AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಬದುಕಿನ ಮುಗಿದು ಹೋದ ಅಧ್ಯಾಯಗಳನ್ನು ರಾಮ್ ಬಳಿ ಹಂಚಿಕೊಳ್ಳುತ್ತಾಳಾ ಸೀತಾ?

Seetha Raama Serial: ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಶ್ರೀರಾಮ, ಸೀತಾ ಬಳಿ ಅವಳ ಗಂಡನ ಬಗ್ಗೆ ಕೇಳುತ್ತಾನೆ. ಸತ್ಯ ಏನು ಎಂಬುದನ್ನು ರಾಮನಿಗೆ ಹೇಳುತ್ತಾಳಾ ಸೀತಾ? ಹಳೆ ಕಥೆ ತಿಳಿದುಕೊಳ್ಳುವಲ್ಲಿ ರಾಮ್ ಸಫಲನಾಗುತ್ತಾನಾ? ಕಾದು ನೋಡೋಣ.

Seetha Raama Serial: ಬದುಕಿನ ಮುಗಿದು ಹೋದ ಅಧ್ಯಾಯಗಳನ್ನು ರಾಮ್ ಬಳಿ ಹಂಚಿಕೊಳ್ಳುತ್ತಾಳಾ ಸೀತಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.|

Updated on: Aug 31, 2023 | 11:03 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 34: ಸಿಹಿಯ ಸಣ್ಣ ಪುಟ್ಟ ತುಂಟಾಟ ರಾಮನನ್ನು ಚಿಕ್ಕ ಮಗುವಾಗಿಸುತ್ತದೆ. ಆಕೆಯ ತುಂಟಾಟ, ಅವಳ ಮಾತು ಎಲ್ಲವೂ ಅವನಿಗೆ ಖುಷಿ ಕೊಡುತ್ತದೆ. ಇದನ್ನೆಲ್ಲಾ ನೋಡುತ್ತಿದ್ದ ಸೀತಾ, ರಾಮನಿಗೆ ಅನೇಕ ಪ್ರಶ್ನೆಗಳ ಸುರಿಮಳೆಗೈಯುತ್ತಾಳೆ. ಹಳೆಯದನ್ನೆಲ್ಲಾ ಮರೆತು ಮುಂದೆ ಸಾಗಿ ಎನ್ನುತ್ತಾಳೆ. ರಾಮ ಅದೇ ಪ್ರಶ್ನೆಯನ್ನು ಸೀತಾಳಿಗೆ ಕೇಳುತ್ತಾನೆ. ಇಬ್ಬರ ಬಳಿಯಲ್ಲಿಯೂ ಅದಕ್ಕೆ ಸರಿಯಾದ ಉತ್ತರವಿಲ್ಲ. ಆದರೆ ಅವರಿಬ್ಬರು ಮಾತನಾಡುವ ರೀತಿ ಮಾತ್ರ ಸಿಹಿಗೆ ತುಂಬಾ ಖುಷಿ ಕೊಡುತ್ತದೆ.

ಸಿಹಿಯ ಜೊತೆ ಮಗುವಾದ ರಾಮ್

ಊಟವಾದ ಮೇಲೆ ರೆಸ್ಟೋರೆಂಟ್ ಬಿಲ್ ಪಾವತಿಸಲು ಕೂಡ ರಾಮ್ ಬಳಿ ಹಣವಿರುವುದಿಲ್ಲ. ಅವರ ಬಳಿ ತನ್ನದೇ ಟ್ರೀಟ್ ಅಂತಲೂ ಹೇಳಿದ್ದರಿಂದ ತುಂಬಾ ಮುಜುಗರವೆನಿಸುತ್ತದೆ. ಸೀತಾ ಮತ್ತು ಸಿಹಿಯ ಬಳಿ ಹೇಳಿಕೊಳ್ಳಲಾಗದೇ ಅಶೋಕನಿಗೆ ಬಿಲ್ ಕಟ್ಟು ಎಂದು ಸಂದೇಶ ಕಳುಹಿಸುತ್ತಾನೆ. ಜೊತೆಗೆ ಈ ಊಟ ಫ್ರೀ ಅಂತಲೂ ಹೇಳುವಂತೆ ಮಾಡು ಎನ್ನುತ್ತಾನೆ. ಅಶೋಕ್, ರಾಮ ಹೇಳಿದ ಮಾತನ್ನು ಚಾಚು ತಪ್ಪದೇ ಹಾಗೆಯೇ ಪಾಲಿಸುತ್ತಾನೆ. ಇನ್ನು ಊಟ ಮುಗಿಸಿ ಮೂವರು ಪಾರ್ಕ್ ಕಡೆ ಮುಖ ಮಾಡುತ್ತಾರೆ. ಸಿಹಿಯ ಜೊತೆ ಆಟವಾಡುತ್ತಾ ರಾಮನೂ ಅವಳ ಜೊತೆಯಲ್ಲಿಯೇ ಖುಷಿ ಪಡುತ್ತಾನೆ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಸೀತಾಳಿಗೂ ಧನ್ಯವಾದ ಹೇಳುತ್ತಾನೆ. ಇನ್ನು ಅವಳಿಗೂ ತನ್ನ ಮಗಳು ತುಂಬಾ ಖುಷಿಯಾಗಿರುವುದನ್ನು ಕಂಡು ಮನಸ್ಸು ತುಂಬಿ ಬರುತ್ತದೆ.

ಸೀತಾ ಮದುವೆಗೆ ಶಾಂತಜ್ಜಿಯ ಹಾರೈಕೆ

ಸುಲೋಚನಾ ಕೋಪದಲ್ಲಿಯೇ ಸೀತಾಳ ಮನೆಗೆ ಬರುತ್ತಾಳೆ. ಮನೆಗೆ ಬೀಗ ಹಾಕಿರುವುದನ್ನು ನೋಡಿ ಇನ್ನೂ ಸಿಡಿಮಿಡಿಗೊಳ್ಳುತ್ತಾಳೆ. ಪಕ್ಕದಲ್ಲೇ ಇದ್ದ ಶಾಂತಜ್ಜಿಯ ಮನೆಗೆ ಹೋಗಿ ವಿಚಾರಿಸುತ್ತಾಳೆ. ಅಲ್ಲಿಯೂ ಇರದುದ್ದನ್ನು ನೋಡಿ, ಅವರ ಬಳಿಯೇ ಸೀತಾಳ ಮದುವೆಯ ವಿಚಾರ ಮಾತನಾಡುತ್ತಾಳೆ. ಅಜ್ಜಿಗೆ ಇವಳ ಕಪಟ ಗೊತ್ತಿಲ್ಲದೆಯೇ, ಸೀತಾಳಿಗೆ ಹುಡುಗನ ಹುಡುಕುತ್ತಿದ್ದಾಳೆ ಎಂಬ ಸುದ್ದಿ ಕೇಳಿ ಖುಷಿಯಾಗುತ್ತದೆ. ಅವಳಿಗೆ ಒಬ್ಬ ಹುಡುಗ ಸಿಕ್ಕರೇ ಸಾಕು ಎಂದು ಮನಸ್ಸಿನಲ್ಲಿಯೇ ಬೇಡಿಕೊಳ್ಳುತ್ತಾಳೆ.

ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಶ್ರೀರಾಮ, ಸೀತಾ ಬಳಿ ಅವಳ ಗಂಡನ ಬಗ್ಗೆ ಕೇಳುತ್ತಾನೆ. ಸತ್ಯ ಏನು ಎಂಬುದನ್ನು ರಾಮನಿಗೆ ಹೇಳುತ್ತಾಳಾ ಸೀತಾ? ಹಳೆ ಕಥೆ ತಿಳಿದುಕೊಳ್ಳುವಲ್ಲಿ ರಾಮ್ ಸಫಲನಾಗುತ್ತಾನಾ? ಕಾದು ನೋಡೋಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?