ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?

ಬಿಗ್​ ಬಾಸ್​ ಮನೆಯೊಳಗೆ 16 ಸ್ಪರ್ಧಿಗಳು ಸೇರಿದ್ದಾರೆ. ಎಲ್ಲರೂ ಧಾರಾವಾಹಿಯಲ್ಲಿ ಗುರುತಿಸಿಕೊಂಡವರು ಎಂಬುದು ವಿಶೇಷ. ಇದು ಮಿನಿ ಸೀಸನ್​ ಆಗಿದ್ದು, ಇಲ್ಲಿ ವಿನ್ನರ್​ ಅಥವಾ ಎಲಿಮಿನೇಷನ್​ ಇರುವುದಿಲ್ಲ.

ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?
ಕಿರಣ್​ ರಾಜ್
Follow us
| Updated By: ಮದನ್​ ಕುಮಾರ್​

Updated on: Aug 21, 2021 | 7:13 AM

ಬಿಗ್​ ಬಾಸ್​ ಮನೆ ಪ್ರವೇಶಿಸಿದ ನಂತರದಲ್ಲಿ ಹೊರ ಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಮನೆ ಒಳಗೆ ತೆರಳಿದ ಸ್ಪರ್ಧಿಗಳು ಮೊಬೈಲ್​ ಬಳಕೆ ಮಾಡುವಂತೇ ಇಲ್ಲ. ಈ ಕಾರಣಕ್ಕೆ ಸ್ಪರ್ಧಿಗಳು ಮನೆಯವರ ಜತೆ ಮಾತನಾಡಬೇಕು, ಏನಾದರೂ ಬೇಕಾದರೆ ಬಿಗ್​ ಬಾಸ್​ ಜತೆ ಮಾತನಾಡಬೇಕು. ಈಗ ಬಿಗ್​ ಬಾಸ್​ ಮನೆಯಲ್ಲಿ ಕಿರಣ್​ ರಾಜ್​ ಬಿಗ್​ ಬಾಸ್​ಗೆ ವಿಶೇಷ ಮನವಿಯೊಂದನ್ನು ಇಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ 16 ಸ್ಪರ್ಧಿಗಳು ಸೇರಿದ್ದಾರೆ. ಎಲ್ಲರೂ ಧಾರಾವಾಹಿಯಲ್ಲಿ ಗುರುತಿಸಿಕೊಂಡವರು ಎಂಬುದು ವಿಶೇಷ. ಇದು ಮಿನಿ ಸೀಸನ್​ ಆಗಿದ್ದು, ಇಲ್ಲಿ ವಿನ್ನರ್​ ಅಥವಾ ಎಲಿಮಿನೇಷನ್​ ಇರುವುದಿಲ್ಲ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಕನ್ನಡತಿ ಧಾರಾವಾಹಿ ಮೂಲಕ ಹೆಚ್ಚು ಮನೆಮಾತಾದ ಕಿರಣ್​ ರಾಜ್​ ಕೂಡ ಬಿಗ್​ ಬಾಸ್​ ಮನೆ ಸೇರಿದ್ದಾರೆ. ಅವರು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಗಗನ್​ ಚಿನ್ನಪ್ಪ ಹಾಗೂ ಕಿರಣ್​ ರಾಜ್​ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಗಗನ್​, ‘ಇಲ್ಲಿ ನಾವು ನಿತ್ಯ ಒಂದೊಂದು ಕೆಲಸ ಮಾಡುತ್ತಿದ್ದೇವೆ. ಏಕೆಂದರೆ ಇದು ಒಂದು ವಾರದ ಬಿಗ್​ ಬಾಸ್. ಆದರೆ, 100 ದಿನಗಳ ಬಿಗ್​ ಬಾಸ್​ನಲ್ಲಿ ಎಲ್ಲರೂ ಪ್ರತಿ ಕೆಲಸವನ್ನು ಒಂದು ವಾರ ಮಾಡಬೇಕು. ಪಾತ್ರೆ ತೊಳೆಯೋದೆಲ್ಲ ಒಂದು ವಾರ ಮಾಡೋಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ. ಇದಕ್ಕೆ ಕಿರಣ್​ ರಾಜ್​ ಕೂಡ ತಲೆ ಆಡಿಸಿದ್ದಾರೆ. ‘ಬಾಳೆ ಎಲೆ ತಂದುಕೊಡಿ ಬಿಗ್​ ಬಾಸ್​’ ಎಂದು ನಾನು ಕೇಳುತ್ತಿದ್ದೆ ಎಂದಿದ್ದಾರೆ ಕಿರಣ್​ ರಾಜ್​.

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಗಳು ಹಾಸ್ಯಕ್ಕೆ ಕೆಲ ಮಾತುಗಳನ್ನು ಆಡಿದ್ದರು. ಇದನ್ನು ಅಚ್ಚರಿ ಎಂಬಂತೆ ಬಿಗ್​ ಬಾಸ್​ ಈಡೇರಿಸಿದ್ದರು. ಈಗ ಕಿರಣ್​ ರಾಜ್​ ಬೇಡಿಕೆಯನ್ನು ಬಿಗ್​ ಬಾಸ್​ ಈಡೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಗ್​ ಬಾಸ್​ ಈ ಭಾನುವಾರ (ಆಗಸ್ಟ್ 22) ಪೂರ್ಣಗೊಳ್ಳಲಿದೆ. ಕೊನೆಯ ದಿನವನ್ನು ನಡೆಸಿಕೊಡೋಕೆ ಕಿಚ್ಚ ಸುದೀಪ್​ ಆಗಮಿಸುತ್ತಿದ್ದಾರೆ ಅನ್ನೋದು ವಿಶೇಷ. ಈ ಎಪಿಸೋಡ್​ಗಾಗಿ ವೀಕ್ಷಕರು ಕಾದು ಕೂತಿದ್ದಾರೆ.

ಇದನ್ನೂ ಓದಿ:

 ‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ