Manju Pavagada: ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆದ ಮಂಜು ಪಾವಗಡ

ಬಿಗ್​ ಬಾಸ್​ ಮನೆಯಲ್ಲಿ ತಾವು ನಂಬುವ ದೇವರ ಬಗ್ಗೆ ಹೇಳಿಕೊಳ್ಳುವ ಅವಕಾಶ ನೀಡಲಾಗಿತ್ತು. ಈ ವೇಳೆ ಮಂಜು ಪಾವಗಡ ಅವರು ಧರ್ಮಸ್ಥಳದ ಮಂಜುನಾಥನ ಬಗ್ಗೆ ಹೇಳಿಕೊಂಡಿದ್ದರು. 

Manju Pavagada: ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆದ ಮಂಜು ಪಾವಗಡ
Updated By: ರಾಜೇಶ್ ದುಗ್ಗುಮನೆ

Updated on: Aug 24, 2021 | 6:16 PM

ಮಂಜು ಪಾವಗಡ ಅವರು ಧರ್ಮಸ್ಥಳದ ಮಂಜುನಾಥ ದೇವರನ್ನು ಅಪಾರವಾಗಿ ನಂಬುತ್ತಾರೆ. ಈ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲೂ ಹೇಳಿಕೊಂಡಿದ್ದರು. ‘ಕನ್ನಡ ಬಿಗ್ ಬಾಸ್​ ಸೀಸನ್​ 8’ ವಿನ್​ ಆದ ನಂತರದಲ್ಲಿ ಮಂಜು ಧರ್ಮಸ್ಥಳಕ್ಕೆ ತೆರಳಿದ್ದಾರೆ. ತಮ್ಮಿಷ್ಟದ ದೇವರ ದರ್ಶನವನ್ನು ಮಾಡಿ ಅವರು ಆಶೀರ್ವಾದ ಪಡೆದಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ತಾವು ನಂಬುವ ದೇವರ ಬಗ್ಗೆ ಹೇಳಿಕೊಳ್ಳುವ ಅವಕಾಶ ನೀಡಲಾಗಿತ್ತು. ಈ ವೇಳೆ ಮಂಜು ಪಾವಗಡ ಅವರು ಧರ್ಮಸ್ಥಳದ ಮಂಜುನಾಥನ ಬಗ್ಗೆ ಹೇಳಿಕೊಂಡಿದ್ದರು. ‘ನಾನು ತುಂಬಾ ಇಷ್ಟಪಡೋ ದೇವರು ಅಂದರೆ ಅದು ಧರ್ಮಸ್ಥಳದ ಮಂಜುನಾಥೇಶ್ವರ. ನಾನು ಚಿಕ್ಕವನಿದ್ದಾಗ ನನ್ನ ತಂದೆ ಗುಡಿಸಲಲ್ಲಿ ನನಗೆ ಹೆಸರಿಡಬೇಕು ಎಂದು ಕಡ್ಲೆ ಸಕ್ಕರೆ ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡಿದ್ದರು. ಆದರೆ, ಅದು ಕಳ್ಳತನವಾಗಿತ್ತು. ಆಗ ನನಗೆ ಅನಾರೋಗ್ಯ ಕಾಡಿತ್ತು. ಕೋಮಾ ಸ್ಟೇಜ್​ನಲ್ಲಿದ್ದೆ. ಆಗ ನನ್ನ ತಂದೆ ಧರ್ಮಸ್ಥಳಕ್ಕೆ ಹೋಗಿದ್ರು. ಅಲ್ಲಿ ತೀರ್ಥ ಕುಡಿಸಿದಮೇಲೆ ಸರಿ ಆದೆ. ಹೀಗಾಗಿ ಮೊದಲನೆಯದಾಗಿ ಮತ್ತು ಕೊನೆಯದಾಗಿ ನೆನಪಾಗೋದು ಧರ್ಮಸ್ಥಳವೇ’ ಎಂದು ಮಂಜು ಪಾವಗಡ ಹೇಳಿದ್ದರು.

ಈ ಕಾರಣಕ್ಕೆ ಮಂಜು ಅವರು ತಂದೆ-ತಾಯಿ ಜತೆ ಧರ್ಮಸ್ಥಳಕ್ಕೆ ತೆರಳಿದ್ದಾರೆ. ದೇವರ ದರ್ಶನ ಪಡೆದ ನಂತರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಂಜು ಪಾವಗಡ ಬಿಗ್​ ಬಾಸ್​ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಅವರು ಹುಟ್ಟೂರಾದ ಪಾವಗಡಕ್ಕೆ ಇತ್ತೀಚೆಗೆ ತೆರಳಿದ್ದರು. ಈ ವೇಳೆ ಹೂವನ್ನು ಸುರಿದು ಅವರಿಗೆ ಸ್ವಾಗತಿಸಲಾಗಿತ್ತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈಗ ಮಂಜು ಬಿಡುವು ಮಾಡಿಕೊಂಡು ಧರ್ಮಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ನಿಮ್ಮದು ಸುದೀಪ್​ ಜಾತಿಯೇ ಆಗಿದ್ರಿಂದ ಬಿಗ್​ಬಾಸ್​ ಟ್ರೋಫಿ ಸಿಕ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಮಂಜು ಪಾವಗಡ

Published On - 5:30 pm, Tue, 24 August 21