ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​

| Updated By: ರಾಜೇಶ್ ದುಗ್ಗುಮನೆ

Updated on: Dec 29, 2022 | 10:44 AM

Vasuki Vaibhav: ವಾಸುಕಿ ವೈಭವ್, ದೀಪಿಕಾ ದಾಸ್​ ಸೀಸನ್ 7ರಲ್ಲಿ ಸ್ಪರ್ಧಿಗಳಾಗಿದ್ದರು. ಹೀಗಾಗಿ, ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಬಳಿ ವಾಸುಕಿ ವೈಭವ್​, ಶೈನ್ ಶೆಟ್ಟಿ ಮೊದಲಾದವರನ್ನು ಮನೆ ಒಳಗೆ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದರು.

ಅರವಿಂದ್ ಬಳಿಕ ಬಿಗ್ ಬಾಸ್ ಮನೆಗೆ ಕಾಲಿಟ್ಟ ವಾಸುಕಿ ವೈಭವ್​; ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಸರ್​ಪ್ರೈಸ್​
ವಾಸುಕಿ-ದೀಪಿಕಾ
Follow us on

‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಫಿನಾಲೆ ಹಂತ ತಲುಪಿದೆ. ಶುಕ್ರವಾರ (ಡಿಸೆಂಬರ್ 30) ಹಾಗೂ ಶನಿವಾರ (ಡಿಸೆಂಬರ್ 31) ಫಿನಾಲೆ ನಡೆಯಲಿದೆ. ಮನೆಯಲ್ಲಿ ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಕೊನೆಯ ವಾರದಲ್ಲಿ ಮನೆ ಮಂದಿಗೆ ದೊಡ್ಡ ದೊಡ್ಡ ಸರ್​ಪ್ರೈಸ್ ಸಿಗುತ್ತಿದೆ. ದಿವ್ಯಾ ಉರುಡುಗ (Divya Uruduga) ಕೋರಿಕೆಯಂತೆ ಅರವಿಂದ್ ಕೆಪಿ ಅವರು ದೊಡ್ಮನೆಗೆ ಕಾಲಿಟ್ಟು ಸರ್​ಪ್ರೈಸ್ ನೀಡಿದ್ದರು. ಈಗ ವಾಸುಕಿ ವೈಭವ್ ಸರದಿ. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ವಾಸುಕಿ ವೈಭವ್, ದೀಪಿಕಾ ದಾಸ್​ ಸೀಸನ್ 7ರಲ್ಲಿ ಸ್ಪರ್ಧಿಗಳಾಗಿದ್ದರು. ಹೀಗಾಗಿ, ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ದೀಪಿಕಾ ದಾಸ್ ಅವರು ಬಿಗ್ ಬಾಸ್ ಬಳಿ ವಾಸುಕಿ ವೈಭವ್​, ಶೈನ್ ಶೆಟ್ಟಿ ಮೊದಲಾದವರನ್ನು ಮನೆ ಒಳಗೆ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಈಡೇರಿದೆ. ದೀಪಿಕಾ ದಾಸ್ ಅವರು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ
Aryavardhan Guruji: ಫಿನಾಲೆಗೆ 3 ದಿನ ಇರುವಾಗ ಆರ್ಯವರ್ಧನ್​ ಗುರೂಜಿ ಔಟ್​; ಅಪ್ಪಾಜಿ ಅಂತ ಕಣ್ಣೀರು ಹಾಕಿದ ರೂಪೇಶ್​ ಶೆಟ್ಟಿ
BBK9: ಬಿಗ್​ ಬಾಸ್​ ಮನೆಯಲ್ಲಿ ಆರ್ಯವರ್ಧನ್​ ಗುರೂಜಿ ಡಬಲ್​ ಗೇಮ್​; ಸ್ಪರ್ಧಿಗಳ ನೇರ ಆರೋಪ
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ

ವಾಸುಕಿ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ, ಗಾಯಕರಾಗಿ, ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಬಿಡುವು ಮಾಡಿಕೊಂಡು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ. ಅವರು ಸೈಲೆಂಟ್ ಆಗಿ ಬಿಗ್ ಬಾಸ್ ಮನೆ ಒಳಗೆ ಸೇರಿದ್ದರು. ಇದನ್ನು ಮನೆ ಮಂದಿ ಕಂಡು ಹಿಡಿದಿದ್ದಾರೆ. ವಾಸುಕಿಯನ್ನು ಕಾಣುತ್ತಿದ್ದಂತೆ ಅವರನ್ನು ಅಪ್ಪಿ ಸಂಭ್ರಮಿಸಿದ್ದಾರೆ ದೀಪಿಕಾ ದಾಸ್.

ಇದನ್ನೂ ಓದಿ: ದಿವ್ಯಾ ಉರುಡುಗಗೆ ಕಣ್ಣೀರು ಹಾಕಿಸಿದ್ದ ರೂಪೇಶ್ ರಾಜಣ್ಣ; ದೊಡ್ಮನೆಯಲ್ಲಿ ಟಾಂಗ್ ಕೊಟ್ಟ ಅರವಿಂದ್ ಕೆಪಿ

ದೊಡ್ಮನೆಯಲ್ಲಿ ಹಲವು ಸರ್​ಪ್ರೈಸ್

ರೂಪೇಶ್ ಶೆಟ್ಟಿ ಹುಲಿವೇಶದವರು ಬರಲಿ ಎಂದು ಕೋರಿಕೊಂಡಿದ್ದರು. ಅದು ಆಗಿದೆ. ದಿವ್ಯಾ ಕೋರಿಕೆ ಮೇಲೆ ಅರವಿಂದ್ ಕೆಪಿ ಆಗಮಿಸಿದ್ದರು. ರಾಕೇಶ್ ಅಡಿಗ ಅವರು ಕಾವ್ಯಶ್ರೀ ಗೌಡ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ಬರಲಿ ಎಂದು ಕೋರಿಕೊಂಡಿದ್ದರು. ಅವರು ಬಂದು ಮನೆ ಮಂದಿಯ ಜತೆ ಡಿನ್ನರ್ ಮಾಡಿ ಹೋಗಿದ್ದಾರೆ. ಈಗ ದೀಪಿಕಾ ದಾಸ್ ಆಸೆ ಕೂಡ ಈಡೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:53 am, Thu, 29 December 22