AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಕಿಚ್ಚ ಸುದೀಪ್​​ ಆಗಮನಕ್ಕೆ ಸಿದ್ಧವಾಯ್ತು ಬಿಗ್​ ಬಾಸ್​ ವೇದಿಕೆ

ಕನ್ನಡ ಬಿಗ್​ ಬಾಸ್​ನ ಎಂಟು ಸೀಸನ್​ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಸುದೀಪ್​ ಅವರಿಗೆ ಇದೆ. ಮುಂದಿನ ಸೀಸನ್​ಗಳನ್ನೂ ಅವರೇ ನಿರೂಪಣೆ ಮಾಡಲಿದ್ದಾರೆ. ಮಿನಿ ಸೀಸನ್​ ನಿರೂಪಣೆ ಕೂಡ ಅವರೇ  ನಿರ್ವಹಿಸಲಿದ್ದಾರೆ.

Kichcha Sudeep: ಕಿಚ್ಚ ಸುದೀಪ್​​ ಆಗಮನಕ್ಕೆ ಸಿದ್ಧವಾಯ್ತು ಬಿಗ್​ ಬಾಸ್​ ವೇದಿಕೆ
ಕಿಚ್ಚ ಸುದೀಪ್​​
TV9 Web
| Updated By: ಮದನ್​ ಕುಮಾರ್​|

Updated on: Sep 04, 2021 | 7:22 AM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಪೂರ್ಣಗೊಂಡ ಬೆನ್ನಲ್ಲೇ ಆರಂಭವಾಗಿದ್ದು ಬಿಗ್​ ಬಾಸ್​ ಮಿನಿ ಸೀಸನ್​. ಕಲರ್ಸ್​ ಕನ್ನಡ ಧಾರಾವಾಹಿ ಕಲಾವಿದರನ್ನೇ ಇಟ್ಟುಕೊಂಡು ಮಿನಿ ಬಿಗ್​ ಬಾಸ್​ ನಡೆಸಲಾಗಿದೆ. ಇದು ಕನ್ನಡದ ಪಾಲಿಗೆ ಹೊಸ ಪ್ರಯೋಗ. 100 ದಿನಗಳ ಕಾಲ ಮನರಂಜನೆ ನೀಡುತ್ತಿದ್ದ ಬಿಗ್​ ಬಾಸ್​ಗೂ ಇದಕ್ಕೂ ತುಂಬಾನೇ ವ್ಯತ್ಯಾಸವಿದೆ. ಆದರೂ ಮನರಂಜನೆಗೆ ಯಾವುದೇ ಕೊರತೆ ಆಗಿಲ್ಲ. ಸ್ಪರ್ಧಿಗಳು ಆರು ದಿನಗಳ ಕಾಲ ಮನೆಯಲ್ಲಿ ಕಳೆದು ಬಂದಿದ್ದನ್ನು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಮೂರು ವಾರಗಳ ಕಾಲ ಪ್ರಸಾರ ಮಾಡಲಾಗಿದೆ. ಈಗ ಏನಿದ್ದರೂ ಸುದೀಪ್​ ಬಿಗ್​ ಬಾಸ್ ವೇದಿಕೆ​ ಏರುವ ಸಮಯ.

ಕನ್ನಡ ಬಿಗ್​ ಬಾಸ್​ನ ಎಂಟು ಸೀಸನ್​ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಖ್ಯಾತಿ ಸುದೀಪ್​ ಅವರಿಗೆ ಇದೆ. ಮುಂದಿನ ಸೀಸನ್​ಗಳನ್ನೂ ಅವರೇ ನಿರೂಪಣೆ ಮಾಡಲಿದ್ದಾರೆ. ಸುದೀಪ್​ ನಿರೂಪಣೆಯನ್ನು ಇಷ್ಟಪಡದವರಿಲ್ಲ. ಸುದೀಪ್​ ಅವರನ್ನು ನೋಡುವ ಉದ್ದೇಶದಿಂದಲೇ ಬಿಗ್​ ಬಾಸ್​ ನೋಡುವವರ ಸಂಖ್ಯೆ ದೊಡ್ಡದಿದೆ. ಈಗ ಮಿನಿ ಸೀಸನ್​ ನಿರೂಪಣೆ ಕೂಡ ಅವರೇ  ನಿರ್ವಹಿಸಲಿದ್ದಾರೆ. ಶನಿವಾರ (ಸೆಪ್ಟೆಂಬರ್​ 4) ಮತ್ತು ಭಾನುವಾರ (ಸೆಪ್ಟೆಂಬರ್​ 5) ಸುದೀಪ್​ ನಿರೂಪಣೆ ಮಾಡಿರುವ ಎಪಿಸೋಡ್​ ಪ್ರಸಾರವಾಗಲಿದೆ. ಇದನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಈಗಾಗಲೇ ಕಲರ್ಸ್​ ಕನ್ನಡ ವಾಹಿನಿ ಸುದೀಪ್​ ನಿರೂಪಣೆಯ ಎಪಿಸೋಡ್​ನ ಶೂಟಿಂಗ್​ ಪೂರ್ಣಗೊಳಿಸಿದೆ. ಅದನ್ನು, ಈಗ ಪ್ರಸಾರ ಮಾಡಲಾಗುತ್ತಿದೆ. ಕಳೆದ ಒಂದು ವಾರಗಳಿಂದ ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಸುದೀಪ್​ ಲುಕ್​ ಹಾಗೂ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದ್ದು, ಫುಲ್​ ಎಪಿಸೋಡ್​ ಪ್ರಸಾರಕ್ಕಾಗಿ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಸುದೀಪ್​ ನಿರೂಪಣೆ ಮಾಡುವ ಬಿಗ್​ ಬಾಸ್​ ಎಪಿಸೋಡ್​ಗಳು ರಾತ್ರಿ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಸಮಯ ಬದಲಾಗಿದೆ. ಮಧ್ಯಾಹ್ನ ಮೂರು ಗಂಟೆಗೇ ಸುದೀಪ್​ ಎಂಟ್ರಿ ಆಗಲಿದೆ. ರಾತ್ರಿ ಬೇರೆಬೇರೆ ಕಾರ್ಯಕ್ರಮಗಳು ಶೆಡ್ಯೂಲ್​ ಆಗಿರುವುದರಿಂದ ವಾಹಿನಿ ಈ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ:

ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್​; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ