AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ‘ಘೋಸ್ಟ್’ ಕಮೆಂಟ್ರಿ: ಶಿವಣ್ಣನ ಊಹೆ ನಿಜವಾಯ್ತಾ?

Shiva Rajkumar: ಇಂದು (ಅಕ್ಟೋಬರ್ 14) ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶಿವರಾಜ್ ಕುಮಾರ್ ವೀಕ್ಷಕ ವಿವರಣೆ ಮಾಡಿದರು. ಪಾಕಿಸ್ತಾನ ಎಷ್ಟು ಸ್ಕೋರ್ ಹೊಡೆಯಬಹುದು ಎಂಬ ಊಹೆಯನ್ನು ಶಿವಣ್ಣ ಮಾಡಿದ್ದು, ಶಿವಣ್ಣನ ಊಹೆ ನಿಜವಾಗುತ್ತಾ?

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ 'ಘೋಸ್ಟ್' ಕಮೆಂಟ್ರಿ: ಶಿವಣ್ಣನ ಊಹೆ ನಿಜವಾಯ್ತಾ?
ಶಿವಣ್ಣ
ಮಂಜುನಾಥ ಸಿ.
|

Updated on:Oct 14, 2023 | 5:23 PM

Share

ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಕಿರುತೆರೆ ಹೊಸದೇನೂ ಅಲ್ಲ. ಕೆಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ, ಜಡ್ಜ್​ ಆಗಿ, ನಿರೂಪಕನಾಗಿ ಶಿವರಾಜ್ ಕುಮಾರ್ ಪಾಲ್ಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ಕಮೆಂಟೇಟರ್ ಆಗಿ ಕಾಣಿಸಿಕೊಂಡರು ಶಿವಣ್ಣ. ಇಂದು (ಅಕ್ಟೋಬರ್ 14) ಅಹಮದಾಬಾದ್​ನಲ್ಲ ನಡೆಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶಿವಣ್ಣ ವೀಕ್ಷಕ ವಿವರಣೆ ನೀಡಿದರು. ಅದೂ ಕನ್ನಡದಲ್ಲಿ.

ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಕನ್ನಡ ಕಮೆಂಟ್ರಿಯೊಂದಿಗೆ ಭಾರತ-ಪಾಕಿಸ್ತಾನ ಮ್ಯಾಚ್ ನೇರ ಪ್ರಸಾರ ನಡೆಯುತ್ತಿದ್ದು, ವೃತ್ತಿಪರ ಕಾಮೆಂಟೇಟರ್​ಗಳ ಜೊತೆಗೆ ಕಮೆಂಟರಿಗೆ ಕೂತ ಶಿವರಾಜ್ ಕುಮಾರ್, ತಮ್ಮದೇ ರೀತಿಯಲ್ಲಿ ಪಂದ್ಯದ ವೀಕ್ಷಕ ವಿವರಣೆ ನೀಡಿದರು. ಜಾನಿ ಹಾಗೂ ವಿಜಯ್ ಭಾರಧ್ವಜ್ ಜೊತೆಗೆ ವೀಕ್ಷಕ ವಿವರಣೆಗೆ ಕೂತಿದ್ದ ಶಿವರಾಜ್ ಕುಮಾರ್, ಪಂದ್ಯದ ವಿಶ್ಲೇಷಣೆ ನೀಡಿದರು.

ಶಿವರಾಜ್ ಕುಮಾರ್ ಅವರು ವೀಕ್ಷಕ ವಿವರಣೆ ನೀಡುವ ವೇಳೆಗೆ ಪಾಕಿಸ್ತಾನದ ಬಾಬರ್ ಅಜಾಮ್ ಹಾಗೂ ರಿಜ್ವಾನ್ ಬಹಳ ಚೆನ್ನಾಗಿ ಬ್ಯಾಟಿಂಗ್ ಆಡುತ್ತಿದ್ದರು. ಇಬ್ಬರ ಆಟವನ್ನು ಗಮನಿಸಿದ ಶಿವಣ್ಣ, ಪಂದ್ಯದಲ್ಲಿ 225ಕ್ಕೂ ಹೆಚ್ಚು ರನ್​ಗಳನ್ನು ಪಾಕಿಸ್ತಾನ ಹೊಡೆಯುವುದಿಲ್ಲ ಅನಿಸುತ್ತದೆ. ಈಗ ಇವರಿಬ್ಬರೂ ಆಡುತ್ತಿರುವುದು ನೋಡಿದರೆ 250-270 ಆಗಬಹುದು ಅನಿಸುತ್ತದೆ, ಆದರೆ ನನ್ನ ಅನಿಸಿಕೆ ಎಂದರೆ 225 ದಾಟಬಾರದು ಪಾಕಿಸ್ತಾನ ಅಂದರು. ಅವರು ಊಹೆ ಮಾಡಿದಂತೆಯೇ 191 ರನ್​ಗೆ ಪಾಕಿಸ್ತಾನ ಆಲ್ ಔಟ್ ಆಗಿದೆ.

ಇದನ್ನೂ ಓದಿ: ಅವರು ಹಾಗೆ ಮಾಡಬಾರದಿತ್ತು ಕಬ್ಜ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್ ಅಸಮಾಧಾನ

ಕಮೆಂಟರಿ ಸಮಯದಲ್ಲಿ ಈ ಹಿಂದಿನ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳನ್ನು ನೆನಪು ಮಾಡಿಕೊಂಡ ಶಿವಣ್ಣ, ಚೇತನ್ ಶರ್ಮಾಗೆ ಮಿಯಾಂದಾದ್ ಹೊಡೆದಿದ್ದ ಸಿಕ್ಸ್ ಸೇರಿದಂತೆ ಹಲವು ವಿಷಯಗಳನ್ನು ಮಾತನಾಡಿದರು. ತಾವು ಕ್ರಿಕೆಟ್ ನೋಡಲು ಆಗಿನ ಮದ್ರಾಸಿನಿಂದ ಬೆಂಗಳೂರಿಗೆ ಬರುತ್ತಿದ್ದಿದ್ದು, ದೆಹಲಿಗೆ ಹೋಗುತ್ತಿದ್ದ ಘಟನೆಗಳನ್ನು ಸಹ ನೆನಪು ಮಾಡಿಕೊಂಡರು.

ಜೊತೆಗೆ ತಂದೆ ಡಾ ರಾಜ್​ಕುಮಾರ್ ಅವರು ಹೇಗೆ ಉತ್ಸಾಹಭರಿತವಾಗಿ ಕ್ರಿಕೆಟ್ ಅನ್ನು ವೀಕ್ಷಿಸುತ್ತಿದ್ದರು ಎಂಬುದನ್ನು ಸಹ ಶಿವಣ್ಣ ನೆನಪು ಮಾಡಿಕೊಂಡರು. ತಮ್ಮ ಮನೆಯಲ್ಲಿ ಎಲ್ಲರೂ ಕ್ರಿಕೆಟ್ ಪ್ರಿಯರು ಎಂಬುದನ್ನು ಸಹ ಶಿವರಾಜ್ ಕುಮಾರ್ ಹೇಳಿಕೊಂಡರು. ಪುನೀತ್ ರಾಜ್​ಕುಮಾರ್ ಅವರಿಗೆ ಇದ್ದ ಕ್ರಿಕೆಟ್ ಪ್ರೇಮದ ಬಗ್ಗೆಯೂ ಶಿವಣ್ಣ ಮಾತನಾಡಿದರು. ಗುಂಡಪ್ಪ ವಿಶ್ವನಾಥ್ ಅವರ ಜೊತೆಗೂ ಕಮೆಂಟರಿ ಮಾಡಿದ ಶಿವಣ್ಣ, ಜಿವಿ ಅವರನ್ನು ಕ್ರಿಕೆಟ್ ಚಕ್ರವರ್ತಿ ಎಂದು ಕರೆದರು. ಇವರ ಆಟ ನೋಡಲು ಕಾತರರಾಗಿದ್ದೆವು ಎಂಬುದನ್ನು ನೆನಪು ಮಾಡಿಕೊಂಡರು.

ಶಿವರಾಜ್ ಕುಮಾರ್ ಬಹಳ ಒಳ್ಳೆಯ ಕ್ರಿಕೆಟರ್ ಆಗಿದ್ದರು. ಚೆನ್ನೈನಲ್ಲಿ ಕ್ರಿಕೆಟ್ ತರಬೇತಿಯನ್ನೂ ಪಡೆದಿದ್ದ ಶಿವಣ್ಣ, ತಮಿಳುನಾಡಿನ ರಣಜಿ ತಂಡಕ್ಕೆ ಆಡುವ ಆಸೆ ಹೊಂದಿದ್ದರು. ಆದರೆ ಸಿನಿಮಾ ರಂಗದ ಕಡೆಗೆ ಬಂದ ಶಿವಣ್ಣ ಕ್ರಿಕೆಟ್​ಗೆ ಪೂರ್ಣ ವಿರಾಮವಿತ್ತರು. ಆಗೊಮ್ಮೆ ಈಗೊಮ್ಮೆ ಚಿತ್ರರಂಗದವರು ಆಯೋಜಿಸುವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಟ ಆಡುತ್ತಿರುತ್ತಾರೆ. ಅಂದಹಾಗೆ ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sat, 14 October 23

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ