AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಗಳಮುಖಿಯರು ಪ್ರಪಂಚವನ್ನು ನೋಡುವ ಪರಿಯೇ ಬೇರೆ’; ನವಾಜುದ್ದೀನ್ ಸಿದ್ದಿಕಿ

ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ 'ಹಡ್ಡಿ' ಚಿತ್ರದ ಮತ್ತೊಂದು ಪೋಸ್ಟರ್​​ ರಿವೀಲ್​ ಆಗಿದೆ.

‘ಮಂಗಳಮುಖಿಯರು ಪ್ರಪಂಚವನ್ನು ನೋಡುವ ಪರಿಯೇ ಬೇರೆ’; ನವಾಜುದ್ದೀನ್ ಸಿದ್ದಿಕಿ
ಹಡ್ಡಿ ಚಿತ್ರದ ಹೊಸ ಪೋಸ್ಟರ್​​
TV9 Web
| Edited By: |

Updated on: Nov 19, 2022 | 4:50 PM

Share

ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಬಾಲಿವುಡ್​​ ಚಿತ್ರರಂಗದಲ್ಲಿ ಗುರುತಿಸಿಕೊಂಡವರ ಪೈಕಿ ನಟ ನವಾಜುದ್ದೀನ್ ಸಿದ್ದಿಕಿ (Nawazuddinsiddiqui) ಕೂಡ ಒಬ್ಬರು. ಭಿನ್ನ ಪಾತ್ರ ಆಯ್ಕೆಯಲ್ಲಿ ಅವರು ಎತ್ತಿದ ಕೈ. ಹಾಗಾಗಿಯೇ ಅವರು ಪರದೆ ಮೇಲೆ ಬಂದರೆ ಆ ಪಾತ್ರವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾರೆ. ತಮ್ಮ ನೈಜ ಅಭಿನಯದಿಂದ ನವಾಜುದ್ದೀನ್ ಸಿದ್ದಿಕಿ ವಿಭಿನ್ನವಾಗಿ ನಿಲ್ಲುತ್ತಾರೆ. ನಟ ಟೈಗರ್​ ಶ್ರಾಫ್​ ನಟನೆಯ ‘ಹೀರೋಪಂತಿ 2’ ಚಿತ್ರ ಬಿಟ್ಟರೆ ಮತ್ತೆ ನವಾಜುದ್ದೀನ್ ಸಿದ್ದಿಕಿ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಕೆಲ ಸಮಯ ಚಿತ್ರರಂಗದಿಂದ ಅವರು ಬ್ರೇಕ್​ ಪಡೆದುಕೊಂಡಿದ್ದರು. ಆದರೆ ಈಗ ಮತ್ತೆ ಮರಳಿದ್ದಾರೆ. ಅದು ಒಂದು ವಿಭಿನ್ನ ಪಾತ್ರದ ಮೂಲಕ ಎನ್ನುವುದು ವಿಶೇಷ.

ನಟ ನವಾಜುದ್ದೀನ್ ಸಿದ್ದಿಕಿ ಸದ್ಯ ತಮಗೆ ಸವಾಲೆನಿಸಿದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮತ್ತು ಆ ಚಿತ್ರ ಸದ್ದಿಲ್ಲದೆ ಚಿತ್ರೀಕರಣವನ್ನು ಸಹ ಮುಗಿಸಿದೆ. ಹೌದು ಸೇಡಿನ ಕಥಾಹಂದರವುಳ್ಳ ಚಿತ್ರವಾದ ‘ಹಡ್ಡಿ’ (Haddi) ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಕುರಿತಾಗಿ ಹಿಂದೆ ಬೂದು ಬಣ್ಣದ ಗೌನ್ ಧರಿಸಿ, ಉದ್ದ ಕೂದಲು ಮತ್ತು ಫುಲ್​​ ಮೇಕ್ಅಪ್‌ನಲ್ಲಿದ್ದ ಲುಕ್‌ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಅದು ಭಾರೀ ಕುತೂಹಲಕ್ಕೂ ಕಾರಣವಾಗಿತ್ತು. ಈಗ ಇದೇ ಚಿತ್ರದ ಮತ್ತೊಂದು ಹೊಸ ಲುಕ್ ಬಿಡುಗಡೆ ಮಾಡಲಾಗಿದೆ.

ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘ಹಡ್ಡಿ’. ಸದ್ಯ ಈ ಚಿತ್ರದ ಮತ್ತೊಂದು ಪೋಸ್ಟರ್​​ ರಿವೀಲ್​ ಆಗಿದೆ. ಕೆಲ ಮಂಗಳಮುಖಿಯರ ನಡುವೆ ನಿಂತುಕೊಂಡು ಮೇಲೆ ಯಾರನ್ನೋ ನೋಡುವಂತಿದೆ ಈ ಹೊಸ ಪೋಸ್ಟರ್. ಸದ್ಯ ಈ ಹೊಸ ಲುಕ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿಯವರೊಂದಿಗೆ ಸಿನಿಮಾ ಮಾಡಿರುವುದರ ಕುರಿತಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಚಿತ್ರೀಕರಣ ಸಂದರ್ಭದಲ್ಲಿ ನಾನು  ಮಂಗಳಮುಖಿ ಸಮುದಾಯದವರೊಂದಿಗಿದ್ದೆ. ಅದೊಂದು ಸಂಪೂರ್ಣ ಬೇರೆಯದೇ ಪ್ರಪಂಚವಾಗಿತ್ತು. ಪ್ರತಿನಿತ್ಯ ಸೆಟ್​​ನಲ್ಲಿ 25-30 ಜನ ಮಂಗಳಮುಖಿಯರು ಇರುತ್ತಿದ್ದರು. ಅವರು ಪ್ರಪಂಚವನ್ನು ನೋಡುವ ಪರಿಯೇ ಬೇರೆ. ತುಂಬಾನೇ ಕುತೂಹಲಕಾರಿಯಾಗಿದೆ. ಈ ಹಡ್ಡಿ ಚಿತ್ರದ ಮೂಲಕ ನಾನು ಅವರ ಕುರಿತಾಗಿ ಬಹಳ ಕಲಿತುಕೊಂಡೆ’ ಎಂದು ನವಾಜುದ್ದೀನ್ ಸಿದ್ದಿಕಿ ಸಂದರ್ಶನದಲ್ಲಿ  ಹೇಳಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು