ತೆಲುಗು ಯುವ ನಟನಿಗೆ ಸೊಳ್ಳೆಯ ಕಾಟ; ಆಸ್ಪತ್ರೆಗೆ ದಾಖಲು

| Updated By: ರಾಜೇಶ್ ದುಗ್ಗುಮನೆ

Updated on: Jul 23, 2022 | 5:44 PM

ಬಿಳಿ ಸೊಳ್ಳೆ ಕಚ್ಚುವುದರಿಂದ ಡೆಂಘೆ ಕಾಣಿಸಿಕೊಳ್ಳುತ್ತದೆ. ಶೂಟಿಂಗ್ ತೆರಳಿದ್ದ ಸಂದರ್ಭದಲ್ಲಿಶ್ರೀವಿಷ್ಣು ಅವರಿಗೆ ಸೊಳ್ಳೆ ಕಚ್ಚಿದೆ ಎನ್ನಲಾಗಿದೆ.

ತೆಲುಗು ಯುವ ನಟನಿಗೆ ಸೊಳ್ಳೆಯ ಕಾಟ; ಆಸ್ಪತ್ರೆಗೆ ದಾಖಲು
ಶ್ರೀವಿಷ್ಣು
Follow us on

ಟಾಲಿವುಡ್ ನಟ ಶ್ರೀವಿಷ್ಣು (Sree Vishnu) ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಹಲವು ಭಿನ್ನ ರೀತಿಯ ಸಿನಿಮಾಗಳನ್ನು ಮಾಡಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ತೀವ್ರ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರೀಕ್ಷೆ ಮಾಡಿದಾಗ ಅವರಿಗೆ ಡೆಂಘೆ ಜ್ವರ ಇರುವುದು ತಿಳಿದು ಬಂದಿದೆ. ಸದ್ಯ ಅವರು ಚೇತರಿಕೆ ಕಾಣುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ವರದಿ ಆಗಿದೆ.

ಬಿಳಿ ಸೊಳ್ಳೆ ಕಚ್ಚುವುದರಿಂದ ಡೆಂಘೆ ಕಾಣಿಸಿಕೊಳ್ಳುತ್ತದೆ. ಶೂಟಿಂಗ್ ತೆರಳಿದ್ದ ಸಂದರ್ಭದಲ್ಲಿಶ್ರೀವಿಷ್ಣು ಅವರಿಗೆ ಸೊಳ್ಳೆ ಕಚ್ಚಿದೆ ಎನ್ನಲಾಗಿದೆ. ಅವರ ರಕ್ತದ ಪ್ಲೇಟ್​ಲೆಟ್​ಗಳು ತೀವ್ರ ಗತಿಯಲ್ಲಿ ಕುಸಿದಿತ್ತು. ಆತಂಕಗೊಂಡ ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ತಕ್ಷಣವೇ ಅವರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ, ಅವರಿಗೆ ಯಾವುದೇ ತೊಂದರೆ ಆಗಿಲ್ಲ.

ಶ್ರೀವಿಷ್ಣು ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಬಾನಮ್’ ಚಿತ್ರದ ಮೂಲಕ. ಈ ಸಿನಿಮಾ 2009ರಲ್ಲಿ ತೆರೆಗೆ ಬಂತು. 2016ರವರೆಗೂ ಅವರು ಪೋಷಕ ಪಾತ್ರ ಮಾಡುತ್ತಾ ಬಂದರು. ‘ಅಪ್ಪಟ್ಲೋ ಒಕಡುಂಡೇವಾಡು’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ಹೀರೋ ಆಗಿ ನಟಿಸಿದರು. ನಂತರ ಹೀರೋ ಆಗಿ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಸರ್ಜಾ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ; ಅರ್ಜುನ್ ಸರ್ಜಾಗೆ ಮಾತೃವಿಯೋಗ

ಶ್ರೀವಿಷ್ಣು ಅವರು ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಭಳಾ ತಂದನಾನಾ’ ಚಿತ್ರ ಇತ್ತೀಚೆಗೆ ತೆರೆಗೆ ಬಂತು. ಈ ಚಿತ್ರ ಸೋಲು ಕಂಡಿತು. ಹೀಗಾಗಿ ಶ್ರೀವಿಷ್ಣುವಿಗೆ ಹಿನ್ನಡೆ ಆಗಿದೆ. ‘ಅಲ್ಲುರಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರದೀಪ್ ವರ್ಮ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್​ಗಳು ಈಗಾಗಲೇ ಸಾಕಷ್ಟು ಗಮನ ಸೆಳೆದಿವೆ. ಈ ಚಿತ್ರದ ಮೂಲಕ ಅವರು ಗೆಲುವು ಕಾಣಲಿ ಎಂಬುದು ಫ್ಯಾನ್ಸ್ ಆಸೆ.