‘ಸಿಹಿ ಜೊತೆ ಕಹಿಯೂ ಬಂದಳು’; ಡಬಲ್ ರೋಲ್​ಗೆ ವೀಕ್ಷಕರ ರಿಯಾಕ್ಷನ್ ಹೀಗಿತ್ತು

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಅವಳಿ ಸಹೋದರಿಯ ಪ್ರವೇಶದಿಂದ ಹೊಸ ಟ್ವಿಸ್ಟ್ ಉಂಟಾಗಿದೆ. ಇದಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಟ್ವಿಸ್ಟ್ ಅನ್ನು ಸ್ವಾಗತಿಸಿದರೆ, ಇನ್ನು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಿಹಿ ಜೊತೆ ಕಹಿಯೂ ಬಂದಳು’; ಡಬಲ್ ರೋಲ್​ಗೆ ವೀಕ್ಷಕರ ರಿಯಾಕ್ಷನ್ ಹೀಗಿತ್ತು
ಸಿಹಿ ದ್ವಿಪಾತ್ರ
Edited By:

Updated on: Nov 26, 2024 | 7:42 AM

‘ಸೀತಾ ರಾಮ’ ಧಾರಾವಾಹಿ ಹೊಸ ಹೊಸ ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಸಿಹಿಯನ್ನು ಪದೇ ಪದೇ ಕಿಡ್ನ್ಯಾಪ್ ಮಾಡಿಸೋ ಕೆಲಸ ಆಗುತ್ತಿದೆ. ಇದಕ್ಕೆ ವೀಕ್ಷಕರು ಈಗಾಗಲೇ ಬೇಸರ ಹೊರಹಾಕಿದ್ದರು. ಹೀಗಿರುವಾಗಲೇ ಸಿಹಿಯದ್ದು ದ್ವಿಪಾತ್ರ ಮಾಡಿಸಿಬಿಟ್ಟರೆ. ಈ ರೀತಿಯ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇದಕ್ಕೆ ವೀಕ್ಷಕರ ಕಡೆಯಿಂದ ಬೇಸರ ವ್ಯಕ್ತವಾಗಿದೆ. ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಇದ್ದಾರೆ.

ಸೀತಾ ಬಾಡಿಗೆ ತಾಯಿ. ಅವರು ಪ್ರಗ್ನೆಂಟ್ ಆದಾಗ ಎರಡು ಮಗು ಹೊಟ್ಟೆಯಲ್ಲಿ ಇತ್ತು ಹಾಗೂ ಒಂದು ಮಗು ಸತ್ತಿದೆ ಎಂದು ಹೇಳಲಾಗಿತ್ತು. ಆದರೆ, ಮತ್ತೊಂದು ಮಗು ಕೂಡ ಬದುಕಿದೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ರೀತಿಯ ಟ್ವಿಸ್ಟ್​ನ ಧಾರಾವಾಹಿಯಲ್ಲಿ ನೀಡಲಾಗಿದೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ಇದನ್ನು ವೀಕ್ಷಕರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿಲ್ಲ.

‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ, ಇತ್ತೀಚೆಗೆ ಅದು ಕುಗ್ಗುತ್ತಿದೆ. ಈ ಕಾರಣಕ್ಕೆ ನಿರ್ದೇಶಕರು ಹೊಸ ಹೊಸ ರೀತಿಯ ಟ್ವಿಸ್ಟ್​ಗಳನ್ನು ನೀಡೋಕೆ ಆರಂಭಿಸಿದ್ದಾರೆ. ಈ ಧಾರಾವಾಹಿಯಲ್ಲಿ ಸಿಹಿಯ ಜೊತೆ ಮತ್ತೊಬ್ಬರನ್ನು ಕರೆ ತರಲಾಗಿದೆ. ಸಿಹಿಯ ಟ್ವಿನ್​ನ ಕರೆತರಲಾಗಿದೆ. ಜೀ ಕನ್ನಡ ವಾಹಿನಿ ಹೊಸ ಪ್ರೋಮೋ ರಿಲೀಸ್ ಮಾಡಿದೆ.

ಈ ಪ್ರೋಮೋದಲ್ಲಿ ಸರ್ಕಸ್ ಮಾಡುವ ಗುಂಪನ್ನು ತೋರಿಸಲಾಗಿದೆ. ಈ ಗುಂಪಿನಲ್ಲಿ ಸಿಹಿ ರೀತಿಯೇ ಇರುವ ವ್ಯಕ್ತಿ ಕಾಣಿಸಿದ್ದಾಳೆ. ಇತ್ತೀಚೆಗೆ ಕೋರ್ಟ್​ನಲ್ಲಿ ಮಾತನಾಡುವಾಗ, ‘ಸೀತಾಗೆ ಎರಡು ಮಗು ಜನಿಸಿತ್ತು. ಆದರೆ, ಒಂದು ಮಗು ನಿಧನ ಹೊಂದಿದೆ’ ಎಂದು ಹೇಳಿದ್ದರು. ಈಗ ಮಗು ಬದುಕಿದೆ ಎಂಬ ರೀತಿಯಲ್ಲಿ ತೋರಿಸಲಾಗಿದೆ.

‘ಸೀತಾ ರಾಮ’ ಧಾರಾವಾಹಿ ನೋಡುತ್ತಿರುವ ವೀಕ್ಷಕರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ‘ಸಿಹಿ ಜೊತೆ ಕಹಿಯೂ ಬಂದಳು’ ಎಂದರು ಕೆಲವರು ಹೇಳಿದ್ದಾರೆ. ‘ಹೆಸರು ಸೀತಾ ರಾಮ. ಇಲ್ಲಿ ಸೀತಾ ರಾಮರ ಬಿಟ್ಟು ಸಿಹಿಯೇ ಹೈಲೈಟ್ ಆಗುತ್ತಿದ್ದಾಳೆ. ಅವಳ ಜೊತೆ ಮತ್ತೊಬ್ಬಳೂ ಬಂದರಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್: ಸಿಹಿಯ ಪಾತ್ರವೇ ಕೊನೆ ಆಯ್ತಲ್ಲ..

ಒಂದೊಮ್ಮೆ ಸಿಹಿಯ ಸಹೋದರಿ ಬಿಗ್ ಬಾಸ್​ಗೆ ಬಂದರೆ ಯಾವ ರೀತಿಯಲ್ಲಿ ಇರುತ್ತದೆ. ಈ ಮಗುವನ್ನು ಸೀತಾ ಸ್ವೀಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us