Sudha Murty: ಮೊದಲ ಭೇಟಿಯಲ್ಲಿ ಭಾವಿ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ನೋಡಿ ಯಾರಪ್ಪಾ ಇವ ಬಸ್​ ಕಂಡಕ್ಟರ್​ ಅಂದುಕೊಂಡ​ ಸುಧಾ ಮೂರ್ತಿ!

Infosys NR Narayana Murthy: ಅಲ್ಲದೆ ಹಿಂದಿನ ಸಂದರ್ಶನದಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಪರಸ್ಪರ ಅಭಿರುಚಿಯನ್ನು ಗೌರವಿಸುತ್ತಾರೆ. ಪರಸ್ಪರರ ಮೇಲ್ ಚೆಕ್ ಮಾಡುವುದಿಲ್ಲ ಎಂದು ಸುಧಾ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

Sudha Murty: ಮೊದಲ ಭೇಟಿಯಲ್ಲಿ ಭಾವಿ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ನೋಡಿ ಯಾರಪ್ಪಾ ಇವ ಬಸ್​ ಕಂಡಕ್ಟರ್​ ಅಂದುಕೊಂಡ​ ಸುಧಾ ಮೂರ್ತಿ!
ಭಾವಿ ಗಂಡ ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ನೋಡಿ ಯಾರಪ್ಪಾ ಇವ ಬಸ್​ ಕಂಡಕ್ಟರ್​ ಎಂದುಕೊಂಡ​ ಸುಧಾ ಮೂರ್ತಿ
Follow us
|

Updated on: May 09, 2023 | 11:58 AM

ಜಗದ್ವಿಖ್ಯಾತ ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ಎನ್​ ಆರ್​​ ನಾರಾಯಣ ಮೂರ್ತಿಯವರ (NR Narayana Murthy) ಪತ್ನಿ ಸುಧಾಮೂರ್ತಿ (Sudha Murty) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬರಹಗಾರರಾಗಿ, ಸಮಾಜಮುಖಿಯಾಗಿ ಉದಾತ್ತ ವ್ಯಕ್ತಿಯಾಗಿ ಉತ್ತಮ ಹೆಸರು ಗಳಿಸಿದ್ದಾರೆ ನಮ್ಮ ಕನ್ನಡತಿ ಸುಧಾ! ಸೋನಿ ಹಿಂದಿ ಮನರಂಜನಾ ಚಾನೆಲ್​ ನಡೆಸಿಕೊಡುವ ‘ದಿ ಕಪಿಲ್ ಶರ್ಮಾ ಶೋ’ದಲ್ಲಿ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಅವರ ಜೊತೆ ನಟಿ ರವೀನಾ ಟಂಡನ್ ಮತ್ತು ನಿರ್ಮಾಪಕ ಗುಣಿತ್ ಮೋಂಗಾ ಕೂಡ ಇದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋ ವಿಡಿಯೋವನ್ನು ನಿರ್ವಾಹಕರು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸುಧಾಮೂರ್ತಿ ಅವರು ತಮ್ಮ ಪತಿ ನಾರಾಯಣ ಮೂರ್ತಿ ಅವರನ್ನು ಮೊದಲ ಸಲ ಭೇಟಿಯಾದ ಬಗೆಯನ್ನು ಹೇಳಿದ್ದಾರೆ. ತನಗೆ ಪ್ರಸನ್ನ ಎಂಬ ಗೆಳೆಯನಿದ್ದು, ತನಗಾಗಿ ಆತ ಪ್ರತಿದಿನ ನಾರಾಯಣ ಮೂರ್ತಿ ಎಂಬ ಪುಸ್ತಕ ತರುತ್ತಿದ್ದ. ಯಾವುದೆ ಪುಸ್ತಕ ತಂದುಕೊಟ್ಟರೂ ಅದಕ್ಕೆ ನಾರಾಯಣ ಮೂರ್ತಿ ಎಂಬ ಹೆಸರು ಅಂಟಿಕೊಂಡಿರುತ್ತಿತ್ತು. ಅದಕ್ಕೇ ಆ ಹೆಸರು ಕಂಡಾಗಲೆಲ್ಲ ನಮ್ಮ ಸುಧಕ್ಕ ಅದು ಯಾರದೋ ಅಂತರಾಷ್ಟ್ರೀಯ ಬಸ್ ಕಂಡಕ್ಟರ್ (bus conductor) ಹೆಸರು ಇರಬೇಕು ಎಂದು ಭಾವಿಸಿದ್ದರಂತೆ. ಹಾಗೆ ಹೇಳುತ್ತಿದ್ದಂತೆ ಷೋದಲ್ಲಿ ಭಾಗವಹಿಸಿದ್ದವರೆಲ್ಲಾ ನಗೆಗಡಲಲ್ಲಿ ತೇಲುವುದು ಆ ವಿಡಿಯೋದಲ್ಲಿ ಕಾಣಬರುತ್ತದೆ.

ಆದರೆ ಇದಕ್ಕಿಂತಾ ಮಜಾ ಪ್ರಸಂಗವೆಂದರೆ ಅದೇ ಸ್ನೇಹಿತ ಪ್ರಸನ್ನ ನಾರಾಯಣಮೂರ್ತಿ ಅವರನ್ನು ನಿಜವಾಗಿಯೂ ಸುಧಾ ಮನೆಗೆ ಕರೆತಂದಾಗ ನಡೆದ ಘಟನಾವಳಿ. ಅದನ್ನು ಸುಧಾಮೂರ್ತಿ ಅವರ ಬಾಯಿಂದಲೇ ಕೇಳಬೇಕು. ನಾರಾಯಣ ಮೂರ್ತಿ ಅವರನ್ನು ಭೇಟಿಯಾಗುವ ಮುನ್ನ ಅವರು ಸಿನಿಮಾ ಹೀರೋನಂತೆ ಸುಂದರವಾಗಿ ಇರುತ್ತಾರೆ. handsome, dashing film hero ಎಂದು ಭಾವಿಸಿದ್ದೆ. ಆದರೆ ಬಾಗಿಲು ತೆರೆದು ಕಂಡಾಗ ಯಾರಪ್ಪಾ ಈ ಬಾಲಕ? ಒಳ್ಳೇ ಬಸ್​​ ಕಂಡಕ್ಟರ್​​​ ಥರಾ ಇದಾನಲ್ಲಾ ಎಂದು ಭಾವಿಸಿದೆ ಎಂದಾಗ ಸೆಟ್​​ನಲ್ಲಿದ್ದವರೆಲ್ಲಾ ಮನಸಾರೆ ನಕ್ಕರು.

ಅಲ್ಲದೆ ಹಿಂದಿನ ಸಂದರ್ಶನದಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಪರಸ್ಪರ ಅಭಿರುಚಿಯನ್ನು ಗೌರವಿಸುತ್ತಾರೆ. ತಮ್ಮ ಕುಟುಂಬ ಮತ್ತು ಮಕ್ಕಳನ್ನು ಇಬ್ಬರೂ ನೋಡಿಕೊಳ್ಳುತ್ತಿದ್ದೆವು ಎಂದು ಸುಧಾಮೂರ್ತಿ ಸಂದರ್ಶನದಲ್ಲಿ ಹೇಳಿದ್ದಾರೆ. ಸುಧಾ ಅವರು ಈಗ ಮೊದಲಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರಂತೆ. ನಾರಾಯಣ ಮೂರ್ತಿ ಇದಕ್ಕೆ ಎಂದೂ ಆಕ್ಷೇಪಿಸಲಿಲ್ಲ. ಒಬ್ಬರಿಗೊಬ್ಬರು ಸಲಹೆ ನೀಡುತ್ತೇವೆ. ಆದರೆ ಪರಸ್ಪರರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಪರಸ್ಪರರ ಮೇಲ್ ಚೆಕ್ ಮಾಡುವುದಿಲ್ಲ ಎಂದು ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ