AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಿಗೆ ಕೌಂಟರ್ ಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಭಾರ್ಗವಿ; ಸೀತಾಳಿಗೆ ಸಂಕಷ್ಟ

ಪ್ರಿಯಾಳಿಗೆ ಬಂದ ಹಣವನ್ನು ಸೀತಾಳಿಗೆ ಕೊಡಿಸುವ ವ್ಯವಸ್ಥೆ ಮಾಡು ಎಂದು ಅಶೋಕನ ಬಳಿ ರಾಮ ಕೇಳಿಕೊಳ್ಳುತ್ತಾನೆ. ಪ್ರಿಯಾ ಜೊತೆ ಈ ವಿಷಯ ಮಾತನಾಡು ಎಂದು ಹೇಳುತ್ತಾನೆ. ಇದೆಲ್ಲಾ ಕೇಳಿಸಿಕೊಂಡ ಮ್ಯಾನೇಜರ್ ಚರಣ್, ರಾಮನ ಚಿಕ್ಕಮ್ಮ ಭಾರ್ಗವಿಗೆ ವಿಷಯ ತಿಳಿಸುತ್ತಾನೆ.

ರಾಮನಿಗೆ ಕೌಂಟರ್ ಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಭಾರ್ಗವಿ; ಸೀತಾಳಿಗೆ ಸಂಕಷ್ಟ
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Sep 15, 2023 | 7:39 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 45: ಶಾಲೆಯಿಂದ ಒಂದು ಚಿಕ್ಕ ಪ್ರವಾಸಕ್ಕೆ ಹೋಗಲು ಸೀತಮ್ಮನನ್ನು ಒಪ್ಪಿಸಿ ಎಂದು ಅಜ್ಜಿ ತಾತನ ಬಳಿ ಸಿಹಿ ಕೇಳಿಕೊಳ್ಳುತ್ತಾಳೆ ಸಿಹಿ. ಅದಕ್ಕೆ ಇಬ್ಬರ ಒಪ್ಪಿಗೆಯೂ ಸಿಗುತ್ತದೆ. ಸಿಹಿ ಮತ್ತು ಅವಳ ಗೆಳೆಯ ಶ್ರೇಯಸ್ ಇಬ್ಬರೂ ಸೇರಿ ಪಿಕ್ನಿಕ್​ಗೆ ಏನೇನು ಬೇಕು ಎಂಬುದನ್ನು ಲಿಸ್ಟ್ ಮಾಡಿಕೊಂಡು ಬಜೆಟ್ ಲೆಕ್ಕ ಹಾಕುತ್ತಾರೆ. ಅಮ್ಮನಿಗೆ ಜಾಸ್ತಿ ಖರ್ಚು ಬರುತ್ತದೇಯೋ ಏನೋ ಎಂದು ಅನಗತ್ಯ ವಸ್ತುಗಳನ್ನು ತೆಗೆದುಕೊಳ್ಳದೇ ಎಲ್ಲವನ್ನೂ ಕ್ಯಾನ್ಸಲ್ ಮಾಡುತ್ತಾಳೆ. ಅದನ್ನು ನೋಡಿದ ಅಜ್ಜಿ ತಾತ ಅವಳಿಗೆ ಅಗತ್ಯವಿರುವ ಕೆಲವು ವಸ್ತುಗಳನ್ನು ತಂದು ಕೊಡುತ್ತಾರೆ. ಅಮ್ಮನ ಸ್ವಲ್ಪ ಭಾರ ಇಳಿಸಿದಂತಾಯಿತು ಎಂದು ಸಿಹಿಯೂ ಖುಷಿ ಪಡುತ್ತಾಳೆ.

ಇನ್ನು ಸೀತಾಳ ಅತ್ತಿಗೆ ರುದ್ರ ಪ್ರತಾಪನ ಕಾಟದಿಂದ ಹೈರಾಣವಾಗುತ್ತಾಳೆ. ದುಡ್ಡಿನ ಆಸೆಗೋಸ್ಕರ ಲಾಯರ್ ಹೇಳಿದ ಹಾಗೇ ಮಾಡುತ್ತಾ ಬಂದ ಅವಳಿಗೆ, ಸೀತಾಳ ಹಠ ನುಂಗಲಾರದ ಬಿಸಿ ತುಪ್ಪವಾಗುತ್ತದೆ. ಇನ್ನು ಲಕ್ಷ ಹಣ ಬಂದ ಖುಷಿಯಲ್ಲಿ ಪ್ರಿಯಾ ಅಶೋಕ್​ಗೆ ಉಡುಗೊರೆ ನೀಡಲು ಶಾಪಿಂಗ್​ಗೆ ಹೋಗುತ್ತಾಳೆ. ಏನು ತೆಗೆದುಕೊಳ್ಳಬೇಕು ಎಂದು ತಿಳಿಯದೇ ಅಂಗಡಿಯೆಲ್ಲಾ ಹುಡುಕಾಡುತ್ತಾಳೆ. ಕೊನೆಗೂ ಒಂದು ಉಡುಗೊರೆ ತೆಗೆದುಕೊಳ್ಳುತ್ತಾಳೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಪ್ರಿಯಾಳಿಗೆ ಬಂದ ಹಣವನ್ನು ಸೀತಾಳಿಗೆ ಕೊಡಿಸುವ ವ್ಯವಸ್ಥೆ ಮಾಡು ಎಂದು ಅಶೋಕನ ಬಳಿ ರಾಮ ಕೇಳಿಕೊಳ್ಳುತ್ತಾನೆ. ಪ್ರಿಯಾ ಜೊತೆ ಈ ವಿಷಯ ಮಾತನಾಡು ಎಂದು ಹೇಳುತ್ತಾನೆ. ಇದೆಲ್ಲಾ ಕೇಳಿಸಿಕೊಂಡ ಮ್ಯಾನೇಜರ್ ಚರಣ್, ರಾಮನ ಚಿಕ್ಕಮ್ಮ ಭಾರ್ಗವಿಗೆ ವಿಷಯ ತಿಳಿಸುತ್ತಾನೆ. ಅದನ್ನು ಕೇಳಿದ ಅವಳು ಸೀತಾಳಿಗೆ ಇನ್ನಷ್ಟು ತೊಂದರೆ ಕೊಡಲು ಸ್ಯಾಲರಿ ಡೀಟೇಲ್ಸ್ ಕೇಳುತ್ತಾಳೆ. ಸೀತಾಳಿಗೆ ಬರಬೇಕಾದ ಹಣ ಅವಳ ಕೈ ಸೇರುತ್ತಾ? ಭಾರ್ಗವಿ ಆಟಕ್ಕೆ ಅಶೋಕ್ ಪೂರ್ಣವಿರಾಮ ಇಡುತ್ತಾನಾ? ಸೀತಾಳ ನಂಬಿಕೆ ಕಳೆದುಕೊಳ್ಳುತ್ತಾನಾ ರಾಮ್? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:38 am, Fri, 15 September 23

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ