AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚನ ಪಂಚಾಯಿತಿಯಲ್ಲಿ ನಗು-ಅಳು, ಸರಿ-ತಪ್ಪು: ಕೊನೆಗೆ ಶನಿವಾರ  ಸೇಫ್ ಆಗಿದ್ದು ಯಾರು? 

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರಾಂತ್ಯದ ಎಪಿಸೋಡ್​ಗೆ ಆಗಮಿಸಿದ್ದ ಸುದೀಪ್, ಸದಸ್ಯರನ್ನು ನಗಿಸಿ, ಬುದ್ಧಿ ಹೇಳಿ, ತಿದ್ದಿದರು. ಜೊತೆಗೆ ಮೂವರು ನಾಮಿನೇಟೆಡ್ ಸ್ಪರ್ಧಿಗಳನ್ನು ಸೇಫ್​ ಸಹ ಮಾಡಿದರು. ಯಾರು ಆ ಸ್ಪರ್ಧಿಗಳು?

ಕಿಚ್ಚನ ಪಂಚಾಯಿತಿಯಲ್ಲಿ ನಗು-ಅಳು, ಸರಿ-ತಪ್ಪು: ಕೊನೆಗೆ ಶನಿವಾರ  ಸೇಫ್ ಆಗಿದ್ದು ಯಾರು? 
ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on: Oct 15, 2023 | 8:10 AM

Share

ಬಿಗ್​ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದ ಪಂಚಾಯಿತಿಗೆ ಸಖತ್ ಸ್ಟೈಲಿಷ್ ಆಗಿ ಬಂದಿದ್ದರು ಕಿಚ್ಚ ಸುದೀಪ್. ಪ್ರತಿ ಬಾರಿಯಂತೆ ಸ್ಪರ್ಧಿಗಳನ್ನು ನಗಿಸುತ್ತಾ, ಕಾಲೆಳೆಯುತ್ತಾ ಪಂಚಾಯಿತಿ ಆರಂಭಿಸಿದ ಸುದೀಪ್, ಬಳಿಕ ಪ್ರತಿಯೊಬ್ಬ ಸ್ಪರ್ಧಿಗಳ ತಪ್ಪುಗಳು, ಅವರ ಬಲ, ಬಲಹೀನತೆ ಇನ್ನಿತರೆ ವಿಷಯಗಳನ್ನು ಮಾತನಾಡಿದರು. ವಾರದಾದ್ಯಂತ ಮನೆಯಲ್ಲಿ ನಡೆದ ತಪ್ಪುಗಳು, ಗಲಾಟೆ, ಗೊಂದಲಗಳ ಬಗ್ಗೆಯೂ ಚರ್ಚಿಸಿದರು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಮೂವರನ್ನು ಸೇಫ್ ಮಾಡಿ, ಇನ್ನುಳಿದವರ ಭವಿಷ್ಯ ಭಾನುವಾರ ನಿರ್ಧಾರವಾಗುತ್ತದೆ ಎಂದು ಹೊರಟರು.

ಸ್ನೇಹಿತ್​ರ ಕ್ಯಾಪ್ಟೆನ್ಸಿ ಇತರೆ ಸ್ಪರ್ಧಿಗಳಿಗೆ ಹೇಗನ್ನಿಸಿತು. ಸಮರ್ಥರು-ಅಸಮರ್ಥರ ನಡುವಿನ ವ್ಯತ್ಯಾಸ, ಲಾರ್ಡ್ ಪ್ರಥಮ್ ಹೇಗೆ ಇಡೀ ಮನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡರು, ಯಾರೂ ಲಾರ್ಡ್ ಪ್ರಥಮ್ ಅವರನ್ನು ಪ್ರಶ್ನೆ ಮಾಡಲಿಲ್ಲವೇಕೆ? ಮೊದಲ ವಾರ ಮನೆಯಲ್ಲಿ ಇದ್ದ ಸದಸ್ಯರು ತಮಗೆ ತಾವು ಎಷ್ಟು ಅಂಕ ಕೊಟ್ಟಿಕೊಳ್ಳುತ್ತಾರೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದ ಸುದೀಪ್ ಬಳಿಕ ನಾಮಿನೇಷನ್​ ಕಡೆಗೆ ಬಂದರು. ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್, ಸಂಗೀತಾ ಶೃಂಗೇರಿ, ತನಿಷಾ, ಸ್ನೇಕ್ ಶಾಮ್, ಬುಲೆಟ್ ರಕ್ಷಕ್, ಕಾರ್ತಿಕ್ ಈ ಏಳು ಸ್ಪರ್ಧಿಗಳನ್ನು ಜನರು ಹೋಲ್ಡ್‌ನಲ್ಲಿ ಇಟ್ಟಿದ್ದರು. ಇಂದು ವರ್ತೂರು ಸಂತೋಷ್ ಅತಿಹೆಚ್ಚು ಮತ ಪಡೆದು ಮೊದಲು ಸೇಫ್ ಆದರು. ಆ ನಂತರ ತನಿಷಾ ಸಹ ಸೇಫ್ ಆದರು. ಆ ಬಳಿಕ ಕಾರ್ತಿಕ್ ಅನ್ನೂ ಕಿಚ್ಚ ಸುದೀಪ್ ಸೇಫ್ ಎಂದು ಘೋಷಿಸಿದರು.

ಇದನ್ನೂ ಓದಿ:ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್

ನಂತರ ಮಾತು ಡ್ರೋಣ್ ಪ್ರತಾಪ್ ಅವರೆಡೆ ಹೊರಳಿಸಿದ ಸುದೀಪ್ ವಾರವಿಡೀ ಕೆಲವರಿಂದ ವ್ಯಂಗ್ಯಕ್ಕೆ, ತಮಾಷೆಗೆ, ಟೀಕೆಗೆ ಈಡಾದ ಡ್ರೋನ್ ಪ್ರತಾಪ್ ಪರವಾಗಿ ಬ್ಯಾಟಿಂಗ್ ಮಾಡಿದ ಸುದೀಪ್, ಡ್ರೋನ್ ಅವರನ್ನು ಅವಕಾಶ ಸಿಕ್ಕಾಗೆಲ್ಲ ವ್ಯಂಗ್ಯ ಮಾಡಿದ್ದ ತುಕಾಲಿ ಸಂತೋಶ್ ಅವರಿಗೆ ತುಸು ಖಾರವಾದ ಪ್ರಶ್ನೆಗಳನ್ನು ಕೇಳಿ, ಸ್ವತಃ ತುಕಾಲಿ ಸಂತೋಶ್ ಅವರೇ ಪ್ರತಾಪ್ ಬಳಿ ಕ್ಷಮೆ ಕೇಳುವಂತೆ ಮಾಡಿದರು. ‘ಒಬ್ಬ ವ್ಯಕ್ತಿಯನ್ನು ಆಡಿಕೊಂಡು ಉಳಿದವರನ್ನು ನಗಿಸುವ ವ್ಯಕ್ತಿ, ಒಳ್ಳೆಯ ಜೋಕರ್ ಅಲ್ಲ, ಬದಲಿಗೆ ಬ್ಯಾಟ್‌ಮನ್ ಸರಣಿಯಲ್ಲಿ ಬರುವ ಜೋಕರ್!’ ಎಂದು ಎಚ್ಚರಿಸಿ, ಸಂತೋಶ್ ಕುರಿತು ನೀವು ಬಹಳ ಒಳ್ಳೆಯ ಜೋಕರ್ ಎಂದು ಮಾರ್ಮಿಕವಾಗಿ ಹೇಳಿದರು ಸುದೀಪ್.

“ಮೈಕಲ್, ಸಿರಿ, ನೀತು, ಪ್ರತಾಪ್ ಮತ್ತು ಶ್ಯಾಮ್ ಇವರಲ್ಲಿ ಯಾರೆಲ್ಲ ಸೇಫ್‌? ಯಾರು ಮನೆಯಿಂದ ಹೊರಬೀಳುತ್ತಾರೆ? ಎನ್ನುವುದನ್ನು ನೋಡಲು ನಾಳೆಯ ಸಂಚಿಕೆಯವರೆಗೆ ಕಾಯಿರಿ ಎಂದ ಸುದೀಪ್, ಕುತೂಹಲವನ್ನು ನಾಳೆಗೆ ವರ್ಗಾಯಿಸಿ ಹೊರಟರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಲೈವ್​ನಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್