AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯ ಟಿವಿಯಲ್ಲಿ ‘ಕಾದಂಬರಿ’ ಮತ್ತು ‘ನಿನ್ನಿಂದಲೇ’; ಮಸ್ತ್​ ಮನರಂಜನೆಗೆ 2 ಹೊಸ ಸೀರಿಯಲ್​

‘ಕಾದಂಬರಿ’ ಮತ್ತು ‘ನಿನ್ನಿಂದಲೇ’ ಧಾರಾವಾಹಿಗಳ ಪ್ರಸಾರಕ್ಕೆ ಉದಯ ಟಿವಿ ಸಜ್ಜಾಗಿದೆ. ಆ.23ರಿಂದ ಬಿತ್ತರವಾಗಲಿರುವ ಈ ಸೀರಿಯಲ್​ಗಳಲ್ಲಿ ಡಿಫರೆಂಟ್​ ಕಥಾಹಂದರ ಇದೆ.

ಉದಯ ಟಿವಿಯಲ್ಲಿ ‘ಕಾದಂಬರಿ’ ಮತ್ತು ‘ನಿನ್ನಿಂದಲೇ’; ಮಸ್ತ್​ ಮನರಂಜನೆಗೆ 2 ಹೊಸ ಸೀರಿಯಲ್​
ಉದಯ ಟಿವಿಯಲ್ಲಿ ‘ಕಾದಂಬರಿ’ ಮತ್ತು ‘ನಿನ್ನಿಂದಲೇ’; ಮಸ್ತ್​ ಮನರಂಜನೆಗೆ 2 ಹೊಸ ಸೀರಿಯಲ್​
TV9 Web
| Updated By: ಮದನ್​ ಕುಮಾರ್​|

Updated on: Aug 19, 2021 | 7:12 PM

Share

ದೈನಂದಿನ ಧಾರಾವಾಹಿಗಳ ಮೂಲಕ ಮನರಂಜನೆ ನೀಡುತ್ತ ಬಂದಿರುವ ಉದಯ ವಾಹಿನಿಗೆ ದಶಕಗಳ ಇತಿಹಾಸವಿದೆ. ಈವರೆಗೂ ನೂರಾರು ಸೀರಿಯಲ್​ಗಳು ಈ ವಾಹಿನಿಯಲ್ಲಿ ಪ್ರಸಾರ ಕಂಡಿವೆ. ಹೊಸ ಹೊಸ ಧಾರಾವಾಹಿಗಳ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಉದಯ ವಾಹಿನಿ ಈಗ ಇನ್ನೆರಡು ಹೊಸ ಸೀರಿಯಲ್​ಗಳನ್ನು ಪರಿಚಯಿಸುತ್ತಿದೆ. ‘ಕಾದಂಬರಿ’ ಮತ್ತು ‘ನಿನ್ನಿಂದಲೇ’ ಶೀರ್ಷಿಕೆಯ ಎರಡು ಸೀರಿಯಲ್​ಗಳು ಮಧ್ಯಾಹ್ನದ ಮನರಂಜನೆಗೆ ಸಜ್ಜಾಗಿವೆ. ಆ.23ರಿಂದ ‘ಕಾದಂಬರಿ’ ಧಾರಾವಾಹಿ ಮಧ್ಯಾಹ್ನ 2 ಗಂಟೆಗೆ ಪ್ರಸಾರವಾಗಲಿದ್ದು, 2.30ಕ್ಕೆ ‘ನಿನ್ನಿಂದಲೇ’ ಬಿತ್ತರವಾಗಲಿದೆ.

ಏನು ಕಾದಂಬರಿಯ ಕಹಾನಿ?

ಶ್ರೀದುರ್ಗಾ ಕ್ರಿಯೇಷನ್ಸ್‌ ಮೂಲಕ ‘ಕಾದಂಬರಿ’ ಸೀರಿಯಲ್ ಮೂಡಿಬರಲಿದೆ. ಇದರ ಕಥಾನಾಯಕಿ ಕಾದಂಬರಿಯು ಕೆಳಮಧ್ಯಮ ವರ್ಗದ ಹುಡುಗಿ. ದುಡಿಯಲು ವಿದೇಶಕ್ಕೆ ಹೋದ ಅಪ್ಪನ ಸುಳಿವಿಲ್ಲ. ಇದ್ದ ಒಬ್ಬ ಪ್ರೀತಿಯ ಅಣ್ಣ ಜೀವನದಲ್ಲಿ ಸೋತು ಮದ್ಯವ್ಯಸನಿ ಆಗಿದ್ದಾನೆ. ಹೀಗಿರುವಾಗ ತುಂಬು ಕುಟುಂಬಕ್ಕೆ ಆಧಾರವಾಗಿ ಇವಳೊಬ್ಬಳದೇ ದುಡಿಮೆ. ಮನೆಯನ್ನು ನಿಭಾಯಿಸಲು ಹಗಲಿರುಳು ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವಳ ಶ್ರದ್ಧೆ, ಪರಿಶ್ರಮ ಕಂಡು ಇವಳ ಬಾಸ್‌ ಸುದರ್ಶನ್‌ ಚಕ್ರವರ್ತಿಗೆ ಇವಳ ಮೇಲೆ ಅಭಿಮಾನ, ಅಪಾರ ನಂಬಿಕೆ.

ಮನೆ ಮಗನಂತೆ ದುಡಿತಿರೋ ಕಾದಂಬರಿಗೆ ತನ್ನದೇ ಪುಟ್ಟ ಕನಸಿನ ಗೂಡಿದೆ. ಈಗಿನ ಕಾಲದ ಹುಡುಗಿಯರಿಗೆಲ್ಲಾ ಬಣ್ಣ-ಬಣ್ಣದ ಕನಸುಗಳಿದ್ದರೆ, ಕಾದಂಬರಿಗೆ ಇರುವುದು ಒಂದೇ ಆಸೆ. ಇವಳ ಮನಸನ್ನು ಅರ್ಥ ಮಾಡಿಕೊಳ್ಳುವ ಒಬ್ಬ ಸಂಗಾತಿಯ ಕೈಹಿಡಿದು, ಮುದ್ದಾದ ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ಸಂಸಾರ ತೂಗಿಸಬೇಕು ಅಂತ. ಆದರೆ ಬೆನ್ನೇರಿರೋ ಮನೆ ಜವಾಬ್ದಾರಿ ಇವಳ ಕನಸನ್ನು ನನಸು ಮಾಡುತ್ತಾ ಎಂಬುದು ‘ಕಾದಂಬರಿ’ ಧಾರಾವಾಹಿಯ ಕೌತುಕ. ‘ಎಲ್ಲಾ ಧಾರಾವಾಹಿಗಳಲ್ಲಿ ತೋರಿಸುವ ದ್ವೇಷ ಅಸೂಯೆಗಳ ಕಿತ್ತಾಟವಿಲ್ಲದೆ, ಮಮತೆಗೆ ಕರಗುವ ಮಿಡ್ಲ್‌ ಕ್ಲಾಸ್‌ ಫ್ಯಾಮಿಲಿಯ ಹೈಕ್ಲಾಸ್‌ ಕಥೆ ಇದು’ ಎಂದು ನಿರ್ದೇಶಕ ದರ್ಶಿತ್‌ ಭಟ್ ಹೇಳಿದ್ದಾರೆ.

ಗಣಪತಿ ಭಟ್‌ ಇದರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸುನಾದ್‌ ಗೌತಮ್ ಸಂಗೀತ ಸಂಯೋಜನೆ, ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣ, ಗಿರೀಶ್‌ ಚಿತ್ರಕಥೆ ಮತ್ತು ತುರುವೆಕೆರೆ ಪ್ರಸಾದ್‌ ಸಂಭಾಷಣೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ನಾಯಕಿಯಾಗಿ ಪವಿತ್ರ ನಾಯಕ್ ಮತ್ತು ನಾಯಕನಾಗಿ ರಕ್ಷಿತ್‌ ನಟಿಸುತ್ತಿದ್ದಾರೆ. ನಾಗೇಂದ್ರ ಶಾ, ಮಾಲತಿ, ಸುರೇಶ್ ರೈ, ಗಾಯಿತ್ರಿ ಪ್ರಭಾಕರ್, ಪ್ರಥಮಾ ರಾವ್, ನಿರಂಜನ್, ಶ್ವೇತಾ, ಪ್ರಗತಿ, ಅರ್ಪಿತಾ, ಪೃಥ್ವಿ ಯುವ ಸಾಗರ್, ಲಿಖಿತ, ಅಶೋಕ್ ಬಿ.ಎ, ರಾಧಿಕಾ ಶೆಟ್ಟಿ, ಆನಂದ್ ಹೀಗೆ ಹಲವಾರು ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸ್ನೇಹ-ಪ್ರೇಮಗಳ ‘ನಿನ್ನಿಂದಲೇ’

ಜನಪ್ರಿಯ ಕಲಾವಿದ ರಾಜೇಶ್​ ನಟರಂಗ ಅವರು ‘ನಿನ್ನಿಂದಲೇ’ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಸುಂದರವಾದ ಲವ್​ಸ್ಟೋರಿಯನ್ನು ಒಳಗೊಂಡಿರುವ ಸೀರಿಯಲ್​. ಧ್ವನಿ ಕ್ರಿಯೇಷನ್ಸ್​ ಲಾಂಚನದಲ್ಲಿ ಇದೇ ಮೊದಲ ಬಾರಿಗೆ ಧಾರಾವಾಹಿ ನಿರ್ಮಾಣ ಆರಂಭಿಸಿರುವ ರಾಜೇಶ್​ ಅವರು ಈ ಪ್ರೇಮಕಥೆಯ ಮೂಲಕ ಅನೇಕ ಕೌಟುಂಬಿಕ ಆಂಶಗಳನ್ನು ವೀಕ್ಷಕರಿಗೆ ತೋರಿಸಲಿದ್ದಾರೆ.

ರಾಜಲಕ್ಷ್ಮಿಯದು ದೊಡ್ಡ ಕುಟುಂಬ. ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ ಎರಡೂ ಕುಟುಂಬ ದೂರ ಆಗಿವೆ. ಈ ಸಂಬಂಧಗಳನ್ನ ಮತ್ತೆ ಬೆಸೆಯೋಕೆ ಇರುವ ದಾರಿ ಎಂದರೆ ತನ್ನ ಮೊಮ್ಮಕ್ಕಳಾದ ಅನನ್ಯ ಮತ್ತು ವರುಣ್​ ಮದುವೆ ಮಾಡುವುದು. ಅನನ್ಯಾಳಿಗೆ ವರುಣ್‌ ತುಂಬಾ ಇಷ್ಟ. ಇಬ್ಬರ ನಡುವಿನ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ ಎಂಬುದನ್ನು ತಿಳಿಯಲು ಈ ಧಾರಾವಾಹಿಯ ನೋಡಬೇಕು.

ಶರತ್‌ ಪರ್ವತವಾಣಿ ಬರೆದ ಕಥೆಗೆ ವಿನೋದ್‌ ಸಂಭಾಷಣೆ ಬರೆಯುತ್ತಿದ್ದಾರೆ. ದಿಲೀಪ್‌ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಚಿತ್ರಶ್ರೀ, ನಾಯಕನ ಪಾತ್ರದಲ್ಲಿ ದೀಪಕ್‌ ನಟಿಸುತ್ತಿದ್ದಾರೆ. ಜಯಶ್ರೀ, ಲಲಿತಾಂಜಲಿ, ನಮಿತಾ ದೇಸಾಯಿ, ಪ್ರಶಾಂತ್‌, ನಂದೀಶ್​, ಶೋಭಿತಾ ಮುಖ್ಯ ಪಾತ್ರಗಳನ್ನ ನಿಭಾಯಿಸುತ್ತಿದ್ದಾರೆ. ಇದರ ಶೀರ್ಷಿಕೆ ಗೀತೆಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ವಸಂತ್‌ ಸಂಗೀತ ಸಂಯೋಜನೆ ಮಾಡಿದ್ದು, ಮಾನಸಾ ಹೊಳ್ಳಾ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:

ಬಾಲಿವುಡ್​ನಲ್ಲಿ ಸ್ಟಾರ್​ ಆದಮೇಲೂ ಸುಶಾಂತ್​ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ