AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಕುತಂತ್ರಕ್ಕೆ ಬಲಿಯಾದ್ರಾ ಭವ್ಯಾ? ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್

ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಅವರ ಪ್ರದರ್ಶನ ಮತ್ತು ಮಂಜು ಅವರ ಕುತಂತ್ರದ ಆಟದ ಬಗ್ಗೆ ಈ ವಾರ ಚರ್ಚೆ ಆಗುತ್ತಿದೆ. ಭವ್ಯಾ ಅವರು ಉತ್ತಮವಾಗಿ ಆಡಿದರೂ, ಕ್ಯಾಪ್ಟನ್ಸಿ ರೇಸ್‌ನಲ್ಲಿ ಮಂಜು ಅವರ ಒಪ್ಪಂದಗಳಿಂದ ಸೋತರು. ಮಂಜು ಅವರು ತಮ್ಮ ಒಪ್ಪಂದಗಳಿಂದಾಗಿ ಟೀಕೆಗೆ ಗುರಿಯಾಗಿದ್ದಾರೆ ಮತ್ತು ಸುದೀಪ್ ಅವರು ಈ ವಿಷಯವನ್ನು ಪಂಚಾಯ್ತಿಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಮಂಜು ಕುತಂತ್ರಕ್ಕೆ ಬಲಿಯಾದ್ರಾ ಭವ್ಯಾ? ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್
ಭವ್ಯಾ ಗೌಡ
ರಾಜೇಶ್ ದುಗ್ಗುಮನೆ
|

Updated on: Nov 09, 2024 | 6:53 AM

Share

ಬಿಗ್ ಬಾಸ್​​ನಲ್ಲಿ ಭವ್ಯಾ ಗೌಡ ಅವರು ಚೆನ್ನಾಗಿ ಆಡುವುದಿಲ್ಲ ಎಂಬುದು ಎಂಬುದು ಅನೇಕರ ಟೀಕೆ ಆಗಿತ್ತು. ಆ ಟೀಕೆಗಳಿಗೆ ಭವ್ಯಾ ಗೌಡ ಅವರು ನೇರವಾಗಿ ಉತ್ತರ ಕೊಟ್ಟಿದ್ದಾರೆ. ಈ ವಾರ ಅವರು ಅತ್ಯುತ್ತಮವಾಗಿ ಆಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಕ್ಯಾಪ್ಟನ್ಸಿ ರೇಸ್​ನಲ್ಲಿ ಇದ್ದ ಅವರು ಕೊನೆಯ ಹಂತದಲ್ಲಿ ಎಡವಿದ್ದಾರೆ. ಇದಕ್ಕೆ ಮಂಜು ಕಾರಣ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಉಗ್ರಂ ಮಂಜು ಅವರು ಭರ್ಜರಿ ತಂತ್ರಗಳ ಮೂಲಕ ಆಟ ಆಡುತ್ತಿದ್ದಾರೆ. ಅವರ ಕುತಂತ್ರಕ್ಕೆ ಅನೇಕರು ಬಲಿಯಾಗಿದ್ದಾರೆ. ಈ ವಾರ ಮಂಜು, ಭವ್ಯಾ ಹಾಗೂ ಗೋಲ್ಡ್ ಸುರೇಶ್ ಒಂದೇ ತಂಡದಲ್ಲಿ ಇದ್ದರು. ಈ ತಂಡ ಟಾಸ್ಕ್ ಗೆಲ್ಲುವಲ್ಲಿ ಭವ್ಯಾ ಅವರ ಕೊಡುಗೆ ತುಂಬಾನೇ ಹೆಚ್ಚಿದೆ. ಇದನ್ನು ಮಂಜು ಅವರು ಗಮನದಲ್ಲಿ ಇಟ್ಟುಕೊಂಡಿಲ್ಲ. ಭವ್ಯಾ ವಿರುದ್ಧವೇ ಅವರು ಮತ ಚಲಾಯಿಸಿದ್ದಾರೆ.

ಭವ್ಯಾ ಹಾಗೂ ತ್ರಿವಿಕ್ರಂ ಅವರು ಈ ಬಾರಿಯ ಕ್ಯಾಪ್ಟನ್ಸಿ ರೇಸ್​​ನಲ್ಲಿ ಇದ್ದರು. ಮನೆಯವರಿಗೇ ಕ್ಯಾಪ್ಟನ್​ನ ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಈ ವೇಳೆ ಮಂಜು ಅವರು ಮೂರು ಬಾರಿ ಭವ್ಯಾ ವಿರುದ್ಧ ಮತ ಚಲಾಯಿಸಿದರು. ತಮ್ಮ ಜೊತೆ ಆಪ್ತರಾದವರ ಜೊತೆಯೂ ಭವ್ಯಾ ವಿರುದ್ಧ ವೋಟ್ ಹಾಕುವಂತೆ ಅವರು ಕೋರಿಕೊಂಡಿದ್ದರು.

ತ್ರಿವಿಕ್ರಂ ಪರವಾಗಿ ಮಂಜು ಮಾತನಾಡುವುದಕ್ಕೂ ಒಂದು ಕಾರಣ ಇತ್ತು. ಅದುವೇ ಒಪ್ಪಂದ. ಪ್ರತಿ ಹಂತದಲ್ಲೂ ಮಂಜು ಅವರು ಒಪ್ಪಂದ ಮಾಡಿಕೊಂಡು ಆಟ ಆಡುತ್ತಿದ್ದಾರೆ. ತ್ರಿವಿಕ್ರಂ ಜೊತೆ ಅವರು ಕೆಲವು ಒಪ್ಪಂದ ಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ಆದರೆ ತಮ್ಮನ್ನು ನಾಮಿನೇಟ್ ಮಾಡದಂತೆ ಅವರು ಕೋರಿದ್ದಾರೆ. ಇದಕ್ಕೆ ತ್ರಿವಿಕ್ರಂ ಓಕೆ ಎಂದ ಬಳಿಕವೇ ಅವರ ಪರವಾಗಿ ವೋಟ್ ಚಲಾಯಿಸಿದ್ದಾರೆ ಮಂಜು. ಕೊನೆಯಲ್ಲಿ ತ್ರಿವಿಕ್ರಂ ಕ್ಯಾಪ್ಟನ್ ಆದರು.

ಇದನ್ನೂ ಓದಿ: ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆಗೆ ಬಿಗ್ ಬಾಸ್ ಪ್ಲ್ಯಾನ್

ಈ ರೀತಿಯ ಒಪ್ಪಂದದ ಆಟದಿಂದ ಅಸಲಿ ಆಟ ಆಡೋಕೆ ಆಗಲ್ಲ. ಹೀಗಾಗಿ, ಇಂದು (ನವೆಂಬರ್ 9) ಸುದೀಪ್ ಅವರು ಈ ವಿಚಾರವಾಗಿ ಪಂಚಾಯ್ತಿಯಲ್ಲಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?