ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ

Bigg Boss: ಕಾರ್ತಿಕ್ ಹಾಗೂ ಸಂಗೀತಾರ ಆಟದ ಮೇಲೆ ಅವರ ಗೆಳೆತನ ಪ್ರಭಾವ ಬೀರುತ್ತಿದೆಯೇ? ಕಾರ್ತಿಕ್ ತಮ್ಮ ಸಹಜ ವ್ಯಕ್ತಿತ್ವ ಪ್ರದರ್ಶಿಸಲು ಸಂಗೀತಾರ ಗೆಳೆತನ ಅಡ್ಡಿ ಮಾಡುತ್ತಿದ್ದೆಯೇ?

ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ
Follow us
|

Updated on:Oct 18, 2023 | 11:37 PM

ಬಿಗ್​ಬಾಸ್ 10 (Bigg Boss) ಮನೆ ತುಸು ಹೆಚ್ಚೇ ಬಿಸಿಯಾಗಿದೆ. ಮನೆಯಲ್ಲಿ ಈಗಾಗಲೇ ಎರಡು ಬಣಗಳಾಗಿದ್ದು, ಪರಸ್ಪರ ಟಾಸ್ಕ್​ನ ಜೊತೆಗೆ ಕಾಳಗಗಳೂ ನಡೆದಿವೆ. ಪ್ರಸ್ತುತ ಆಗಿರುವ ಎರಡು ತಂಡಗಳಲ್ಲಿ ಒಂದನ್ನು ವಿನಯ್ ಮುನ್ನಡೆಸುತ್ತಿದ್ದರೆ ಮತ್ತೊಂದನ್ನು ಕಾರ್ತಿಕ್ ಮುನ್ನಡೆಸುತ್ತಿದ್ದಾರೆ. ಆದರೆ ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನಡೆ ಆಗುತ್ತಿದೆ ಎಂದು ಮನೆಯಲ್ಲಿರುವ ಕೆಲ ಸದಸ್ಯರ ಆರೋಪ.

ಬಿಗ್​ಬಾಸ್ ಆರಂಭವಾದಾಗಿನಿಂದಲೂ ಸಂಗೀತಾ ಹಾಗೂ ಕಾರ್ತಿಕ್ ಪರಸ್ಪರ ಹತ್ತಿರದ ಗೆಳೆಯರು. ಗೆಳೆತನವನ್ನು ಮೀರಿದ ನಂಟು ಆ ಇಬ್ಬರಲ್ಲಿ ಇದೆ ಎಂಬುದು ಪ್ರೇಕ್ಷಕರಿಗೂ ಇರುವ ಗುಮಾನಿ, ಅಷ್ಟು ಹತ್ತಿರ ಸಂಗೀತಾ ಹಾಗೂ ಕಾರ್ತಿಕ್. ಸಂಗೀತಾರನ್ನು ನಾಮಿನೇಷನ್​ನಿಂದ ಉಳಿಸಲು ಕಾರ್ತಿಕ್ ಅಖಾಡಕ್ಕೂ ಇಳಿದಿದ್ದರು. ಸಂಗೀತಾ ಸಹ ಕಾರ್ತಿಕ್ ಪರ ವಹಿಸಿ ಹಲವು ಬಾರಿ ಇತರರೊಂದಿಗೆ ಮಾತನಾಡಿದ್ದೂ ಇದೆ.

ಇದನ್ನೂ ಓದಿ:ಬಿಗ್​ಬಾಸ್ 10ರ ‘ಹೀರೋ’ ಸಂಗೀತಾ ಶೃಂಗೇರಿ ಯಾರು? ಅವರ ಹಿನ್ನೆಲೆ ಏನು?

ಇದೀಗ ಕಾರ್ತಿಕ್ ನಾಯಕನಾಗಿದ್ದು, ಕಾರ್ತಿಕ್ ತಂಡದಲ್ಲಿ ಸಂಗೀತಾ ಸಹ ಇದ್ದಾರೆ. ಇದರ ನಡುವೆ ವಿನಯ್ ಹಾಗೂ ಸಂಗೀತಾ ನಡುವೆ ಆರಂಭದಿಂದಲೂ ನಡೆದು ಬರುತ್ತಿರುವ ಜಗಳ ಇದೀಗ ಇನ್ನೂ ಹೆಚ್ಚಾಗಿದೆ. ವಿನಯ್ ನನ್ನನ್ನು ಬೇಕೆಂದೇ ಟಾರ್ಗೆಟ್ ಮಾಡುತ್ತಿದ್ದಾನೆಂದು ಸಂಗೀತಾ ಪದೇ ಪದೇ ಕಾರ್ತಿಕ್ ಬಳಿ ದೂರು ಹೇಳಿದ್ದಾರೆ. ಕಾರ್ತಿಕ್ ಸಹ ಈ ವಿಷಯವಾಗಿ ವಿನಯ್ ಬಳಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಬಹುತೇಕ ವಿಫಲವಾಗಿದ್ದಾರೆ.

ಇವುಗಳ ನಡುವೆ ವಿನಯ್, ಸೂಚ್ಯವಾಗಿ ಕಾರ್ತಿಕ್​ಗೆ ಬುದ್ಧಿವಾದ ಹೇಳಿದ್ದು, ಇಲ್ಲಿ ಆಟ ಆಡಲು ಬಂದಿದ್ದೀಯ? ಬೇರೆ ಏನೋ ಆಗಲು ಅಥವಾ ಮಾಡಲು ಅಲ್ಲ. ನೀನು ಹೀಗಿರಲಿಲ್ಲ ಎಂಬಿತ್ಯಾದಿಯಾಗಿ ಹೇಳಿದ್ದು, ಸೂಚ್ಯವಾಗಿ ನೀನು ಸಂಗೀತಾ ಪ್ರಭಾವದಲ್ಲಿದ್ದೀಯ, ಸಂಗೀತಾರನ್ನು ಮೆಚ್ಚಿಸಲು ಹೆಚ್ಚು ಗಮನ ವಹಿಸುತ್ತಿದ್ದೀಯ ಎಂದಿದ್ದಾರೆ. ವಿನಯ್ ಮಾತು ಅರ್ಥವಾದರೂ ಅರ್ಥವಾದಂತಿದ್ದಾರೆ ಕಾರ್ತಿಕ್.

ಇನ್ನು ತುಕಾಲಿ ಸಂತೋಶ್ ಅಂತೂ ಹಳ್ಳಿಕಾರ್ ಸಂತೋಶ್ ಬಳಿ, ”ನಿಮ್ಮ ತಂಡದ ಹೆಸರು ರಣಚಂಡಿ ಅಲ್ಲ ಬದಲಿಗೆ ‘ಅವಳ ನೆರಳು’ ಎಂದಾಗಬೇಕು. ಸಂಗೀತಾ ಹೇಳಿದಂತೆ ನಿಮ್ಮ ಕ್ಯಾಪ್ಟನ್ ಕಾರ್ತಿಕ್ ಕೇಳುತ್ತಾನೆ” ಎಂದಿದ್ದಾರೆ. ತುಕಾಲಿ ಸಂತೋಶ್ ಹೇಳಿದ ಮಾತನ್ನು ಹಳ್ಳಿಕಾರ್ ಸಂತೋಶ್ ಸಹ ಒಪ್ಪಿದ್ದಾರೆ. ಕಾರ್ತಿಕ್ ತಂಡದಿಂದ ವಿನಯ್ ತಂಡಕ್ಕೆ ಕಳಿಸಲ್ಪಟ್ಟ ಭಾಗ್ಯಶ್ರೀ ಸಹ ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ.

ಅಲ್ಲದೆ, ಕಾರ್ತಿಕ್ ಸಹ ಬಹುತೇಕ ನಿರ್ಣಯವನ್ನು ಸಂಗೀತಾರನ್ನು ಕೇಳಿಯೇ, ಸಂಗೀತಾರ ಮಾತಿನಂತೆಯೇ ತೆಗೆದುಕೊಂಡಿದ್ದಾರೆ ಸಹ. ಸಂಗೀತಾ ಹಾಗೂ ಕಾರ್ತಿಕ್ ಗೆಳೆತನ ಯಾರಿಗೆ ಸಹಾಯವಾಗಲಿದೆ, ಯಾರಿಗೆ ದುಬಾರಿಯಾಗಲಿದೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30 ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ದಿನದ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 pm, Wed, 18 October 23

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ