AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ

‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರೋಮೋ ತುಂಬ ಇಂಟರೆಸ್ಟಿಂಗ್​ ಆಗಿ ಮೂಡಿಬಂದಿದೆ. ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ರಚಿತಾ ರಾಮ್​ ಹಂಚಿಕೊಂಡಿದ್ದಾರೆ.

ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ
ರಚಿತಾ ರಾಮ್, ಲಕ್ಷ್ಮೀ
TV9 Web
| Edited By: |

Updated on: Mar 12, 2022 | 12:02 PM

Share

ಶೂಟಿಂಗ್​ ಸಲುವಾಗಿ ಸ್ಟುಡಿಯೋಗೆ ತೆರಳಲು ನಟಿ ರಚಿತಾ ರಾಮ್​ (Rachita Ram) ಅವರು ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಸ್ಟುಡಿಯೋಗೆ ತೆರಳುವಂತೆ ಡ್ರೈವರ್​ಗೆ ಸೂಚಿಸುತ್ತಾರೆ. ಆಗ ಅವರಿಗೆ ಶಾಕ್​ ಎದುರಾಗುತ್ತದೆ. ಹಿಂಬದಿಯ ಸೀಟ್​ನಲ್ಲಿ ಕುಳಿತುಕೊಂಡ ಇಬ್ಬರು ಗನ್​ ತೋರಿಸುತ್ತಾರೆ. ‘ಏ ಹುಡುಗಿ.. ನೀನು ಎಲ್ಲಿ ಹೋಗಬೇಕು ಅಂತ ನಾವು ಡಿಸೈಡ್​ ಮಾಡ್ತೀವಿ’ ಅಂತ ಬೆದರಿಸುತ್ತಾರೆ. ಇದೆಲ್ಲ ಏನು ಎಂಬಂತೆ ಡ್ರೈವರ್ ಕಡೆಗೆ ರಚಿತಾ ಪ್ರಶ್ನೆ ಎಸೆಯುತ್ತಾರೆ. ಡ್ರೈವರ್ ಕೆಕ್ಕರಿಸಿ ನೋಡುತ್ತಾನೆ. ಆಗ ಶುರುವಾಗುತ್ತದೆ ರಚಿತಾಗೆ ಅಸಲಿ ಸಂಕಟ. ಅಷ್ಟು ಹೊತ್ತಿಗಾಗಲೇ ಅವರು ಅಪಹರಣಕಾರರ ಹಿಡಿತದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಖಚಿತವಾಗುತ್ತದೆ. ಅವರನ್ನು ಸ್ಟುಡಿಯೋ ಬದಲಿಗೆ ಏರ್​ಪೋರ್ಟ್​ಗೆ ಕರೆದುಕೊಂಡು ಹೋಗಲಾಗುತ್ತದೆ. ಇದು ರಚಿತಾ ರಾಮ್​ ಕಿಡ್ನಾಪ್​ ಆಗುವ ದೃಶ್ಯ. ಹಾಗಂತ ಅವರು ನಿಜವಾಗಿಯೂ ಅಪಹರಣಕ್ಕೆ ಒಳಗಾಗಿಲ್ಲ. ಇದೊಂದು ಡ್ರಾಮಾ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಆಗಲಿರುವ ‘ಡ್ರಾಮಾ ಜ್ಯೂನಿಯರ್ಸ್​ 4’  (Drama Juniors 4) ಕಾರ್ಯಕ್ರಮದ ಪ್ರೋಮೋ. ಈ ಹಿಂದೆ ನಟ ರವಿಚಂದ್ರನ್​ ಅವರನ್ನು ಮಕ್ಕಳು ಕಿಡ್ನಾಪ್​ ಮಾಡುವ ರೀತಿಯಲ್ಲಿ ಪ್ರೋಮೋ ತಯಾರಿಸಲಾಗಿತ್ತು. ಈಗ ಅದೇ ರೀತಿ ರಚಿತಾ ರಾಮ್​ ಕಿಡ್ನಾಪ್​ ಕಹಾನಿಯನ್ನು ಜನರ ಮುಂದೆ ಇರಿಸಲಾಗಿದೆ.

ಅಪಹರಣಕಾರರ ಕೈಗೆ ಸಿಕ್ಕ ರಚಿತಾ ರಾಮ್​ ಅವರು ವಿಮಾನಕ್ಕೆ ಬರುತ್ತಾರೆ. ಅಲ್ಲಿ ಬರೀ ಮಕ್ಕಳದ್ದೇ ಸಾಮ್ರಾಜ್ಯ. ‘ನನ್ನನ್ನು ಯಾರೋ ಕಿಡ್ಯಾಪ್​ ಮಾಡಿದ್ದಾರೆ. ದಯವಿಟ್ಟು ಸಹಾಯ ಮಾಡಿ..’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಬಳಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗುವುದಿಲ್ಲ. ಕಡೆಗೂ ವಿಮಾನದ ಒಳಗೆ ಬಂದು ಕುಳಿತಾಗ ಅಲ್ಲಿ ರವಿಚಂದ್ರನ್​ ಕೂತಿರುತ್ತಾರೆ. ‘ಖ್ಯಾತ ನಟ ರವಿಚಂದ್ರನ್​ ಅಪಹರಣ’ ಎಂದು ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಅವರು ಓದುತ್ತ ಕುಳಿತಿರುತ್ತಾರೆ. ‘ಇದೆಲ್ಲ ಇವನದ್ದೇ ಕೆಲಸ’ ಎಂದು ಮಾಸ್ಟರ್​ ಆನಂದ್​ ಕಡೆಗೆ ರವಿಚಂದ್ರನ್​ ಕೈ ತೋರಿಸುತ್ತಾರೆ. ‘ಇದರಲ್ಲಿ ನಂದೇನೂ ಇಲ್ಲ. ಎಲ್ಲಾ ಪ್ಲಾನ್​ ನಮ್​ ಬಾಸ್​ ಅವರದ್ದೇ’ ಅಂತ ಆನಂದ್​ ಜಾರಿಕೊಂಡಾಗ ಹಿರಿಯ ನಟಿ ಲಕ್ಷ್ಮೀ ಎಂಟ್ರಿ ಆಗುತ್ತದೆ.

‘ಈ ಸೀಸನ್​ನಲ್ಲಿ ನಮ್ಮ ಜೊತೆ ಸೇರಿದ್ದಕ್ಕೆ ತುಂಬ ಸಂತೋಷ. ಈಗ ಆರಾಮಾಗಿ ಕುಳಿತುಕೊಳ್ಳಿ. ಮುಂದೆ ಮಾತಾಡೋಕೆ ಇನ್ನೂ ತುಂಬಾ ಇದೆ. ಈಗ ಜರ್ನಿ ಶುರು ಮಾಡೋಣ’ ಎಂದು ಲಕ್ಷ್ಮೀ ಹೇಳುತ್ತಾರೆ. ಈ ರೀತಿ ತುಂಬ ಇಂಟರೆಸ್ಟಿಂಗ್​ ಆಗಿ ‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರೋಮೋ ಮೂಡಿಬಂದಿದೆ. ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ರಚಿತಾ ರಾಮ್​ ಹಂಚಿಕೊಂಡಿದ್ದಾರೆ.

ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್​ 4’ ಪ್ರಸಾರ ಶುರು ಆಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30 ಬಿತ್ತರ ಆಗುವ ಈ ಶೋ ನೋಡಲು ವೀಕ್ಷಕರು ಕಾದಿದ್ದಾರೆ. ಪ್ರೋಮೋ ನೋಡಿದ ಬಳಿಕ ವೀಕ್ಷಕರ ಕೌತುಕ ಹೆಚ್ಚಿದೆ. ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇರುತ್ತದೆ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ಒದಗಿಸಿದೆ. ಇದೇ ಮೊದಲ ಬಾರಿಗೆ ‘ಡ್ರಾಮಾ ಜ್ಯೂನಿಯರ್ಸ್’ ಜಡ್ಜ್​ ಸ್ಥಾನಕ್ಕೆ ರವಿಚಂದ್ರನ್​ ಮತ್ತು ರಚಿತಾ ರಾಮ್​ ಆಗಮಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:

‘ಮ್ಯಾಟ್ನಿ’ ಶೂಟಿಂಗ್​ ಸೆಟ್​​ನಲ್ಲಿ ಸತೀಶ್​ ‘ನೀನಾಸಂ’, ರಚಿತಾ ರಾಮ್​; ಇಲ್ಲಿವೆ ಫೋಟೋಗಳು

‘ಅಮ್ಮ ಇಲ್ಲದಿದ್ದರೆ ಎಷ್ಟು ಕಷ್ಟ ಅಂತ ನಮಗೆ ಗೊತ್ತು’: ರವಿಚಂದ್ರನ್​ ತಾಯಿಯ ಅಂತಿಮ ದರ್ಶನ ಪಡೆದ ರಾಘಣ್ಣ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?