AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?

ಬಿಗ್​ ಬಾಸ್​ ಮನೆಯೊಳಗೆ 16 ಸ್ಪರ್ಧಿಗಳು ಸೇರಿದ್ದಾರೆ. ಎಲ್ಲರೂ ಧಾರಾವಾಹಿಯಲ್ಲಿ ಗುರುತಿಸಿಕೊಂಡವರು ಎಂಬುದು ವಿಶೇಷ. ಇದು ಮಿನಿ ಸೀಸನ್​ ಆಗಿದ್ದು, ಇಲ್ಲಿ ವಿನ್ನರ್​ ಅಥವಾ ಎಲಿಮಿನೇಷನ್​ ಇರುವುದಿಲ್ಲ.

ದೊಡ್ಮನೆಯಲ್ಲಿ ಕಿರಣ್​ ರಾಜ್​ ವಿಶೇಷ ಮನವಿ; ಇದನ್ನು ಬಿಗ್​ ಬಾಸ್​ ಸ್ವೀಕರಿಸ್ತಾರ?
ಕಿರಣ್​ ರಾಜ್
TV9 Web
| Edited By: |

Updated on: Aug 21, 2021 | 7:13 AM

Share

ಬಿಗ್​ ಬಾಸ್​ ಮನೆ ಪ್ರವೇಶಿಸಿದ ನಂತರದಲ್ಲಿ ಹೊರ ಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಮನೆ ಒಳಗೆ ತೆರಳಿದ ಸ್ಪರ್ಧಿಗಳು ಮೊಬೈಲ್​ ಬಳಕೆ ಮಾಡುವಂತೇ ಇಲ್ಲ. ಈ ಕಾರಣಕ್ಕೆ ಸ್ಪರ್ಧಿಗಳು ಮನೆಯವರ ಜತೆ ಮಾತನಾಡಬೇಕು, ಏನಾದರೂ ಬೇಕಾದರೆ ಬಿಗ್​ ಬಾಸ್​ ಜತೆ ಮಾತನಾಡಬೇಕು. ಈಗ ಬಿಗ್​ ಬಾಸ್​ ಮನೆಯಲ್ಲಿ ಕಿರಣ್​ ರಾಜ್​ ಬಿಗ್​ ಬಾಸ್​ಗೆ ವಿಶೇಷ ಮನವಿಯೊಂದನ್ನು ಇಟ್ಟಿದ್ದಾರೆ.

ಬಿಗ್​ ಬಾಸ್​ ಮನೆಯೊಳಗೆ 16 ಸ್ಪರ್ಧಿಗಳು ಸೇರಿದ್ದಾರೆ. ಎಲ್ಲರೂ ಧಾರಾವಾಹಿಯಲ್ಲಿ ಗುರುತಿಸಿಕೊಂಡವರು ಎಂಬುದು ವಿಶೇಷ. ಇದು ಮಿನಿ ಸೀಸನ್​ ಆಗಿದ್ದು, ಇಲ್ಲಿ ವಿನ್ನರ್​ ಅಥವಾ ಎಲಿಮಿನೇಷನ್​ ಇರುವುದಿಲ್ಲ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಕನ್ನಡತಿ ಧಾರಾವಾಹಿ ಮೂಲಕ ಹೆಚ್ಚು ಮನೆಮಾತಾದ ಕಿರಣ್​ ರಾಜ್​ ಕೂಡ ಬಿಗ್​ ಬಾಸ್​ ಮನೆ ಸೇರಿದ್ದಾರೆ. ಅವರು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಗಗನ್​ ಚಿನ್ನಪ್ಪ ಹಾಗೂ ಕಿರಣ್​ ರಾಜ್​ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಗಗನ್​, ‘ಇಲ್ಲಿ ನಾವು ನಿತ್ಯ ಒಂದೊಂದು ಕೆಲಸ ಮಾಡುತ್ತಿದ್ದೇವೆ. ಏಕೆಂದರೆ ಇದು ಒಂದು ವಾರದ ಬಿಗ್​ ಬಾಸ್. ಆದರೆ, 100 ದಿನಗಳ ಬಿಗ್​ ಬಾಸ್​ನಲ್ಲಿ ಎಲ್ಲರೂ ಪ್ರತಿ ಕೆಲಸವನ್ನು ಒಂದು ವಾರ ಮಾಡಬೇಕು. ಪಾತ್ರೆ ತೊಳೆಯೋದೆಲ್ಲ ಒಂದು ವಾರ ಮಾಡೋಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ. ಇದಕ್ಕೆ ಕಿರಣ್​ ರಾಜ್​ ಕೂಡ ತಲೆ ಆಡಿಸಿದ್ದಾರೆ. ‘ಬಾಳೆ ಎಲೆ ತಂದುಕೊಡಿ ಬಿಗ್​ ಬಾಸ್​’ ಎಂದು ನಾನು ಕೇಳುತ್ತಿದ್ದೆ ಎಂದಿದ್ದಾರೆ ಕಿರಣ್​ ರಾಜ್​.

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಗಳು ಹಾಸ್ಯಕ್ಕೆ ಕೆಲ ಮಾತುಗಳನ್ನು ಆಡಿದ್ದರು. ಇದನ್ನು ಅಚ್ಚರಿ ಎಂಬಂತೆ ಬಿಗ್​ ಬಾಸ್​ ಈಡೇರಿಸಿದ್ದರು. ಈಗ ಕಿರಣ್​ ರಾಜ್​ ಬೇಡಿಕೆಯನ್ನು ಬಿಗ್​ ಬಾಸ್​ ಈಡೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಬಿಗ್​ ಬಾಸ್​ ಈ ಭಾನುವಾರ (ಆಗಸ್ಟ್ 22) ಪೂರ್ಣಗೊಳ್ಳಲಿದೆ. ಕೊನೆಯ ದಿನವನ್ನು ನಡೆಸಿಕೊಡೋಕೆ ಕಿಚ್ಚ ಸುದೀಪ್​ ಆಗಮಿಸುತ್ತಿದ್ದಾರೆ ಅನ್ನೋದು ವಿಶೇಷ. ಈ ಎಪಿಸೋಡ್​ಗಾಗಿ ವೀಕ್ಷಕರು ಕಾದು ಕೂತಿದ್ದಾರೆ.

ಇದನ್ನೂ ಓದಿ:

 ‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ