ಬಿಗ್ ಬಾಸ್ ಒಪ್ಪಂದದ ಮೇಲೆ ಅನುಮಾನ; ಸ್ಪರ್ಧಿಗಳ ಹೆಸರು ಮೊದಲೇ ಗೊತ್ತಿತ್ತು ಎಂದ ತ್ರಿವಿಕ್ರಮ್

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದಷ್ಟು ನಿಯಮಗಳು ಇವೆ. ಹೊಸ ಸೀಸನ್​ ಆರಂಭ ಆಗುವುದಕ್ಕೂ ಮುನ್ನ ಸ್ಪರ್ಧಿಗಳಿಗೆ ಇನ್ನುಳಿದ ಸ್ಪರ್ಧಿಗಳ ಪೂರ್ತಿ ಲಿಸ್ಟ್ ತಿಳಿದಿರಲ್ಲ ಎಂಬುದು ಎಲ್ಲರಿಗೂ ಇರುವ ನಂಬಿಕೆ. ಆದರೆ ಈ ಬಾರಿ ಆ ನಂಬಿಕೆಗೆ ಪೆಟ್ಟು ಬಂದಂತಿದೆ. ತ್ರಿವಿಕ್ರಮ್ ಅವರು ತಮಗೆ ಸ್ಪರ್ಧಿಗಳ ಲಿಸ್ಟ್ ಮೊದಲೇ ಗೊತ್ತಿತ್ತು ಎನ್ನುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ.

ಬಿಗ್ ಬಾಸ್ ಒಪ್ಪಂದದ ಮೇಲೆ ಅನುಮಾನ; ಸ್ಪರ್ಧಿಗಳ ಹೆಸರು ಮೊದಲೇ ಗೊತ್ತಿತ್ತು ಎಂದ ತ್ರಿವಿಕ್ರಮ್
ತ್ರಿವಿಕ್ರಮ್
Follow us
|

Updated on: Oct 28, 2024 | 10:25 PM

ಕಿರುತೆರೆ ನಟಿ ಮೋಕ್ಷಿತಾ ಅವರು ಇಷ್ಟು ದಿನ ‘ಬಿಗ್ ಬಾಸ್​ ಕನ್ನಡ 11’ ಶೋನಲ್ಲಿ ಸೈಲೆಂಟ್ ಆಗಿದ್ದರು. ಈ ವಾರ ಅವರು ಎಲಿಮಿನೇಷನ್​ನಿಂದ ಜಸ್ಟ್​ ಪಾರಾಗಿದ್ದಾರೆ. ತಾವು ಸೇಫ್ ಆಗಿರುವುದು ತಿಳಿದ ಬಳಿಕ ಅವರ ಆಟದ ವರಸೆಯೇ ಬದಲಾಗಿದೆ. ಈವರೆಗೆ ತಮ್ಮ ಬಗ್ಗೆ ಕೆಲವರು ಆಡಿದ ಮಾತುಗಳನ್ನು ಅವರು ನಿರ್ಲಕ್ಷಿಸಿದ್ದರು. ಆದರೆ ಈಗ ಆ ಎಲ್ಲ ಮಾತುಗಳಿಗೆ ತಿರುಗೇಟು ನೀಡಲು ಶುರು ಮಾಡಿದ್ದಾರೆ. ‘ಇವರೆಲ್ಲ 10 ವಾರ ಮಾತ್ರ ಇರೋದು’ ಎಂದು ಹೇಳಿದ್ದ ತ್ರಿವಿಕ್ರಮ್​ಗೆ ಮೋಕ್ಷಿತಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಬೇರೆ ವಿಷಯಗಳು ಕೂಡ ಬಹಿರಂಗ ಆಗಿವೆ.

ಮೋಕ್ಷಿತಾ ಮುಂತಾದವರು ಕೇವಲ 10 ವಾರ ಇರುತ್ತಾರೆ ಎಂದು ತ್ರಿವಿಕ್ರಮ್ ಅವರು ಉಗ್ರಂ ಮಂಜು ಬಳಿ ಹೇಳಿದ್ದರು. ಆ ವಿಷಯ ಮೋಕ್ಷಿತಾ ಅವರ ಕಿವಿಗೆ ಬಿದ್ದಿತ್ತು. ಇಷ್ಟು ದಿನ ಸುಮ್ಮನಿದ್ದ ಅವರು ಈಗ ಎಲಿಮಿನೇಷನ್​ನಿಂದ ಪಾರಾದ ಬಳಿಕ ಅದೇ ವಿಷಯ ಇಟ್ಟುಕೊಂಡು ಜಗಳ ಆರಂಭಿಸಿದ್ದಾರೆ. ಆಗ ತ್ರಿವಿಕ್ರಮ್ ಅವರ ಇನ್ನೊಂದು ಹೇಳಿಕೆ ಕೂಡ ಹಲ್​ಚಲ್​ ಎಬ್ಬಿಸಿತು.

‘ಈ ಬಾರಿ ಯಾರೆಲ್ಲ ಬಿಗ್ ಬಾಸ್​ಗೆ ಬರುತ್ತಾರೆ ಎಂಬುದು ಗೊತ್ತಾಗ ನಂತರವೇ ನಾನು ಇಲ್ಲಿಗೆ ಬರಲು ಒಪ್ಪಿದ್ದು’ ಎಂಬರ್ಥದಲ್ಲಿ ತ್ರಿವಿಕ್ರಮ್ ಅವರು ಮಾತನಾಡಿದ್ದರು. ಆ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ. ‘ಲಿಸ್ಟ್ ನಿಮಗೆ ಮೊದಲೇ ಗೊತ್ತಿತ್ತಾ’ ಎಂದು ಮೋಕ್ಷಿತಾ ಹಾಗೂ ಗೌತಮಿ ಅವರು ಮರುಪ್ರಶ್ನೆ ಮಾಡಿದ್ದರು. ‘ನಾನು ತಿಳಿದುಕೊಂಡೇ ಬಂದಿದ್ದು’ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ‘ಹಾಗಾದ್ರೆ ಲಿಸ್ಟ್ ಮೊದಲೇ ಕೊಡ್ತೀರಾ ಬಿಗ್ ಬಾಸ್?’ ಎಂದು ಬಿಗ್ ಬಾಸ್​ಗೆ ಇನ್ನುಳಿದವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ

ತ್ರಿವಿಕ್ರಮ್ ಹೇಳಿದ ಈ ಮಾತುಗಳಿಂದಾಗಿ ಬಿಗ್ ಬಾಸ್​ ಮೇಲೆಯೇ ಅನುಮಾನ ಮೂಡುವಂತಾಗಿದೆ. ಹಾಗಾಗಿ ಈ ಮಾತನ್ನು ಬಿಗ್ ಬಾಸ್ ಇಷ್ಟಕ್ಕೇ ಬಿಡುವುದಿಲ್ಲ ಎನಿಸುತ್ತದೆ. ಒಂದು ವೇಳೆ ಈ ವಾರಾಂತ್ಯದ ಸಂಚಿಕೆ ನಡೆಸಿಕೊಡಲು ಸುದೀಪ್ ಬಂದರೆ ಅವರು ಕೂಡ ಈ ವಿಚಾರವನ್ನು ಚರ್ಚಿಸುವ ಸಾಧ್ಯತೆ ಇರುತ್ತದೆ. ತ್ರಿವಿಕ್ರಮ್ ಅವರ ನಡೆ-ನುಡಿ ಕೆಲವರಿಗೆ ಹಿಡಿಸುತ್ತಿಲ್ಲ. ಅತಿಯಾದ ಆತ್ಮಿವಿಶ್ವಾಸದಲ್ಲಿ ಅವರು ವರ್ತಿಸುತ್ತಿದ್ದಾರೆ. ಇದರಿಂದ ಬೇರೆ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಕಷ್ಟಪಟ್ಟು ನಡೆದು ಬಂದ ದರ್ಶನ್; ಈ ಬೆನ್ನು ನೋವು ಯಾರಿಗೂ ಬೇಡ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್