AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವಳಿಗೆ ಗಾಂಚಲಿ ಜಾಸ್ತಿ’; ಭವ್ಯಾ ಬಗೆಗಿನ ಅಭಿಪ್ರಾಯ ಬದಲಿಸಿಕೊಂಡ ತ್ರಿವಿಕ್ರಂ

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ತ್ರಿವಿಕ್ರಂ ಮತ್ತು ಭವ್ಯಾ ನಡುವೆ ಗೆಳೆತನ ಹಾಗೂ ಮುನಿಸು ಎರಡೂ ಇದೆ. ಭವ್ಯಾ ಅವರ ಮೈಕ್ ಅನ್ನು ತ್ರಿವಿಕ್ರಂ ಬಚ್ಚಿಟ್ಟಿದ್ದರಿಂದ ಅವರ ನಡುವೆ ಜಗಳ ನಡೆದಿದೆ. ಆದಾಗ್ಯೂ, ಈ ಜಗಳ ಕೆಲವೇ ಗಂಟೆಗಳಲ್ಲಿ ಸರಿಹೋಗಿದೆ. ಇವರ ನಡುವೆ ಅನೇಕ ಬಾರಿ ಈ ಘಟನೆ ನಡೆದಿದೆ.

‘ಅವಳಿಗೆ ಗಾಂಚಲಿ ಜಾಸ್ತಿ’; ಭವ್ಯಾ ಬಗೆಗಿನ ಅಭಿಪ್ರಾಯ ಬದಲಿಸಿಕೊಂಡ ತ್ರಿವಿಕ್ರಂ
ಭವ್ಯಾ-ತ್ರಿವಿಕ್ರಂ
ರಾಜೇಶ್ ದುಗ್ಗುಮನೆ
|

Updated on: Dec 19, 2024 | 6:58 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿರೋದು ತಿಳಿದೇ ಇದೆ. ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಇದು ಅವರ ಆಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಬಗ್ಗೆ ಸುದೀಪ್ ಎಚ್ಚರಿಕೆ ನೀಡಿದ್ದರು. ಆದರೆ, ಆ ಬಗ್ಗೆ ಇವರು ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈಗ ಭವ್ಯಾ ಬಗೆಗಿನ ಅಭಿಪ್ರಾಯವನ್ನು ತ್ರಿವಿಕ್ರಂ ಬದಲಿಸಿಕೊಂಡರೇ ಎಂಬ ಪ್ರಶ್ನೆ ಮೂಡುವಂತೆ ಆಗಿದೆ.

‘ಬಿಗ್ ಬಾಸ್’ ಮನೆಯಲ್ಲಿ ತ್ರಿವಿಕ್ರಂ ಅವರಿಂದ ಭವ್ಯಾ ದೂರ ಹೋಗಲು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ಭವ್ಯಾ ವಿಚಾರದಲ್ಲಿ ತ್ರಿವಿಕ್ರಂ ಕೂಡ ಇದೇ ಪರಿಸ್ಥಿತಿಯಲ್ಲಿ ಇದ್ದಾರೆ. ಈ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲ ಒಟ್ಟಿಗೆ ಇರುತ್ತಾರೆ. ಈಗ ಭವ್ಯಾ ಅವರ ಮೈಕ್​ನ ತ್ರಿವಿಕ್ರಂ ಬಚ್ಚಿಟ್ಟಿದ್ದರು. ಇದಕ್ಕೆ ಭವ್ಯಾ ಅವರಿಗೆ ಸಾಕಷ್ಟು ಕೋಪ ಬಂದಿದೆ.

ಯಾರೇ ಮೈಕ್ ಹಾಕದೇ ಓಡಾಡಿದರೆ ಬಿಗ್ ಬಾಸ್ ‘ಮೈಕ್ ಧರಿಸಿಕೊಳ್ಳಿ’ ಎಂಬ ಘೋಷಣೆ ಮಾಡುತ್ತಾರೆ. ತ್ರಿವಿಕ್ರಂ ಮೈಕ್ ಬಚ್ಚಿಟ್ಟಿದ್ದರಿಂದ ಭವ್ಯಾ ಅವರು ಮೌನವಾಗಿಯೇ ಬಂದು ಮೈಕ್ ಹುಡುಕುವ ಪ್ರಯತ್ನ ಮಾಡಿದರು. ಆದರೆ, ಮೈಕ್ ಸಿಕ್ಕಿಲ್ಲ. ಮೈಕ್ ಇಲ್ಲದ ಕಾರಣ ಮೌನವಾಗಿ ಮನೆಯಲ್ಲ ಸುತ್ತಾಡುತ್ತಿದ್ದರು. ಆಗ, ಬಿಗ್ ಬಾಸ್ ಕಡೆಯಿಂದ ಮೈಕ್ ಧರಿಸಿಕೊಳ್ಳುವಂತೆ ಆದೇಶ ಬಂತು.

ಆಗ ತ್ರಿವಿಕ್ರಂ ಅವರು ಬಚ್ಚಿಟ್ಟಿದ್ದ ಮೈಕ್​ನ ಅವರ ಹಾಸಿಗೆಯ ಮೇಲೆ ಇಟ್ಟಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಭವ್ಯಾ ಅವರು ಮೈಕ್​ನ ತೆಗೆದುಕೊಂಡು ಹೋಗಿದ್ದಾರೆ. ಮೈಕ್ ತೆಗೆದುಕೊಳ್ಳುವಾಗ ಅವರಲ್ಲಿ ಕೋಪ ಎದ್ದು ಕಾಣುತ್ತಿತ್ತು. ಈ ಬಗ್ಗೆ ಮನೆಯ ಇತರರು ತ್ರಿವಿಕ್ರಂ ಬಳಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅವರು, ‘ಅವಳಿಗೆ ಗಾಂಚಲಿ’ ಎಂದು ಉತ್ತರಿಸಿದರು.

ಇದನ್ನೂ ಓದಿ: ‘ಅವರ ತಂಗಿಯರು ನೋಡ್ತಾ ಇರಲ್ವಾ’; ಗೌತಮಿ ಪ್ರಶ್ನೆಗೆ ಮಂಕಾದ ಹನುಮಂತ; ಮಾಡಿದ ತಪ್ಪೇನು?

ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಎಷ್ಟೇ ಮುನಿಸು ಮೂಡಿದರೂ ಕೆಲವೇ ಗಂಟೆಗಳಲ್ಲಿ ಅದು ಸರಿ ಹೋಗುತ್ತದೆ ಎಂಬುದು ವೀಕ್ಷಕರಿಗೂ ತಿಳಿದಿದೆ. ಇದು ಕೂಡ ಹಾಗೆಯೇ ಆಗಿದೆ. ಈ ರೀತಿಯ ಘಟನೆ ಈ ಮೊದಲು ಸಾಕಷ್ಟು ಬಾರಿ ಆಗಿದೆ. ಫನ್​ಗೋಸ್ಕರ ಇವರು ಜಗಳ ಆಡಿಕೊಂಡಿದ್ದೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?