AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’; ಪ್ರೇರಣಾಗೆ ಅಭಿನವ್​ ಹೀಗೆ ಶಾಪ ಹಾಕಿದ್ದೇಕೆ?

ಅಭಿನವ್​ ಹಾಗೂ ಪ್ರೇರಣಾ ಇಬ್ಬರೂ ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಸ್ಪರ್ಧಿಗಳಾಗಿ ತೆರಳಿದ್ದಾರೆ. 17 ಸ್ಪರ್ಧಿಗಳು ಆರು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇರಲಿದ್ದು ಸ್ಪರ್ಧಿಗಳನ್ನು ರಂಜಿಸಲಿದ್ದಾರೆ

‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’; ಪ್ರೇರಣಾಗೆ ಅಭಿನವ್​ ಹೀಗೆ ಶಾಪ ಹಾಕಿದ್ದೇಕೆ?
‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’; ಪ್ರೇರಣಾಗೆ ಅಭಿನವ್​ ಹೀಗೆ ಶಾಪ ಹಾಕಿದ್ದೇಕೆ?
TV9 Web
| Edited By: |

Updated on: Aug 14, 2021 | 8:01 PM

Share

ಅಭಿನವ್​ ಅವರು ಅಗಸ್ತ್ಯ ಪಾತ್ರದ ಮೂಲಕ ಹೆಚ್ಚು ಗುರುತಿಸಿಕೊಂಡವರು. ನನ್ನರಸಿ ರಾಧೆ ಧಾರಾವಾಹಿ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಈ ಮಧ್ಯೆ ಅವರು ಕಿರುತೆರೆ ನಟಿ ಪ್ರೇರಣಾಗೆ ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ ಎಂದು ಶಾಪ ಹಾಕಿದ್ದಾರೆ. ಅಷ್ಟಕ್ಕೂ ಅಭಿನವ್​ ಹೀಗೆ ಹೇಳೋಕೆ ಕಾರಣವೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಭಿನವ್​ ಹಾಗೂ ಪ್ರೇರಣಾ ಇಬ್ಬರೂ ಬಿಗ್​ ಬಾಸ್​ ಮಿನಿ ಸೀಸನ್​ನಲ್ಲಿ ಸ್ಪರ್ಧಿಗಳಾಗಿ ತೆರಳಿದ್ದಾರೆ. 17 ಸ್ಪರ್ಧಿಗಳು ಆರು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇರಲಿದ್ದು ಸ್ಪರ್ಧಿಗಳನ್ನು ರಂಜಿಸಲಿದ್ದಾರೆ. ಇಂದು (ಆಗಸ್ಟ್​ 14) ಬಿಗ್​ ಬಾಸ್​ ಆರಂಭಗೊಂಡಿದೆ. ಎಲ್ಲಾ ಸ್ಪರ್ಧಿಗಳು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದಾರೆ. ಅದರಲ್ಲಿ ಅಭಿನವ್ ಹಾಗೂ ಪ್ರೇರಣಾ ಕೂಡ ಇದ್ದಾರೆ.

ಸ್ಪರ್ಧಿಗಳಿಗೆ ಬಿಗ್​ ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದರು. ಇದರನ್ವಯ ‘ಬಿಗುಮಾನ ಬಿಟ್ಟರೆ ಬಿದರಕ್ಕಿಯೂ ಚಿನ್ನವಾಗಬಹುದು​’ ಎನ್ನುವ ಮಾತನ್ನು ಅಕುಲ್ ಕೌಸ್ತುಭಗೆ ಹೇಳಿದರು. ಈ ಮಾತನ್ನು ಕೌಸ್ತುಭ ಅವರು ತಮ್ಮ ಮುಂದಿನ ಸ್ಪರ್ಧಿಗೆ ಹೇಳಬೇಕು. ಈ ಸರ್ಕಲ್​ ಸಾಗಿಯೇ ಇತ್ತು.

ಬಿಗ್​ ಬಾಸ್​ ಮನೆಗೆ ಕಿರುತೆರೆ ನಟಿ ಪ್ರೇರಣಾ ಅವರು ಆಗಮಿಸಿದರು. ಅವರ ಕಿವಿಗೆ ಈ ಸಾಲನ್ನು ಹೇಳಲಾಯಿತು. ಅವರು ಇದನ್ನು ‘ನನ್ನರಸಿ ರಾಧೆ’ ಧಾರಾವಾಹಿ ನಟ ಅಭಿನವ್​​ಗೆ ಹೇಳಬೇಕಿತ್ತು. ಪ್ರೇರಣಾಗೆ ಈ ಸಾಲುಗಳು ಮರೆತೇ ಹೋಗಿದ್ದವು. ಹೀಗಾಗಿ, ಈ ಸಾಲುಗಳನ್ನು ಬಾಯಿಗೆ ಬಂದಂತೆ ಹೇಳಿದ್ದರು. ಇದು ಅಭಿನವ್​ಗೆ ಕೇಳಿಲ್ಲ. ಈ ಕಾರಣಕ್ಕೆ, ‘ಕರ್ಮ ನಿಮ್ಮನ್ನು ಖಂಡಿತವಾಗಿಯೂ ಕಾಡುತ್ತೆ’ ಎಂದು ಶಾಪ ಹಾಕಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಂಡ ಬೆನ್ನಲ್ಲೇ ಮಿನಿ ಬಿಗ್​ ಬಾಸ್​ ಆರಂಭವಾಗಿದೆ. ಕಲರ್ಸ್​ ಕನ್ನಡ ವಾಹಿನಿ ಸೀರಿಯಲ್​ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿರೋದು ವಿಶೇಷ. ಕೊನೆಯ ಎಪಿಸೋಡ್​ಅನ್ನು ಕಿಚ್ಚ ಸುದೀಪ್​ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: ‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್​ ಪಾಯಿಂಟ್​ ಏನು? ಬಿಗ್​ ಬಾಸ್​ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ