AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಸಾ ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ಘಟನೆ

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹಂಸಾ ಅವರು ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಆದರೆ, ಕ್ಯಾಪ್ಟನ್ ಆಗಿ ಅವರ ಕಾರ್ಯಕ್ಷಮತೆ ಮತ್ತು ಜಗದೀಶ್ ಜೊತೆಗಿನ ಅವರ ಸಂಬಂಧ ಅವರ ಜನಪ್ರಿಯತೆಯ ಮೇಲೆ ಪರಿಣಾಮ ಬೀರಿತು. ಅಂತಿಮವಾಗಿ, ಅವರು ಕಡಿಮೆ ಮತಗಳನ್ನು ಪಡೆದು ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದರು.

ಹಂಸಾ ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ಘಟನೆ
ಹಂಸಾ
Follow us
ರಾಜೇಶ್ ದುಗ್ಗುಮನೆ
|

Updated on: Oct 29, 2024 | 6:56 AM

‘ಹಂಸಾ ಅವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅವರಿಗೆ ಜನಪ್ರಿಯತೆ ಇದೆ. ಅವರು ಬಿಗ್ ಬಾಸ್​ಗೆ ಬಂದು ಒಂದು ತಿಂಗಳ ಜರ್ನಿಯನ್ನು ಕೊನೆಗೊಳಿಸಿದ್ದಾರೆ. ಕಳೆದ ವಾರ ನಾಮಿನೇಟ್ ಆದವರ ಪೈಕಿ ಕಡಿಮೆ ಮತ ಪಡೆದು ಅವರು ಔಟ್ ಆಗಿದ್ದಾರೆ. ಬಿಗ್ ಬಾಸ್ ನಿರೂಪಣೆಯಲ್ಲಿ ಕಿಚ್ಚ ಸುದೀಪ್ ಇರಲಿಲ್ಲ. ಹೀಗಾಗಿ ಅವರ ಜೊತೆ ಮಾತನಾಡದೆ ಹಂಸಾ ಹೊರಕ್ಕೆ ಹೋಗಿದ್ದಾರೆ. ಈ ವಾರ ಅದಕ್ಕೆ ಅವಕಾಶ ಮಾಡಿಕೊಡಬಹುದು.

ಬಿಗ್ ಬಾಸ್​ನಲ್ಲಿ ಮಹಿಳೆಯರು ಕ್ಯಾಪ್ಟನ್ ಆಗಲು ಒದ್ದಾಡಿದ್ದು ಇದೆ. ಕಳೆದ ಸೀಸನ್​​ನಲ್ಲಿ ಅದೇ ರೀತಿ ಆಗಿತ್ತು. ಆದರೆ, ಹಂಸಾ ಅವರು ವಿಶೇಷ ಸಾಧನೆ ಮಾಡಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಕ್ಯಾಪ್ಟನ್ ಆದರು. ಇದು ಅವರಿಗೆ ಹೆಗ್ಗಳಿಕೆಯ ವಿಚಾರ. ಇದರ ಜೊತೆಗೆ ಅವರಿಗೆ ಇದು ಹಿನ್ನಡೆಯನ್ನೂ ತಂದಿತು ಎನ್ನಬಹುದು.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವರು ಮೊದಲ ಕ್ಯಾಪ್ಟನ್ ಏನೋ ಆದರು. ಆದರೆ, ಆ ಬಳಿಕ ಅವರು ಅನುಭವಿಸಿದ ಸಮಸ್ಯೆಗಳು ಒಂದೆರಡಲ್ಲ. ಕ್ಯಾಪ್ಟನ್ ಆಗುವಾಗ ನರಕವಾಸಿಗಳೆಲ್ಲರನ್ನೂ ಸ್ವರ್ಗಕ್ಕೆ ತರುತ್ತೇನೆ ಎನ್ನುವ ಭರವಸೆ ಕೊಟ್ಟಿದ್ದರು. ಆದರೆ, ಈ ಭರವಸೆ ಈಡೇರಲೇ ಇಲ್ಲ. ಇದರಿಂದ ಮನೆಯಲ್ಲಿ ಅವರ ವಿರುದ್ಧ ಅಸಮಾಧಾನ ಎದ್ದಿತ್ತು. ಕ್ಯಾಪ್ಟನ್ ಆಗಿ ಅವರು ಉಸ್ತುವಾರಿ ನಡೆಸಿಕೊಡುವಾಗ ಸಾಕಷ್ಟು ತಪ್ಪುಗಳು ನಡೆದವು. ಇದರಿಂದ ಇಡೀ ಮನೆ ಅವರ ವಿರುದ್ಧ ತಿರುಗಿ ಬಿತ್ತು. ಇವುಗಳಿಂದ ಅವರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಜಗದೀಶ್ ಹಾಗೂ ಹಂಸಾ ಕೆಮಿಸ್ಟ್ರಿ ಸಾಕಷ್ಟು ಗಮನ ಸೆಳೆಯಿತು. ಅವರು ಇದ್ದಷ್ಟು ದಿನ ಹಂಸಾ ಹೈಲೈಟ್ ಆದರು. ಆದರೆ, ಜಗದೀಶ್ ಹೊರ ಹೋಗುತ್ತಿದ್ದಂತೆ ಹಂಸಾ ಅವರು ಅಷ್ಟಾಗಿ ಹೈಲೈಟ್ ಆಗಲೇ ಇಲ್ಲ. ಇದು ಕೂಡ ಹಂಸಾಗೆ ಹಿನ್ನಡೆ ಉಂಟು ಮಾಡಿತು.

ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್: ದೊಡ್ಮನೆಯಲ್ಲಿ ಹಂಸಾ ಜರ್ನಿ ಇಲ್ಲಿಗೆ ಮುಕ್ತಾಯ

ಎಲಿಮಿನೇಷನ್ ಕೊನೆಯ ಹಂತದಲ್ಲಿ ಹಂಸಾ ಹಾಗೂ ಮೋಕ್ಷಿತಾ ಇದ್ದರು. ಈ ಪೈಕಿ ಮೋಕ್ಷಿತಾ ಅವರು ಉಳಿದುಕೊಂಡರೆ ಹಂಸಾ ಹೊರ ನಡೆದರು. ಅವರಿಗೆ ತಾವೇ ಹೊರ ಹೋಗುವುದು ಎನ್ನುವುದು ಮೊದಲೇ ಗೊತ್ತಿತ್ತು. ಹೀಗಾಗಿ, ನಾನೇ ಎಲಿಮಿನೇಷನ್ ಆಗುತ್ತೇನೆ ಎಂದು ಅವರು ಹೇಳುತ್ತಲೇ ಇದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ