AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾಚ್ ಫಿಕ್ಸಿಂಗ್ ಕ್ಯಾಪ್ಟನ್​, ಸ್ನೇಹಿತನಿಗೆ ಕೊಟ್ಟನು ಕೈ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11: ವೀಕೆಂಡ್ ಎಪಿಸೋಡ್​ಗೆ ಬಂದಿದ್ದ ಸುದೀಪ್, ಈ ವಾರದ ಕ್ಯಾಪ್ಟನ್ ತ್ರಿವಿಕ್ರಮ್ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡು ನಾಯಕ ಆದ ಬಗ್ಗೆ ಮನೆಯಲ್ಲಿ ಚರ್ಚೆ ಮಾಡಿದರು.

ಮ್ಯಾಚ್ ಫಿಕ್ಸಿಂಗ್ ಕ್ಯಾಪ್ಟನ್​, ಸ್ನೇಹಿತನಿಗೆ ಕೊಟ್ಟನು ಕೈ
ಮಂಜುನಾಥ ಸಿ.
|

Updated on: Nov 09, 2024 | 11:33 PM

Share

ಬಿಗ್​ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಆಯ್ಕೆ ಆಗಿದ್ದಾರೆ. ಕೊನೆಯಲ್ಲಿ ಭವ್ಯಾ, ತ್ರಿವಿಕ್ರಮ್ ಅವರುಗಳು ಉಳಿದಿದ್ದಾಗ ಮತದಾನದ ಮೂಲಕ ಭವ್ಯ ಅವರನ್ನು ರೇಸಿನಿಂದ ಹೊರಗೆ ಉಳಿಸಲಾಯ್ತು. ಭವ್ಯಗೆ ಜವಾಬ್ದಾರಿ ಸಾಲದು ಇತರೆ ಇತರೆ ಕಾರಣಗಳನ್ನು ಉಗ್ರಂ ಮಂಜು ಇನ್ನಿತರರು ನೀಡಿದರಾದರೂ, ಅಸಲಿ ಕಾರಣ ಬೇರೆಯೇ ಇತ್ತು. ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು, ಗೌಥಮಿ ಅವರುಗಳು ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ತ್ರಿವಿಕ್ರಮ್ ಅನ್ನು ಕ್ಯಾಪ್ಟನ್ ಮಾಡಿದ್ದರು. ಆದರೆ ಸುದೀಪ್ ಎದುರು, ಕ್ಯಾಪ್ಟನ್, ಉಗ್ರಂ ಮಂಜುಗೆ ಕೈಕೊಟ್ಟಿದ್ದಾರೆ.

ಮೂರು ಜನರನ್ನು ನೇರ ನಾಮಿನೇಷನ್​ನಿಂದ ಬಚಾವ್ ಮಾಡಿದರೆ ನಿನ್ನನ್ನು ಕ್ಯಾಪ್ಟನ್ ಮಾಡುತ್ತೇವೆ ಎಂದು ಷರತ್ತು ವಿಧಿಸಿ ಅಥವಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಉಗ್ರಂ ಮಂಜು, ಗೌಥಮಿ ಅವರುಗಳು ತ್ರಿವಿಕ್ರಮ್​ಗೆ ಮತ ಹಾಕಿದ್ದರು. ಗೌಥಮಿ, ನನಗೆ ಈ ವಾರ ಇಂಥಹಾ ಕಡೆ ಕೆಲಸಕ್ಕೆ ಹಾಕಬಾರದು, ನಾನು ಕೇಳಿದ ಕೆಲಸವೇ ನನಗೆ ಹಾಕಬೇಕು ಎಂಬ ಷರತ್ತಿನ ಆಧಾರದಲ್ಲಿ ಓಟು ಹಾಕಿದ್ದರು. ಸುದೀಪ್ ಈ ಮ್ಯಾಚ್ ಪಿಕ್ಸಿಂಗ್ ಅನ್ನು ಟೀಕೆ ಮಾಡಿದರು.

ಸುದೀಪ್ ಎದುರು ಮಾತು ಬದಲಿಸಿದ ತ್ರಿವಿಕ್ರಮ್, ‘ನಾನು ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಲ್ಲ’ ಎಂದಿದ್ದೇನೆಯೇ ಹೊರತು, ನಿಮ್ಮನ್ನು ನಾಮಿನೇಟ್ ಮಾಡುವುದಿಲ್ಲ ಎಂದು ಹೇಳಿಲ್ಲ. ನಾನು ಭರವಸೆ ಕೊಟ್ಟಿರುವುದೇ ನಿಗದಿತ ವಾರದಲ್ಲಿ ನೀವು ಕೆಟ್ಟದಾಗಿ ಆಡಿದಿರೆಂದರೆ ನಿಮ್ಮನ್ನೂ ಸಹ ನಾಮಿನೇಟ್ ಮಾಡುತ್ತೇನೆ ಎಂದು ಮಾತು ಬದಲಿಸಿದರು. ಇದು ಉಗ್ರಂ ಮಂಜುಗೆ ತೀವ್ರ ಬೇಸರ ಮೂಡಿಸಿತು. ಉಗ್ರಂ ಮಂಜು, ಮಾತನಾಡಿ, ತ್ರಿವಿಕ್ರಮ್ ತಮಗೆ ಏನು ಭರವಸೆ ನೀಡಿದ್ದರು, ಕ್ಯಾಪ್ಟನ್ ಆಗಲೆಂದೇ ಅವರು ನಾನು ಹಾಕಿದ ಷರತ್ತಿಗೆ ಒಪ್ಪಿದ್ದರು, ಆದರೆ ಈಗ ನಾನು ಹಾಗೆ ಹೇಳಿಲ್ಲ ಎನ್ನುತ್ತಿದ್ದಾರೆ ಎಂದರು.

ಇದನ್ನೂ ಓದಿ:ಚಿನ್ನದ ಸರ ಬಿಚ್ಚಿಕೊಟ್ಟ ಸುರೇಶ್, ಬುದ್ಧಿವಾದ ಹೇಳಿದ ಸುದೀಪ್

ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರಿಂದ ತಮಗೆ ಅನ್ಯಾಯವಾಯ್ತು ಎಂದು ಭವ್ಯ ರಾಗ ತೆಗೆದರು. ಅದಕ್ಕೆ ಸುದೀಪ್, ಬಿಗ್​ಬಾಸ್ ಮನೆಯೊಳಗೆ ಇರುವ ವ್ಯಕ್ತಿಗೆ ಇರುವ ಏಕೈಕ ಕೆಲಸ ಆಟ ಆಡುವುದು, ಆಟಕ್ಕೆ ಇಳಿದ ಮೇಲೆ ನೀವು ನಿಮ್ಮ ಎದುರಾಳಿ ಏನೇನೆಲ್ಲ ಮಾಡಬಲ್ಲ, ಅದಕ್ಕೆ ನಾನೇನು ಮಾಡಬಲ್ಲೆ ಎಂದು ಯೋಚನೆ ಮಾಡಿ ಆಟ ಆಡಬೇಕಿತ್ತು’ ಎಂದರು. ಸುದೀಪ್, ಈ ಇಬ್ಬರ ಮ್ಯಾಚ್ ಪಿಕ್ಸಿಂಗ್ ಕರ್ಮಕಾಂಡವನ್ನು ಬೇರೆ ಸ್ಪರ್ಧಿಗಳು ಪಾಠವಾಗಿ ಪರಿಗಣಿಸಬೇಕು ಎಂದರು. ಇದರಿಂದ ಕಲಿಯಬೇಕು ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು