AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಧಾರಾವಾಹಿ ‘ಶಾಂತಿ ನಿವಾಸ’ ಪ್ರಸಾರಕ್ಕೆ ಸಜ್ಜಾದ ಉದಯ ಟಿವಿ; ಕಥೆ ಬಗ್ಗೆ ಇಲ್ಲಿದೆ ಮಾಹಿತಿ

ಈಗಾಗಲೇ ಅನೇಕ ಧಾರಾವಾಹಿಗಳು ‘ಉದಯ’ ಟಿವಿ ಪ್ರೇಕ್ಷಕರ ಮನ ಗೆದ್ದಿವೆ. ಈಗ ಹೊಸ ಧಾರಾವಾಹಿಯ ಪ್ರಸಾರಕ್ಕೆ ಈ ವಾಹಿನಿ ಸಜ್ಜಾಗಿದೆ. ‘ಶಾಂತಿನಿವಾಸ’ ಶೀರ್ಷಿಕೆಯ ಹೊಸ ಸೀರಿಯಲ್​ ಜುಲೈ 22ರಂದು ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ಈ ಧಾರಾವಾಹಿ ಬಿತ್ತರ ಆಗಲಿದೆ. ‘ಶಾಂತಿ’ ನಿವಾಸದ ಕಥೆಯ ಬಗ್ಗೆ ಮಾಹಿತಿ ಇಲ್ಲಿದೆ..

ಹೊಸ ಧಾರಾವಾಹಿ ‘ಶಾಂತಿ ನಿವಾಸ’ ಪ್ರಸಾರಕ್ಕೆ ಸಜ್ಜಾದ ಉದಯ ಟಿವಿ; ಕಥೆ ಬಗ್ಗೆ ಇಲ್ಲಿದೆ ಮಾಹಿತಿ
‘ಶಾಂತಿ ನಿವಾಸ’ ಪಾತ್ರವರ್ಗ
ಮದನ್​ ಕುಮಾರ್​
|

Updated on: Jul 16, 2024 | 9:48 PM

Share

ಎಂದಿನಂತೆ ಒಂದು ಕುಟುಂಬದ ಕಥೆಯನ್ನು ‘ಶಾಂತಿ ನಿವಾಸ’ ಸೀರಿಯಲ್​ನಲ್ಲಿ ಹೇಳಲಾಗುತ್ತದೆ. ಕುಟುಂಬ ಎಂದರೆ ಇದು ಕೂಡು ಕುಟುಂಬ. ಇಲ್ಲಿ ಕಥಾನಾಯಕಿ ಶಾಂತಿಯೇ ಹೈಲೈಟ್​. ಆಕೆಯ ಸ್ವಭಾವವನ್ನು ಈ ರೀತಿ ವಿವರಿಸಬಹುದು. ಶಾಂತಿ ಎಂದರೆ ಬರೀ ಒಂದು ಹೆಸರಲ್ಲ. ಆಕೆ ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು. ಗೋವರ್ಧನರಾಯರು ಹಾಗೂ ಭಾಮಿನಿಯ ಮುದ್ದಿನ ಸೊಸೆ ಈಕೆ. ಸುಶಾಂತನ ಮುದ್ದಿನ ಮಡದಿಯಾಗಿ, ಸಿದ್ದಾರ್ಥನ ನಾದಿನಿಯಾಗಿ, ಸಾಧನಾಳ ತಂಗಿಯಾಗಿ, ಸುಕೃತಾಳ ಅತ್ತಿಗೆಯಾಗಿ, ವರ್ಷಾಳ ಮುದ್ದು ಚಿಕ್ಕಮ್ಮನಾಗಿ, ರಾಘವನ ಹೆತ್ತಮ್ಮನಾಗಿ ಶಾಂತಿ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಒಂದೇ ಮಾತಲ್ಲಿ ಹೇಳಬೇಕು ಎಂದರೆ ಆಕೆಯೇ ಮನೆಯ ನಂದಾದೀಪ. ಇದಿಷ್ಟು ಆಕೆಯ ಪಾತ್ರ ಪರಿಚಯ.

ಪ್ರತಿಯೊಬ್ಬರ ಮನಸ್ಸನ್ನುಅರಿತುಕೊಂಡು ನಡೆಯುತ್ತಾಳೆ ಶಾಂತಿ. ಎಲ್ಲರ ಬೇಕು ಬೇಡಗಳನ್ನು ಮುಂಚೆಯೇ ಅರ್ಥ ಮಾಡಿಕೊಳ್ಳುತ್ತಾಳೆ. ಆಕೆ ಅಷ್ಟೇನೂ ಓದು ಬರಹ ಕಲಿಯದಿದ್ದರೂ ಸಂಸ್ಕಾರದಲ್ಲಿ ಮತ್ತು ಅತಿಥಿ ಸತ್ಕಾರದಲ್ಲಿ ಹುಟ್ಟಿನಿಂದಲೇ ಪದವೀಧರೆ! ಕುಟುಂಬದಲ್ಲಿ ಆಕೆ ಅಜಾತಶತ್ರು. ಹಾಗಾದರೆ ಈ ಕಥೆಯಲ್ಲಿ ಟ್ವಿಸ್ಟ್​ ಬರುವುದು ಯಾವಾಗ? ಮಂಥರ ಬಂದಾಗ.

ಹೌದು, ಜಗತ್ತಿನಲ್ಲಿ ಎಲ್ಲರಿಗೂ ಶತ್ರುಗಳು ಇದ್ದೇ ಇರುತ್ತಾರೆ. ಅದೇ ರೀತಿ ಶಾಂತಿಗೂ ಮಂಥರಾ ಎಂಬ ಒಬ್ಬಳು ಶತ್ರು ಇದ್ದಾಳೆ. ತಾನೇ ಮಾಡಿದ ತಪ್ಪಿನಿಂದ ಶಿಕ್ಷೆ ಅನುಭವಿಸಿ, ಜೈಲಿನಲ್ಲಿ ಇದ್ದಷ್ಟು ದಿನವೂ ಶಾಂತಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಹಠ ತೊಟ್ಟವರು ಈ ಮಂಥರಾ. ಜೈಲಿನಿಂದ ಹೊರಬಂದ ಆಕೆ ತನ್ನ ಗೆಳತಿ ಗಗನಾ ಜೊತೆ ಸೇರಿಕೊಂಡು ಶಾಂತಿಯನ್ನು ಹುಡುಕಲು ಆರಂಭಿಸುತ್ತಾಳೆ. ಹಲವು ಪ್ರಯತ್ನಗಳ ಬಳಿಕ ಶಾಂತಿಯ ಭೇಟಿ ಆಗುತ್ತದೆ. ಶಾಂತಿಯ ಕುಟುಂಬವನ್ನು ನೋಡಿ ಮಂಥರಾಳ ದ್ವೇಷ ಇನ್ನಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಪ್ರತಿಷ್ಠಿತ ‘ಎಮ್ಮಿ ಅವಾರ್ಡ್’ ಪಡೆದ ಖ್ಯಾತ ಸೀರಿಯಲ್​ ನಿರ್ಮಾಪಕಿ ಏಕ್ತಾ ಕಪೂರ್​

ಶಾಂತಿಯ ಕುಟುಂಬದೊಳಗೆ ತಾನು ಪ್ರವೇಶಿಸಬೇಕು ಎಂಬ ಸಂಚು ಮಂಥರಾಳದ್ದು. ಅದರಂತೆ, ನಿಧಾನವಾಗಿ ಶಾಂತಿ ನಿವಾಸದ ಒಳಗೆ ಕಾಲು ಇಡುತ್ತಾಳೆ. ಆಕೆಯ ಕುತಂತ್ರ ಬುದ್ಧಿಯ ಬಗ್ಗೆ ಶಾಂತಿಗೆ ಅನುಮಾನ ಇಲ್ಲ. ಅವಳನ್ನು ತನ್ನ ಕುಟುಂಬದಲ್ಲೊಬ್ಬಳಾಗಿ ನೋಡಿಕೊಳ್ಳುತ್ತಾಳೆ. ಆದರೆ ಇನ್ನುಳಿದ ಮನೆಯ ಸದಸ್ಯರಿಗೆ ಮಂಥರಾ ಬಗ್ಗೆ ಅನುಮಾನ ನುಸುಳುತ್ತದೆ. ಅವರ ಮಾತನ್ನು ಶಾಂತಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಂತಿಮವಾಗಿ ಮಂಥರಾ ಸೇಡು ತೀರಿಸಿಕೊಳ್ಳುತ್ತಾಳಾ? ಶಾಂತಿಯ ಬದುಕಿನಲ್ಲಿ ಮುಂದೇನು ಆಗುತ್ತದೆ? ಈ ಎಲ್ಲ ಕುತೂಹಲಗಳಿಗೆ ‘ಶಾಂತಿ ನಿವಾಸ’ ಎಪಿಸೋಡ್​ಗಳಲ್ಲಿ ಉತ್ತರ ಸಿಗಲಿದೆ.

‘ಉದಯ’ ಟಿವಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿರುವ ‘ಶಾಂತಿ ನಿವಾಸ’ ಸೀರಿಯಲ್​ನಲ್ಲಿ ರೋಚಕ ತಿರುವುಗಳು ಇರಲಿವೆ ಎಂದು ತಂಡ ಹೇಳಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್