಚಿತ್ರರಂಗದಲ್ಲಿ ನಟ ಅಮಿತಾಭ್​ ಬಚ್ಚನ್​ಗೆ ಸಾಟಿ ಆಗಬಲ್ಲ ಇನ್ನೋರ್ವ ನಟನಿಲ್ಲ. ಅಭಿನಯದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಅವರ ಜೊತೆ ಒಮ್ಮೆಯಾದರೂ ತೆರೆಹಂಚಿಕೊಳ್ಳಬೇಕು ಎಂದು ಬಯಸುತ್ತಾರೆ ಎಲ್ಲ ಕಲಾವಿದರು. ಅಂಥ ದಿಗ್ಗಜ ನಟನಿಗೆ ನಿನ್ನೆ ಮೊನ್ನೆ ಬಂದ ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕಿ ಫರ್ಹಾ ಖಾನ್​ ನಟನೆ ಹೇಳಿಕೊಡುವುದು ಎಂದರೆ ಏನರ್ಥ? ಅಚ್ಚರಿ ಎನಿಸಿದರೂ ಇಂಥ ಒಂದು ಘಟನೆ ನಡೆದಿದೆ. ಅದಕ್ಕೆ ವೇದಿಕೆ ಆಗಿದ್ದು ‘ಕೌನ್​ ಬನೇಗಾ ಕರೋಡ್​ಪತಿ’ ರಿಯಾಲಿಟಿ ಶೋ.

ಕಿರುತೆರೆಯ ಫೇಮಸ್​ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಕೌನ್​ ಬನೇಗಾ ಕರೋಡ್​ಪತಿ ಶೋ ಈಗ 13ನೇ ಸೀಸನ್​ ಆರಂಭಿಸಿದೆ. ಇದರಲ್ಲಿ ಶಾಂದಾರ್​ ಶುಕ್ರವಾರ್​ ಎಂಬ ಎಪಿಸೋಡ್​ ಪರಿಚಯಿಸಲಾಗಿದೆ. ಪ್ರತಿ ಶುಕ್ರವಾರ ಪ್ರಸಾರ ಆಗುವ ಈ ವಿಶೇಷ ಸಂಚಿಕೆಯಲ್ಲಿ ಹೆಸರಾಂತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ದೀಪಿಕಾ ಪಡುಕೋಣೆ ಮತ್ತು ಫರ್ಹಾ ಖಾನ್​ ಅವರಿಗೂ ಅಂಥ ಅವಕಾಶ ಸಿಕ್ಕಿದೆ. ಈ ವೇಳೆ ಇವರಿಬ್ಬರೂ ಸೇರಿಕೊಂಡು ಅಮಿತಾಭ್​ಗೆ ನಟನೆ ಹೇಳಿಕೊಟ್ಟಿದ್ದಾರೆ!

‘ನಿಮ್ಮ ಸಿನಿಮಾಗಳಲ್ಲಿ ನನ್ನನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತ ನಿಮಗೆ ಒಮ್ಮೆಯೂ ಅನಿಸಲಿಲ್ಲವೇ’ ಎಂದು ಫರ್ಹಾ ಖಾನ್​ಗೆ ಅಮಿತಾಭ್​ ತಮಾಷೆ ಮಾಡಿದರು. ‘ಅದು ಎಲ್ಲರ ಕನಸಾಗಿರುತ್ತದೆ ಸರ್​’ ಎಂದು ಫರ್ಹಾ ಖಾನ್​ ಉತ್ತರಿಸಿದರು. ‘ನಿಜ ಹೇಳಿ’ ಎಂದು ಬಿಗ್​ ಬಿ ಒತ್ತಾಯಿಸಿದರು. ‘ಹಾಗಾದರೆ ಈಗಲೇ ಒಂದು ದೃಶ್ಯಕ್ಕೆ ಆಡಿಷನ್​ ಮಾಡೋಣ’ ಎಂದು ಫರ್ಹಾ ಖಾನ್​ ಸಜ್ಜಾದರು.

‘ಓಂ ಶಾಂತಿ ಓಂ’ ಸಿನಿಮಾದಲ್ಲಿನ ಒಂದು ದೃಶ್ಯವನ್ನು ದೀಪಿಕಾ ಅಭಿನಯಿಸಿ ತೋರಿಸಿದರು. ಅದನ್ನು ಅಮಿತಾಭ್​ ಅನುಕರಿಸಬೇಕಿತ್ತು. ಅದಕ್ಕಾಗಿ ಅವರು ತುಂಬ ಕಷ್ಟಪಟ್ಟರು. ‘ಹಾಗಲ್ಲ ಸರ್​.. ಹೀಗೆ ಮಾಡಬೇಕು’ ಎಂದು ಅಮಿತಾಭ್​ಗೆ ದೀಪಿಕಾ ಮತ್ತು ಫರ್ಹಾ ನಟನೆ ಹೇಳಿಕೊಟ್ಟರು. ಸದ್ಯ ಈ ಪ್ರೋಮೋವನ್ನು ಸೋನಿ ವಾಹಿನಿ ಹಂಚಿಕೊಂಡಿದೆ. ಸೆ.10ರಂದು ರಾತ್ರಿ 9 ಗಂಟೆಗೆ ಈ ಸಂಚಿಕೆ ಪ್ರಸಾರ ಆಗಲಿದೆ.

2007ರಲ್ಲಿ ತೆರೆಕಂಡ ‘ಓಂ ಶಾಂತಿ ಓಂ’ ಚಿತ್ರಕ್ಕೆ ಫರ್ಹಾ ಖಾನ್​ ನಿರ್ದೇಶನ ಮಾಡಿದ್ದರು. ಅದು ಬಾಲಿವುಡ್​ನಲ್ಲಿ ದೀಪಿಕಾ ನಟಿಸಿದ ಮೊದಲ ಸಿನಿಮಾ. ಆ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ದೀಪಿಕಾಗೆ ಸಿಕ್ಕಿತ್ತು.

ಇದನ್ನೂ ಓದಿ:

‘ಕರೋಡ್​ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್​; ಅಮಿತಾಭ್​ ಎದುರು ಕ್ರಿಕೆಟ್​ ದಿಗ್ಗಜರ ಸಖತ್ ಮಸ್ತಿ

ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಅಮಿತಾಭ್​ ಬಚ್ಚನ್

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ