Weekend With Ramesh: ಅವಿನಾಶ್​ ಮನೆಯ ದೇವರಕೋಣೆಯಲ್ಲಿ ವಿಷ್ಣುವರ್ಧನ್​ ಫೋಟೋ; ‘ಆಪ್ತರಕ್ಷಕ’ನಿಗೆ ಮಾಳವಿಕಾ ಗೌರವ

Dr Vishnuvardhan: ‘ವಿಷ್ಣುವರ್ಧನ್​ ಅವರು ಒಬ್ಬ ತಂದೆಯ ಸ್ವರೂಪದಲ್ಲಿ ನಮ್ಮ ಬದುಕಿನಲ್ಲಿ ಇದ್ದರು. ಅವರ ನೆರಳು ನಮ್ಮನ್ನು ಬಿಟ್ಟು ಅಗಲಿಯೇ ಇಲ್ಲ’ ಎಂದು ಮಾಳವಿಕಾ ಅವಿನಾಶ್​ ಹೇಳಿದ್ದಾರೆ.

Weekend With Ramesh: ಅವಿನಾಶ್​ ಮನೆಯ ದೇವರಕೋಣೆಯಲ್ಲಿ ವಿಷ್ಣುವರ್ಧನ್​ ಫೋಟೋ; ‘ಆಪ್ತರಕ್ಷಕ’ನಿಗೆ ಮಾಳವಿಕಾ ಗೌರವ
ಮಾಳವಿಕಾ, ಅವಿನಾಶ್
Follow us
|

Updated on:Apr 21, 2023 | 4:15 PM

ಜೀ ಕನ್ನಡ ವಾಹಿನಿಯ ‘ವೀಕೆಂಡ್​ ವಿತ್​ ರಮೇಶ್​’ (Weekend With Ramesh) ಕಾರ್ಯಕ್ರಮದ 5ನೇ ಸೀಸನ್​ ಯಶಸ್ವಿಯಾಗಿ ಮೂಡಿಬರುತ್ತಿದೆ. ಅನೇಕ ಸಾಧಕರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ರಮ್ಯಾ ದಿವ್ಯ ಸ್ಪಂದನಾ, ಪ್ರಭುದೇವ, ದತ್ತಣ್ಣ, ಡಾ. ಮಂಜುನಾಥ್​, ಡಾಲಿ ಧನಂಜಯ್​ ಅವರು ಸಾಧಕರ ಸೀಟ್​ ಮೇಲೆ ಕುಳಿತು ಈ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದಾರೆ. ಈ ವಾರ (ಏಪ್ರಿಲ್​ 29 ಮತ್ತು 30) ಬರುವ ಸಾಧಕರು ಯಾರು ಎಂಬುದು ಕೂಡ ಈಗಾಗಲೇ ಬಹಿರಂಗ ಆಗಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ಪೋಷಕ ಕಲಾವಿದರಾದ ಅವಿನಾಶ್​ (Avinash) ಮತ್ತು ಮಂಡ್ಯ ರಮೇಶ್​ ಅವರು ತಮ್ಮ ಬದುಕಿನ ನೆನಪಿನ ಪುಟವನ್ನು ‘ವೀಕೆಂಡ್​ ವಿತ್ ರಮೇಶ್​’ ವೇದಿಕೆಯಲ್ಲಿ ತೆರೆಯಲಿದ್ದಾರೆ. ವಿಶೇಷ ಎಂದರೆ, ನಟ ವಿಷ್ಣುವರ್ಧನ್​ (Dr Vishnuvardhan) ಬಗ್ಗೆ ಅವಿನಾಶ್​ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ವಾರದ ಸಂಚಿಕೆಗಳ ಪ್ರೋಮೋವನ್ನು ಜೀ ಕನ್ನಡ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಅವಿನಾಶ್​ ಮತ್ತು ಮಾಳವಿಕಾ ಅವರು ವಿಷ್ಣುವರ್ಧನ್​ ಬಗ್ಗೆ ಮಾತನಾಡಿರುವುದು ಗಮನ ಸೆಳೆಯುತ್ತಿದೆ. ‘ನಿಮ್ಮ ಮನೆಯ ದೇವರ ರೂಮ್​ನಲ್ಲಿ ವಿಷ್ಣುವರ್ಧನ್​ ಅವರ ಫೋಟೋ ಇದೆ ಎಂಬುದು ನಿಜನಾ?’ ಎಂದು ರಮೇಶ್​ ಕೇಳಿದ್ದಕ್ಕೆ ‘ನಿಜ’ ಎಂದು ಉತ್ತರಿಸಿದ್ದಾರೆ ಅವಿನಾಶ್​.

‘ಹೃದಯದಲ್ಲಿ ಕೂರಿಸಿರುವವರನ್ನು ದೇವರಮನೆಯಲ್ಲಿ ಕೂರಿಸುವುದು ಏನು ದೊಡ್ಡ ವಿಷಯ’ ಎಂದು ಅವಿನಾಶ್​ ಪತ್ನಿ ಮಾಳವಿಕಾ ಅವರು ಹೇಳಿದ್ದಾರೆ. ಆ ಮೂಲಕ ವಿಷ್ಣುವರ್ಧನ್​ ಬಗ್ಗೆ ತಮಗೆ ಇರುವ ಗೌರವ ಎಂಥದ್ದು ಎಂಬುದನ್ನು ಅವರು ವಿವರಿಸಿದ್ದಾರೆ. ‘ವಿಷ್ಣುವರ್ಧನ್​ ಅವರು ಒಬ್ಬ ತಂದೆಯ ಸ್ವರೂಪದಲ್ಲಿ ನಮ್ಮ ಬದುಕಿನಲ್ಲಿ ಇದ್ದರು. ಅವರ ನೆರಳು ನಮ್ಮನ್ನು ಬಿಟ್ಟು ಅಗಲಿಯೇ ಇಲ್ಲ’ ಎಂದು ಮಾಳವಿಕಾ ಅವಿನಾಶ್​ ಹೇಳಿದ್ದಾರೆ.

ಇದನ್ನೂ ಓದಿ: Vishnuvardhan: ಸಿಗರೇಟ್ ಸೇದುತ್ತಿದ್ದಾಗ ವಿಷ್ಣುವರ್ಧನ್ ಕೈಲಿ ಸಿಕ್ಕಿ ಬಿದ್ದಿದ್ದ ಶ್ರೀನಗರ ಕಿಟ್ಟಿ

‘ನಮ್ಮನ್ನು ತುಂಬ ಪ್ರೀತಿ ಮಾಡುತ್ತಿದ್ದರು. ಪ್ರತಿಯೊಂದು ಹೆಜ್ಜೆಯಲ್ಲೂ ಫೋನ್​ ಮಾಡುತ್ತಿದ್ದರು’ ಎಂದು ಅವಿನಾಶ್​ ಹೇಳಿದ್ದಾರೆ. ‘ಆಪ್ತರಕ್ಷಕ ಎಂದರೆ ಅದು ಕೇವಲ ಟೈಟಲ್​ ಅಲ್ಲ. ಅದು ಅವರ ನೇಚರ್​’ ಎಂದು ರಮೇಶ್​ ಅರವಿಂದ್​ ದನಿಗೂಡಿಸಿದ್ದಾರೆ. ಈ ಎಪಿಸೋಡ್​ ನೋಡಲು ವಿಷ್ಣುವರ್ಧನ್​ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ಜೀವ ಕೊಟ್ಟ ಎರಡನೇ ತಾಯಿಯನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ಭೇಟಿಯಾದ ಡಾಲಿ

‘ಆಪ್ತಮಿತ್ರ’ ಸಿನಿಮಾದಲ್ಲಿ ಅವಿನಾಶ್​, ವಿಷ್ಣುವರ್ಧನ್​ ಹಾಗೂ ರಮೇಶ್​ ಅವರು ತೆರೆ ಹಂಚಿಕೊಂಡಿದ್ದರು. 2010ರಲ್ಲಿ ಬಂದ ‘ಆಪ್ತರಕ್ಷಕ’ ಚಿತ್ರದಲ್ಲೂ ಅವಿನಾಶ್​ ಮತ್ತು ವಿಷ್ಣುವರ್ಧನ್​ ನಟಿಸಿದ್ದರು. ಅದು ವಿಷ್ಣು ಅಭಿನಯದ ಕೊನೇ ಸಿನಿಮಾ. ಇಂದಿಗೂ ಅವರನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:15 pm, Fri, 21 April 23

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ