
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ವೀಕೆಂಡ್ ಪಂಚಾಯ್ತಿಯಲ್ಲಿ ಈ ಬಾರಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತೀವ್ರ ಕೋಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೋನಲ್ಲಿ ಎಂದೂ ಕಾಣಿಸದ ರೀತಿಯಲ್ಲಿ ಸುದೀಪ್ ತಮ್ಮ ನಿಯಂತ್ರಣ ಕಳೆದುಕೊಂಡು ಗರಂ ಆಗಿದ್ದು, ಆಯೋಜಕರಾದ ಕಲರ್ಸ್ ಕನ್ನಡ ವಾಹಿನಿಗೆ ನೇರವಾಗಿಯೇ ಖಡಕ್ ಸವಾಲೊಂದನ್ನು ಎಸೆದಿದ್ದಾರೆ.
ಈ ಬಾರಿಯ ಸೀಸನ್ನಲ್ಲಿ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಯ್ಕೆ ಪ್ರಕ್ರಿಯೆಯ ಮೂಲಕ ಕಾಮನ್ ಮ್ಯಾನ್ಗಳನ್ನು ಕರೆಸಲಾಗಿತ್ತು. ಈ ಕೋಟಾದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್ ಎಂಬ ನಾಲ್ವರು ಸ್ಪರ್ಧಿಗಳ ನಡೆ-ನುಡಿ ಪ್ರೇಕ್ಷಕರ ತಾಳ್ಮೆ ಕೆರಳಿಸಿದೆ. ಇವರ ಸರಣಿ ತಪ್ಪುಗಳು, ಅನಗತ್ಯ ಜಗಳ ಮತ್ತು ಬೇಜವಾಬ್ದಾರಿ ಆಟದ ಶೈಲಿ ಇಡೀ ಶೋ ಹಾಗೂ ವೀಕ್ಷಕರಿಗೆ ಹಿಂಸೆಯಾಗಿ ಪರಿಣಮಿಸಿದೆ.
ಕಾಮನರ್ಸ್ಗಳ ಈ ಅತಿಯಾದ ವರ್ತನೆಯಿಂದ ತೀವ್ರ ಬೇಸತ್ತ ಸುದೀಪ್, ‘ಮುಂದಿನ ವರ್ಷದಿಂದ ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಇಂಥ ‘ಅಗ್ನಿಪರೀಕ್ಷೆ’ ಅಥವಾ ಕಾಮನರ್ಸ್ ಕಾನ್ಸೆಪ್ಟ್ ಇಡುವ ಸಾಹಸವೇ ಬೇಡ’ ಎಂದು ಕಲರ್ಸ್ ಕನ್ನಡ ವಾಹಿನಿಗೆ ನೇರವಾಗಿಯೇ ಮನವಿ ಮಾಡಿದ್ದಾರೆ. ಈ ಬಾರಿಯ ಕಾಮನ್ ಮ್ಯಾನ್ ಸ್ಪರ್ಧಿಗಳು ಆಟದ ಘನತೆ ಹಾಗೂ ವೀಕ್ಷಕರ ಭಾವನೆಗಳಿಗೆ ಧಕ್ಕೆ ತಂದಿರುವುದೇ ಸುದೀಪ್ ಅವರ ಈ ಕಠಿಣ ನಿಲುವಿಗೆ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಆದ ಸಂಗೀತಾಗೆ ಕಿಚ್ಚ ಸುದೀಪ್ ಕ್ಲಾಸ್; ಮಾಡಿದ ತಪ್ಪೇನು?
‘ಮುಂದಿನ ವರ್ಷ ಕಾಮನ್ ಮ್ಯಾನ್ ಅವರನ್ನು ಬಿಗ್ ಬಾಸ್ ಮನೆಗೆ ಅವಕಾಶ ಕೊಡಲಿಲ್ಲ ಎಂದರೆ ಅದಕ್ಕೆ ನಾಲ್ಕು ಕಾರಣ. ಆ ನಾಲ್ಕು ಕಾರಣಗಳು ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್’ ಎಂದು ಸುದೀಪ್ ಹೇಳಿದರು. ಈ ವೇಳೆ ನಾಲ್ಕು ಕಾಮನರ್ಗಳ ಮುಖ ಪೆಚ್ಚಾಯ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Sat, 19 September 26