‘ನಾನು ಇಲ್ಲಿ ಬಂದು ತಪ್ಪು ಮಾಡಿದೆ’; ಎರಡನೇ ವಾರಕ್ಕೆ ಸಂಗೀತಾಗೆ ಬಿಗ್ ಬಾಸ್ ಸಾಕಾಯ್ತು  

|

Updated on: Oct 19, 2023 | 8:44 AM

Sangeetha Sringeri: ‘ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಇದು ನನ್ನ ತಪ್ಪು ನಿರ್ಧಾರ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಅನುಭವಿಸೋದು ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ಸಂಗೀತಾ.

‘ನಾನು ಇಲ್ಲಿ ಬಂದು ತಪ್ಪು ಮಾಡಿದೆ’; ಎರಡನೇ ವಾರಕ್ಕೆ ಸಂಗೀತಾಗೆ ಬಿಗ್ ಬಾಸ್ ಸಾಕಾಯ್ತು   
ಸಂಗೀತಾ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಲವು ಸ್ಪರ್ಧಿಗಳ ಮಧ್ಯೆ ದ್ವೇಷ ಹುಟ್ಟಿಕೊಂಡಿದೆ. ಯಾರು ಟಾಪ್ ಐದರಲ್ಲಿ ಇರಬಹುದು ಎಂಬುದನ್ನು ಊಹಿಸೋಕೆ ಕಷ್ಟ ಆಗುತ್ತಿದೆ. ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಈ ಮಧ್ಯೆ ಸಂಗೀತಾಗೆ ಎರಡನೇ ವಾರಕ್ಕೆ ಬಿಗ್ ಬಾಸ್ (Bigg Boss) ಸಾಕಾಗಿದೆ. ವಿನಯ್ ಹಾಗೂ ಅವರ ಮಧ್ಯೆ ಮೂಡಿರುವ ದ್ವೇಷದ ಜ್ವಾಲೆ ಇದಕ್ಕೆ ಕಾರಣ ಎಂದು ಅನೇಕರು ಊಹಿಸಿದ್ದಾರೆ. ಬಿಗ್ ಬಾಸ್ ನೀಡುತ್ತಿರುವ ಶಿಕ್ಷೆಗೂ ಅವರು ಹೆದರಿದ್ದಾರೆ.

ಬಿಗ್ ಬಾಸ್​ನಲ್ಲಿ ಎರಡು ತಂಡ ಮಾಡಲಾಗಿದೆ. ಒಂದು ತಂಡಕ್ಕೆ ಕಾರ್ತಿಕ್ ಹಾಗೂ ಮತ್ತೊಂದು ತಂಡಕ್ಕೆ ವಿನಯ್ ಕ್ಯಾಪ್ಟನ್. ಕಾರ್ತಿಕ್ ತಂಡದಲ್ಲಿ ಸಂಗೀತಾ ಇದ್ದಾರೆ. ಟಾಸ್ಕ್​ನಲ್ಲಿ ಕಾರ್ತಿಕ್ ತಂಡ ಸೋತಿದ್ದರಿಂದ ಅವರಲ್ಲಿ ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ವಿನಯ್ ತಂಡದವರು ಸಂಗೀತಾ ಅವರನ್ನು ಶಿಕ್ಷೆಗೆ ಆಯ್ಕೆ ಮಾಡಿದರು. ಶಿಕ್ಷೆಯಾಗಿ ಸಗಣಿ ನೀರಲ್ಲಿ ಸ್ನಾನ ಮಾಡಿಸಲಾಯಿತು. ಇದಲ್ಲದೆ ವಿನಯ್ ಜೊತೆ ಜಗಳ ಕೂಡ ಆಗಿದೆ. ಇದು ಸಂಗೀತಾಗೆ ಸಾಕಷ್ಟು ಬೇಸರ ಮೂಡಿಸಿದೆ.

ಮಧ್ಯರಾತ್ರಿ ಸಂಗೀತಾ ಹಾಗೂ ಕಾರ್ತಿಕ್ ಮಾತನಾಡುತ್ತಿದ್ದರು. ಈ ವೇಳೆ ಸಂಗೀತಾ ಕಣ್ಣೀರು ಹಾಕಿದ್ದಾರೆ. ‘ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಇದು ನನ್ನ ತಪ್ಪು ನಿರ್ಧಾರ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಅನುಭವಿಸೋದು ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ಸಂಗೀತಾ.

ಇದನ್ನೂ ಓದಿ: ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ

ಮರುದಿನ ಕಾರ್ತಿಕ್ ಅವರು ಸಂಗೀತಾ ಅವರನ್ನು ಮಾತನಾಡಿಸಿದ್ದಾರೆ. ‘ಈಗ ಬೆಟರ್ ಎನಿಸುತ್ತಿದೆ. ಆದರೆ, ಹೊರ ಹೊಗಲೇಬೇಕು ಎನಿಸುತ್ತಿದೆ’ ಎಂದಿದ್ದಾರೆ. ‘ಅಯ್ಯೋ ಹೀಗೆ ಹೇಳಬೇಡ. ಕುಳಿತು ಮಾತನಾಡೋ. ಎಲ್ಲವೂ ಸರಿ ಆಗುತ್ತದೆ’ ಎಂದು ಬುದ್ಧಿವಾದ ಹೇಳಿದ್ದಾರೆ ಕಾರ್ತಿಕ್. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ನೋಡಲು ಅವಕಾಶ ಇದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Thu, 19 October 23