AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ಆಟದ ಸ್ವರೂಪ ಬದಲಾಗುತ್ತಿದೆ. ಈ ಬಾರಿ ಯಾರು ವಿನ್​ ಆಗುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರು ಆಗಿದೆ.

BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?
ಮಂಜು ಪಾವಗಡ - ಶಮಂತ್​ ಬ್ರೋ ಗೌಡ
ಮದನ್​ ಕುಮಾರ್​
|

Updated on: Mar 22, 2021 | 12:11 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಹಣಾಹಣಿ ನಾಲ್ಕನೇ ವಾರಕ್ಕೆ ಮುಂದುವರಿದಿದೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇ ವಾರ ನಟಿ ಗೀತಾ ಭಾರತಿ ಭಟ್​ ಎಲಿಮಿನೇಟ್ ಆದರು. ಸದ್ಯ 14 ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲರೂ ತಮ್ಮದೇ ಸ್ಟ್ರ್ಯಾಟಜಿಗಳ ಮೂಲಕ ಆಟ ಮುಂದುವರಿಸಿದ್ದಾರೆ. ಅಂತಿಮವಾಗಿ ಯಾರು ವಿನ್​ ಆಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.

ಮುಂದಿನ ವಾರ ಶಮಂತ್​ ಬ್ರೋ ಗೌಡ ಔಟ್​ ಆಗುತ್ತಾರೆ. ಫಿನಾಲೆಯಲ್ಲಿ ಮಂಜು ಪಾವಗಡ ವಿನ್ನರ್​ ಆಗುತ್ತಾರೆ ಎಂದು ಭವಿಷ್ಯ ನುಡಿಯಲಾಗಿದೆ. ಅಂದಹಾಗೆ, ಈ ರೀತಿ ಭವಿಷ್ಯ ನುಡಿದಿರುವುದು ಗೀತಾ ಭಾರತಿ ಭಟ್​! ಮಾ.21ರಂದು ಗೀತಾ ಎಲಿಮಿನೇಟ್​ ಆದರು. ನಂತರ ವೇದಿಕೆಗೆ ಬಂದು ಕಿಚ್ಚ ಸುದೀಪ್​ ಜೊತೆ ಅವರು ಕೆಲವು ನಿಮಿಷ ಮಾತನಾಡಿದರು.

ಈ ವೇಳೆ ಗೀತಾಗೆ ಸುದೀಪ್​ ಒಂದು ಪ್ರಶ್ನೆ ಕೇಳಿದ್ದಾರೆ. ಮುಂದಿನ ವಾರ ಹೊರಬರುವುದು ಯಾರು ಹಾಗೂ ಅಂತಿಮವಾಗಿ ವಿನ್​ ಆಗುವುದು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ, ಶಮಂತ್​ ಔಟ್​ ಆಗುತ್ತಾರೆ, ಮಂಜು ವಿನ್​ ಆಗುತ್ತಾರೆ ಎಂದು ಗೀತಾ ಹೇಳಿದ್ದಾರೆ. ಅವರು ಹೇಳಿದ್ದು ನಿಜವಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಬಿಗ್​ ಬಾಸ್​ ವೀಕ್ಷಕರಲ್ಲಿ ಮನೆ ಮಾಡಿದೆ.

ಮೂರು ವಾರಗಳ ಕಾಲ ಪೈಪೋಟಿ ನೀಡಿದ ಗೀತಾ ದೊಡ್ಮನೆಯಲ್ಲಿ ಆಗಾಗ ಕಣ್ಣೀರು ಹಾಕುತ್ತಿದ್ದರು. ಅದು ಕೆಲವರಿಗೆ ಕಿರಿಕಿರಿ ಉಂಟುಮಾಡಿತ್ತು. ಅನೇಕ ವಿಚಾರಗಳಿಗೆ ಗೀತಾ ಸಹಜವಾಗಿಯೇ ಎಮೋಷನಲ್​ ಆಗುತ್ತಿದ್ದರು. ಆದರೆ ಅದನ್ನು ಮೊಸಳೆ ಕಣ್ಣೀರು ಎಂದು ಹೇಳಲಾಯಿತು. ಅದೇನೇ ಇದ್ದರೂ ಎಲಿಮಿನೇಟ್​ ಆದಾಗ ಮಾತ್ರ ಗೀತಾ ನಗುಮೊಗದಿಂದಲೇ ಮನೆಯಿಂದ ಹೊರಬಂದಿದ್ದಾರೆ. ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಮತ್ತು ಶಮಂತ್​ ತಲೆ ಮೇಲೆ ತೂಗುಗತ್ತಿ ಇತ್ತು. ಶಮಂತ್​ ಅವರೇ ಔಟ್​ ಆಗುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ ಅಂತಿಮವಾಗಿ ಗೀತಾಗೆ ಅದೃಷ್ಟ ಕೈಕೊಟ್ಟಿತು.

‘ಬ್ರಹ್ಮಗಂಟು’ ಸೀರಿಯಲ್​ ಮೂಲಕ ಅವರು ರಾಜ್ಯಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಈಗ ಬಿಗ್​ ಬಾಸ್​ನಿಂದಾಗಿ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಗೀತಾ ಮುಂದಿನ ಪಯಣ ಹೇಗಿರಲಿದೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಿಗಿದೆ.

ಇದನ್ನೂ ಓದಿ: Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ

Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್​ ಬಾಸ್​ ರಾಜೀವ್​! ಕಾರಣ ಏನು?

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?