ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ

ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮಕ್ಕೆ 2ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಜೊತೆ ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ನೇರವಾಗಿ ಸ್ಪರ್ಗಕ್ಕೆ ಎಂಟ್ರಿ ಸಿಕ್ಕಿದೆ. ಯಮುನಾ ಶ್ರೀನಿಧಿ ಅವರ ಬಗ್ಗೆ ಇಲ್ಲಿದೆ ಮಾಹಿತಿ...

ಬಿಗ್​ ಬಾಸ್​ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ
ಯಮುನಾ ಶ್ರೀನಿಧಿ

Updated on: Sep 29, 2024 | 6:42 PM

ಬಣ್ಣದ ಲೋಕದಲ್ಲಿ ಯಮುನಾ ಶ್ರೀನಿಧಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ, ಕಿರುತೆರೆ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಹಲವು ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಅವರು ಭರತನಾಟ್ಯ ಡ್ಯಾನ್ಸರ್​ ಕೂಡ ಹೌದು. ಭರತನಾಟ್ಯದಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಅನೇಕರಿಗೆ ಭರತನಾಟ್ಯವನ್ನು ಕಲಿಸಿದ್ದಾರೆ. ‘ಅಶ್ವಿನಿ ನಕ್ಷತ್ರ’, ‘ಅಮೃತ ವರ್ಷಿಣಿ’, ‘ತ್ರಿವೇಣಿ ಸಂಗಮ’, ‘ಕಮಲಿ’, ‘ಮನಸಾರೆ’ ಮುಂತಾದ ಸೀರಿಯಲ್​ಗಳಲ್ಲಿ ಯಮುನಾ ಶ್ರೀನಿಧಿ ಅವರು ನಟಿಸಿದ್ದಾರೆ. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಅವರು 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.

‘ಕಳೆದ 10 ವರ್ಷಗಳಿಂದ ಜೀವನದಲ್ಲಿ ಒಂದು ಜಡತ್ವ ಹಿಡಿದಿದೆ. ಏನೂ ಚಾಲೆಂಜಿಂಗ್​ ಆಗಿ ಮಾಡಿಲ್ಲ. ಅದಕ್ಕಾಗಿ ಬಿಗ್​ ಬಾಸ್​ಗೆ ಬಂದಿದ್ದೇನೆ. ಮಗಳು ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಯಮುನಾ ಶ್ರೀನಿಧಿ ಅವರು ಹೇಳಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಅವರ ಜೊತೆ ಬಿಗ್​ ಬಾಸ್​ ವೇದಿಕೆಗೆ ಬಂದರು. ‘ನನ್ನ ವಯಸ್ಸನ್ನು ನೋಡಿದರೆ, ಇಷ್ಟು ವರ್ಷಗಳ ಅನುಭವ ಇದೆ. ನನಗೆ ತಾಳ್ಮೆ ಕೂಡ ಇರುತ್ತದೆ. ಮೊದಲು ನಾನು ಶಾರ್ಟ್​ಪೆಂಟರ್​ ವ್ಯಕ್ತಿ ಆಗಿದ್ದೆ. ನನಗೆ ಒಸಿಡಿ ಇದೆ’ ಎಂದು ತಮ್ಮನ್ನು ತಾವು ಯಮುನಾ ಪರಿಚಯಿಸಿಕೊಂಡರು.

ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ಅವರು ಪರಸ್ಪರ ಸ್ಪರ್ಧಿಗಳಾಗಿ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದರು. ಯಾರು ಸ್ಪರ್ಗಕ್ಕೆ ಹೋಗುತ್ತಾರೆ? ಯಾರು ನರಕಕ್ಕೆ ಹೋಗುತ್ತಾರೆ ಎಂಬ ಪ್ರಶ್ನೆ ಕೇಳಲಾಯಿತು. ‘ನನಗೆ ನರಕಕ್ಕೆ ಹೋಗೋಕೆ ಇಷ್ಟ. ಯಾಕೆಂದರೆ, ನಾನು ಕಂಫರ್ಟ್​ ಝೋನ್​ನಿಂದ ಹೊರಗೆ ಬರಬೇಕು’ ಎಂದರು ಯಮುನಾ ಶ್ರೀನಿಧಿ. ವೇದಿಕೆಯಲ್ಲಿ ಸುದೀಪ್​ ಅವರು ಭವ್ಯಾ ಮತ್ತು ಯಮುನಾಗೆ ಒಂದು ವಿಶೇಷ ಅವಕಾಶ ನೀಡಿದರು. ಮೊದಲು ದೊಡ್ಮನೆಗೆ ಕಾಲಿಡುತ್ತಿರುವ ಈ ಇಬ್ಬರು ಸ್ಪರ್ಧಿಗಳಿಗೆ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ನೀಡಲಾಯಿತು.

ಇದನ್ನೂ ಓದಿ: BBK 11: ಮೊದಲ ಎಪಿಸೋಡ್​ಗೆ ಸುದೀಪ್​ ಲುಕ್ ಜತೆ ಸ್ವರ್ಗ-ನರಕದ ಝಲಕ್​ ಇಲ್ಲಿದೆ..

ಮುಂಬರುವ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಕಳಿಸಬೇಕಾ ಅಥವಾ ನರಕಕ್ಕೆ ಕಳಿಸಬೇಕ ಎಂಬ ಅಧಿಕಾರವನ್ನು ಕೂಡ ಯಮುನಾ ಮತ್ತು ಭವ್ಯಾ ಗೌಡ ಅವರಿಗೆ ಬಿಗ್ ಬಾಸ್​ ನೀಡಿದರು. ಹಾಗಾಗಿ ನೇರವಾಗಿ ಅವರನ್ನು ಕನ್​ಫೆಷನ್​ ರೂಮ್​ಗೆ ಕಳಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us