AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಬದುಕಿನ ಮುಗಿದು ಹೋದ ಅಧ್ಯಾಯಗಳನ್ನು ರಾಮ್ ಬಳಿ ಹಂಚಿಕೊಳ್ಳುತ್ತಾಳಾ ಸೀತಾ?

Seetha Raama Serial: ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಶ್ರೀರಾಮ, ಸೀತಾ ಬಳಿ ಅವಳ ಗಂಡನ ಬಗ್ಗೆ ಕೇಳುತ್ತಾನೆ. ಸತ್ಯ ಏನು ಎಂಬುದನ್ನು ರಾಮನಿಗೆ ಹೇಳುತ್ತಾಳಾ ಸೀತಾ? ಹಳೆ ಕಥೆ ತಿಳಿದುಕೊಳ್ಳುವಲ್ಲಿ ರಾಮ್ ಸಫಲನಾಗುತ್ತಾನಾ? ಕಾದು ನೋಡೋಣ.

Seetha Raama Serial: ಬದುಕಿನ ಮುಗಿದು ಹೋದ ಅಧ್ಯಾಯಗಳನ್ನು ರಾಮ್ ಬಳಿ ಹಂಚಿಕೊಳ್ಳುತ್ತಾಳಾ ಸೀತಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 31, 2023 | 11:03 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 34: ಸಿಹಿಯ ಸಣ್ಣ ಪುಟ್ಟ ತುಂಟಾಟ ರಾಮನನ್ನು ಚಿಕ್ಕ ಮಗುವಾಗಿಸುತ್ತದೆ. ಆಕೆಯ ತುಂಟಾಟ, ಅವಳ ಮಾತು ಎಲ್ಲವೂ ಅವನಿಗೆ ಖುಷಿ ಕೊಡುತ್ತದೆ. ಇದನ್ನೆಲ್ಲಾ ನೋಡುತ್ತಿದ್ದ ಸೀತಾ, ರಾಮನಿಗೆ ಅನೇಕ ಪ್ರಶ್ನೆಗಳ ಸುರಿಮಳೆಗೈಯುತ್ತಾಳೆ. ಹಳೆಯದನ್ನೆಲ್ಲಾ ಮರೆತು ಮುಂದೆ ಸಾಗಿ ಎನ್ನುತ್ತಾಳೆ. ರಾಮ ಅದೇ ಪ್ರಶ್ನೆಯನ್ನು ಸೀತಾಳಿಗೆ ಕೇಳುತ್ತಾನೆ. ಇಬ್ಬರ ಬಳಿಯಲ್ಲಿಯೂ ಅದಕ್ಕೆ ಸರಿಯಾದ ಉತ್ತರವಿಲ್ಲ. ಆದರೆ ಅವರಿಬ್ಬರು ಮಾತನಾಡುವ ರೀತಿ ಮಾತ್ರ ಸಿಹಿಗೆ ತುಂಬಾ ಖುಷಿ ಕೊಡುತ್ತದೆ.

ಸಿಹಿಯ ಜೊತೆ ಮಗುವಾದ ರಾಮ್

ಊಟವಾದ ಮೇಲೆ ರೆಸ್ಟೋರೆಂಟ್ ಬಿಲ್ ಪಾವತಿಸಲು ಕೂಡ ರಾಮ್ ಬಳಿ ಹಣವಿರುವುದಿಲ್ಲ. ಅವರ ಬಳಿ ತನ್ನದೇ ಟ್ರೀಟ್ ಅಂತಲೂ ಹೇಳಿದ್ದರಿಂದ ತುಂಬಾ ಮುಜುಗರವೆನಿಸುತ್ತದೆ. ಸೀತಾ ಮತ್ತು ಸಿಹಿಯ ಬಳಿ ಹೇಳಿಕೊಳ್ಳಲಾಗದೇ ಅಶೋಕನಿಗೆ ಬಿಲ್ ಕಟ್ಟು ಎಂದು ಸಂದೇಶ ಕಳುಹಿಸುತ್ತಾನೆ. ಜೊತೆಗೆ ಈ ಊಟ ಫ್ರೀ ಅಂತಲೂ ಹೇಳುವಂತೆ ಮಾಡು ಎನ್ನುತ್ತಾನೆ. ಅಶೋಕ್, ರಾಮ ಹೇಳಿದ ಮಾತನ್ನು ಚಾಚು ತಪ್ಪದೇ ಹಾಗೆಯೇ ಪಾಲಿಸುತ್ತಾನೆ. ಇನ್ನು ಊಟ ಮುಗಿಸಿ ಮೂವರು ಪಾರ್ಕ್ ಕಡೆ ಮುಖ ಮಾಡುತ್ತಾರೆ. ಸಿಹಿಯ ಜೊತೆ ಆಟವಾಡುತ್ತಾ ರಾಮನೂ ಅವಳ ಜೊತೆಯಲ್ಲಿಯೇ ಖುಷಿ ಪಡುತ್ತಾನೆ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಸೀತಾಳಿಗೂ ಧನ್ಯವಾದ ಹೇಳುತ್ತಾನೆ. ಇನ್ನು ಅವಳಿಗೂ ತನ್ನ ಮಗಳು ತುಂಬಾ ಖುಷಿಯಾಗಿರುವುದನ್ನು ಕಂಡು ಮನಸ್ಸು ತುಂಬಿ ಬರುತ್ತದೆ.

ಸೀತಾ ಮದುವೆಗೆ ಶಾಂತಜ್ಜಿಯ ಹಾರೈಕೆ

ಸುಲೋಚನಾ ಕೋಪದಲ್ಲಿಯೇ ಸೀತಾಳ ಮನೆಗೆ ಬರುತ್ತಾಳೆ. ಮನೆಗೆ ಬೀಗ ಹಾಕಿರುವುದನ್ನು ನೋಡಿ ಇನ್ನೂ ಸಿಡಿಮಿಡಿಗೊಳ್ಳುತ್ತಾಳೆ. ಪಕ್ಕದಲ್ಲೇ ಇದ್ದ ಶಾಂತಜ್ಜಿಯ ಮನೆಗೆ ಹೋಗಿ ವಿಚಾರಿಸುತ್ತಾಳೆ. ಅಲ್ಲಿಯೂ ಇರದುದ್ದನ್ನು ನೋಡಿ, ಅವರ ಬಳಿಯೇ ಸೀತಾಳ ಮದುವೆಯ ವಿಚಾರ ಮಾತನಾಡುತ್ತಾಳೆ. ಅಜ್ಜಿಗೆ ಇವಳ ಕಪಟ ಗೊತ್ತಿಲ್ಲದೆಯೇ, ಸೀತಾಳಿಗೆ ಹುಡುಗನ ಹುಡುಕುತ್ತಿದ್ದಾಳೆ ಎಂಬ ಸುದ್ದಿ ಕೇಳಿ ಖುಷಿಯಾಗುತ್ತದೆ. ಅವಳಿಗೆ ಒಬ್ಬ ಹುಡುಗ ಸಿಕ್ಕರೇ ಸಾಕು ಎಂದು ಮನಸ್ಸಿನಲ್ಲಿಯೇ ಬೇಡಿಕೊಳ್ಳುತ್ತಾಳೆ.

ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಶ್ರೀರಾಮ, ಸೀತಾ ಬಳಿ ಅವಳ ಗಂಡನ ಬಗ್ಗೆ ಕೇಳುತ್ತಾನೆ. ಸತ್ಯ ಏನು ಎಂಬುದನ್ನು ರಾಮನಿಗೆ ಹೇಳುತ್ತಾಳಾ ಸೀತಾ? ಹಳೆ ಕಥೆ ತಿಳಿದುಕೊಳ್ಳುವಲ್ಲಿ ರಾಮ್ ಸಫಲನಾಗುತ್ತಾನಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ