‘ಕ್ಯಾಪ್ಟನ್​ಗೆ ಮರ್ಯಾದೆ ಕೊಡಿ’: ಜಗದೀಶ್​ ಕಾಟದಿಂದ ಬೇಡಿಕೊಳ್ಳುವ ಸ್ಥಿತಿಗೆ ಬಂದ ಹಂಸಾ

|

Updated on: Oct 08, 2024 | 10:48 PM

ಸ್ವರ್ಗದಲ್ಲಿ ಇದ್ದಾಗ ಸಿಕ್ಕಾಪಟ್ಟೆ ಹಾರಾಡುತ್ತಿದ್ದ ಜಗದೀಶ್​ ಅವರು ನರಕಕ್ಕೆ ಬಂದರೂ ಬದಲಾಗಿಲ್ಲ. ನರಕದಲ್ಲಿಯೂ ಅವರು ಕಿರಿಕ್​ ಮಾಡುತ್ತಿದ್ದಾರೆ. ಕ್ಯಾಪ್ಟನ್​ ಆಗಿರುವ ಹಂಸಾಗೆ ಜಗದೀಶ್​ ಅವರನ್ನು ಸಹಿಸಿಕೊಳ್ಳುವುದು ಕಷ್ಟ ಆಗಿದೆ. ಉದ್ದೇಶಪೂರ್ವಕವಾಗಿಯೇ ಜಗದೀಶ್​ ಕಿರಿಕ್ ಮಾಡುತ್ತಿದ್ದಾರೆ. ಏಕವಚನದಲ್ಲೂ ಮಾತನಾಡಿ ಕೆಣಕುತ್ತಿದ್ದಾರೆ.

‘ಕ್ಯಾಪ್ಟನ್​ಗೆ ಮರ್ಯಾದೆ ಕೊಡಿ’: ಜಗದೀಶ್​ ಕಾಟದಿಂದ ಬೇಡಿಕೊಳ್ಳುವ ಸ್ಥಿತಿಗೆ ಬಂದ ಹಂಸಾ
ಜಗದೀಶ್​, ಹಂಸಾ
Follow us on

ಬಿಗ್​ ಬಾಸ್​ ಮನೆಯಲ್ಲಿ ಲಾಯರ್​ ಜಗದೀಶ್​ ಅವರು ಗಲಾಟೆ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಂತಿದೆ. ಅದರಲ್ಲೂ ನಟಿ ಹಂಸಾ ಅವರನ್ನು ಜಗದೀಶ್​ ಟಾರ್ಗೆಟ್​ ಮಾಡಿದ್ದಾರೆ. ಪ್ರತಿ ಹೆಜ್ಜೆಯಲ್ಲೂ ಹಂಸಾಗೆ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ಅವರು ಏಕವಚನದಲ್ಲಿ ಮಾತನಾಡಿದ್ದಾರೆ. ಬಿಗ್​ ಬಾಸ್​ ಮನೆಗೆ ಮೊದಲ ಕ್ಯಾಪ್ಟನ್​ ಆಗಿರುವ ಹಂಸಾ ಅವರಿಗೆ ಕಿರಿಕಿರಿ ಆಗುತ್ತಿದೆ. ಕ್ಯಾಪ್ಟನ್​ ಸ್ಥಾನಕ್ಕೂ ಗೌರವ ನೀಡಿದೇ ಜಗದೀಶ್​ ಅವರು ಕಾಟ ಕೊಡುತ್ತಿದ್ದಾರೆ. ಪ್ರತಿ ಹಂತದಲ್ಲೂ ಮಾತಿನ ಮೂಲಕ ತಿವಿಯುತ್ತಿದ್ದಾರೆ. ಅಲ್ಲದೇ ಬೇಕೆಂದೇ ಕೆಣಕುತ್ತಿದ್ದಾರೆ.

ಜಗದೀಶ್​ ಅವರು ಮೊದಲು ಸ್ವರ್ಗದಲ್ಲಿ ಇದ್ದರು. ಆದರೆ ಅವರಿಂದ ಸ್ವರ್ಗದ ಮಂದಿಗೆ ಒಂದಷ್ಟು ತೊಂದರೆ ಆಯಿತು. ಕ್ಯಾಪ್ಟನ್​ ಆದ ಹಂಸಾ ಅವರು ಎರಡನೇ ವಾರದಲ್ಲಿ ತಮ್ಮ ಅಧಿಕಾರವನ್ನು ಬಳಸಿ ಜಗದೀಶ್​ ಅವರನ್ನು ನರಕಕ್ಕೆ ಕಳಿಸಿದರು. ಆದ್ದರಿಂದ ಜಗದೀಶ್​ ಅವರಿಗೆ ಹಂಸಾ ಅವರನ್ನು ಕಂಡರೆ ಆಗುತ್ತಿಲ್ಲ. ಮಂಗಳವಾರದ (ಅ.8) ಸಂಚಿಕೆಯಲ್ಲಿ ಟೀ ತಂದುಕೊಂಡುವಂತೆ ಅವರು ತಾಕೀತು ಮಾಡಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೆ. ಇದರಿಂದ ಹಂಸಾಗೆ ಕೋಪ ಬಂದಿದೆ.

ಏಕವಚನದಲ್ಲಿ ಮಾತನಾಡಬೇಡಿ ಎಂದು ಹಂಸಾ ಅವರು ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡ ಜಗದೀಶ್​ ಬುದ್ಧಿ ಕಲಿತಿಲ್ಲ. ‘ದಯವಿಟ್ಟು ಕ್ಯಾಪ್ಟನ್​ಗೆ ಎಲ್ಲರೂ ಮರ್ಯಾದೆ ಕೊಡಿ’ ಎಂದು ಹಂಸಾ ಅವರು ಕೂಗಿ ಹೇಳಿದ್ದಾರೆ. ಹಾಗಿದ್ದರೂ ಜಗದೀಶ್​ ಅವರು ದಾರಿಗೆ ಬಂದಿಲ್ಲ. ಅದಕ್ಕೂ ಮುನ್ನ ಮಾತನಾಡುವಾಗ ‘ಹಂಸಾ ಅವರು ಮ್ಯಾಚ್ ಫಿಕ್ಸಿಂಗ್​ ಮಾಡುತ್ತಾರೆ’ ಎಂದು ಜಗದೀಶ್​ ಆರೋಪ ಹೊರಿಸಿದರು.

ಇದನ್ನೂ ಓದಿ: ‘ನೀನು ಯಾರಿಗೂ ನಿಯತ್ತಾಗಿಲ್ಲ’: ಎಲ್ಲರ ಎದುರು ಹಂಸಾಗೆ ಚುಚ್ಚು ಮಾತುಗಳಿಂದ ನಿಂದಿಸಿದ ಜಗದೀಶ್​

ಕೆಲವೊಮ್ಮೆ ಕಿರಿಕ್ ಮಾಡುವ ಜಗದೀಶ್​ ಅವರು ಮರುಕ್ಷಣವೇ ಕಾಮಿಡಿ ಮಾಡುತ್ತಾರೆ. ಹಂಸಾ ಅವರನ್ನು ಪದೇಪದೇ ಗೋಳು ಹೊಯ್ದುಕೊಂಡ ಅವರು ನಂತರ ಅವರ ಜೊತೆಯೇ ಕಾಮಿಡಿ ಮಾಡುತ್ತಾ ಕಾಲ ಕಳೆದಿದ್ದಾರೆ. ಮೊದಲ ವಾರ ಜಗದೀಶ್​ ಅವರಿಗೆ ಸಿಕ್ಕಾಪಟ್ಟೆ ಸ್ಕ್ರೀನ್​ ಸ್ಪೇಸ್​ ಸಿಕ್ಕಿತ್ತು. ಎರಡನೇ ವಾರದ ಕಾಂಟೆಂಟ್​ ಇನ್ನೂ ಖರಾಬ್​ ಆಗಿ ಇರಲಿದೆ ಎಂದು ಅವರು ಶಪಥ ಮಾಡಿದ್ದಾರೆ. ಅದಕ್ಕೆ ತಕ್ಕಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ. ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಎಲಿಮಿನೇಟ್​ ಆದರು. ಎರಡನೇ ವಾರಕ್ಕೆ ಯಾರು ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.