ಬಿಗ್​ಬಾಸ್​ನಿಂದ ಜೀವನದಲ್ಲಿ ದೊಡ್ಡ ಬದಲಾವಣೆ: ಸುದೀಪ್ ಎದುರು ತನಿಷಾ ಭಾವುಕ

Bigg Boss Kannada: ವಾರದ ಮಧ್ಯಭಾಗದಲ್ಲಿಯೇ ಎಲಿಮಿನೇಟ್ ಆಗಿದ್ದ ತನಿಷಾ, ಭಾನುವಾರದ ಎಪಿಸೋಡ್​ನಲ್ಲಿ ವೇದಿಕೆ ಬಂದರು. ಬಿಗ್​ಬಾಸ್​ನಿಂದ ತಮ್ಮ ಜೀವನದಲ್ಲಿ ಆಗಿರುವ ದೊಡ್ಡ ಬದಲಾವಣೆ ಬಗ್ಗೆ ಹೇಳುತ್ತಾ ಭಾವುಕರಾದರು. ಏನದು ಬದಲಾವಣೆ?

ಬಿಗ್​ಬಾಸ್​ನಿಂದ ಜೀವನದಲ್ಲಿ ದೊಡ್ಡ ಬದಲಾವಣೆ: ಸುದೀಪ್ ಎದುರು ತನಿಷಾ ಭಾವುಕ
Follow us
|

Updated on: Jan 21, 2024 | 11:40 PM

ಬಿಗ್​ಬಾಸ್ (BiggBoss) ಮನೆಯಿಂದ ಈ ವಾರ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ವಾರಾಂತ್ಯದಲ್ಲಿ ನಮ್ರತಾ ಎಲಿಮಿನೇಟ್ ಆದರೆ ವಾರದ ಮಧ್ಯದಲ್ಲಿ ತನಿಷಾ ಎಲಿಮಿನೇಟ್ ಆಗಿದ್ದರು. ತನಿಷಾರ ಎಲಿಮಿನೇಷನ್ ಪ್ರೇಕ್ಷಕರ ಜೊತೆಗೆ ಅವರಿಗೂ ಬಹಳ ಶಾಕಿಂಗ್ ಆಗಿದ್ದಾಗಿತ್ತು. ಎಲಿಮಿನೇಷನ್​ನಿಂದ ತೀವ್ರ ದುಃಖಿತವಾಗಿದ್ದ ತನಿಷಾ, ಮನೆಯ ಸದಸ್ಯರಿಗೆ ಸರಿಯಾಗಿ ವಿದಾಯ ಹೇಳದೆ, ಎಲ್ಲರಿಗೂ ಪರೋಕ್ಷವಾಗಿ ಬೈದು ಹೊರಗೆ ಬಂದಿದ್ದರು. ವೇದಿಕೆಗೆ ಕರೆಸದೆ ಎಲಿಮಿನೇಟ್ ಮಾಡುತ್ತೀದ್ದೀರೆಂದು ಬೇಸರ ಹೊರಹಾಕಿದ್ದರು. ಇದೀಗ ಈ ವಾರಾಂತ್ಯದಲ್ಲಿ ತನಿಷಾರನ್ನು ವೇದಿಕೆ ಕರೆಸಲಾಗಿತ್ತು.

ಈ ವಾರ ನಮ್ರತಾ ಎಲಿಮಿನೇಟ್ ಆದರಾದರೂ ವೇದಿಕೆಗೆ ಬಂದಿದ್ದು ತನಿಷಾ. ವೇದಿಕೆಗೆ ಬರಮಾಡಿಕೊಂಡ ಸುದೀಪ್, ಎಲ್ಲರಿಗೂ ಬೈದು ಬಂದುಬಿಟ್ಟಿರಲ್ಲಾ ಎಂದರು. ಅದಕ್ಕೆ ತಮ್ಮದೇ ಆದ ಕಾರಣ ಕೊಟ್ಟರು ತನಿಷಾ. ಬಳಿಕ ಅವರ ಜರ್ನಿ ವಿಡಿಯೋ ತೋರಿಸಲಾಯ್ತು. ಆರಂಭದಲ್ಲಿ ತಮಾಷೆಯಾಗಿ ನಗುತ್ತಾ ಮಾತನಾಡುತ್ತಿದ್ದ ತನಿಷಾ ಬಳಿಕ ಭಾವುಕರಾಗಿಬಿಟ್ಟರು. ಬಿಗ್​ಬಾಸ್​ನಿಂದ ತಮ್ಮ ಜೀವನದಲ್ಲಿ ಆಗಿರುವ ದೊಡ್ಡ ಬದಲಾವಣೆ ಬಗ್ಗೆ ತನಿಷಾ ಹೇಳಿಕೊಂಡರು.

ಇದನ್ನೂ ಓದಿ:ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

ಮುಂಚೆ ನಾನು ಎಲ್ಲೇ ಹೋದರು ಇವಳು ವಿವಾದ ಸೃಷ್ಟಿ ಮಾಡುತ್ತಾಳೆ, ಹಣ ಕೊಟ್ಟರೆ ಎಂಥಹಾ ಪಾತ್ರವಾದರೂ ಮಾಡುತ್ತಾಳೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ ಎಂಬ ಅಭಿಪ್ರಾಯ ನನ್ನ ಬಗ್ಗೆ ಇತ್ತು. ಇನ್​ಸ್ಟಾಗ್ರಾಂನಲ್ಲಿ ಅಂತೂ ನನಗೆ ಬಹಳ ದ್ವೇಷವೇ ಸಿಗುತ್ತಿತ್ತು, ಬಹಳ ಕೆಟ್ಟ, ನೀಚ ಕಮೆಂಟ್​ಗಳನ್ನು ಹಾಕುತ್ತಿದ್ದರು. ಒಳ್ಳೆಯ ಸೀರೆ ಉಟ್ಟುಕೊಂಡು ಫೊಟೊ ಹಾಕಿದರೂ ಸಹ ನನಗೆ ಕೆಟ್ಟ ಕಮೆಂಟ್​ಗಳೇ ಬರುತ್ತಿದ್ದವು. ಅದು ಒಂದು ರೀತಿ ಅಭ್ಯಾಸವೇ ಆಗಿ ಹೋಗಿತ್ತು. ಆದರೆ ಈಗ ಬಿಗ್​ಬಾಸ್​ನಿಂದ ಹೊರಗೆ ಬಂದು ನೋಡಿದಾಗ ನನಗೆ ಆಶ್ಚರ್ಯವಾಗಿದೆ ಎಂದರು.

ನನ್ನ ಇನ್​ಸ್ಟಾಗ್ರಾಂನಲ್ಲಿ, ಕಲರ್ಸ್ ವಾಹಿನಿಯ ಇನ್​ಸ್ಟಾಗ್ರಾಂನಲ್ಲಿ ನನ್ನ ಬಗ್ಗೆ ಅದೆಷ್ಟು ಪಾಸಿಟಿವ್ ಆದ ಕಮೆಂಟ್​ಗಳಿವೆ. ಇದು ನಿಜವಾ ಎನ್ನಿಸುವಷ್ಟು ಒಳ್ಳೆಯ ಕಮೆಂಟ್​ಗಳು ಬಂದಿವೆ. ಇಷ್ಟು ದಿನ ನನಗೆ ನಾನು ಅಂದುಕೊಂಡಿದ್ದೆ ನಾನು ಪಾಸಿಟಿವ್ ವ್ಯಕ್ತಿ ಎಂದು. ಆದರೆ ಜನರೇ ಈಗ ಹೇಳುತ್ತಿದ್ದಾರೆ ತನಿಷಾ ಪಾಸಿಟಿವ್ ವ್ಯಕ್ತಿ ಎಂದು. ಇದು ನಿಜಕ್ಕೂ ನನಗೆ ಆಶ್ಚರ್ಯ ತಂದಿದೆ. ಇದು ಬಿಗ್​ಬಾಸ್ ಗೆದ್ದಿದ್ದಕ್ಕಿಂತಲೂ ಹೆಚ್ಚಿಗೆ ಖುಷಿ ಆಗಿದೆ. ಇದಕ್ಕಾಗಿ ನಾನು ಬಿಗ್​ಬಾಸ್ ತಂಡಕ್ಕೆ ಜೀವನ ಪೂರ್ತಿ ಚಿರಋಣಿ ಆಗಿರುತ್ತೀನಿ ಎಂದರು.

ಯಾರು ಗೆಲ್ಲಬೇಕು ಎಂದು ಕೇಳಿದ್ದಕ್ಕೆ ನನ್ನ ಮನಸ್ಸಿಗೆ ಕಾರ್ತಿಕ್ ಗೆಲ್ಲಲಿ ಎಂದಿದೆ. ಆದರೆ ಸಂಗೀತಾ ಗೆಲ್ಲುತ್ತಾರೆ. ಹಾಗೂ ಫಿನಾಲೆಗೆ ವಿನಯ್ ಹಾಗೂ ಸಂಗೀತಾ ಬರುತ್ತಾರೆ ಎಂದರು ತನಿಷಾ. ಸುದೀಪ್, ತನಿಷಾರ ನಿರ್ಮಾಣ ಸಂಸ್ಥೆಗೆ ಹಾಗೂ ಅವರು ಲಾಂಚ್ ಮಾಡುತ್ತಿರುವ ಆಭರಣ ಬ್ರ್ಯಾಂಡ್​ಗೆ ಶುಭಾಶಯಗಳನ್ನು ತಿಳಿಸಿ ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!