AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ ಪ್ರಶಸ್ತಿ ಘೋಷಿಸಿದ ಉಕ್ರೇನ್ ರಕ್ಷಣಾ ಪಡೆ​; ಟ್ರ್ಯಾಕ್ಟರ್​​ಗೂ ಸಿಕ್ತು ಅವಾರ್ಡ್​​

ರಷ್ಯಾದ ಟ್ಯಾಂಕರ್​ಗಳನ್ನು ಟ್ರ್ಯಾಕ್ಟರ್​ ಮೂಲಕ ಎಳೆದುಕೊಂಡು ಹೋಗಲಾಗಿತ್ತು. ಈ ಮೂಲಕ ರಷ್ಯಾ ಪಡೆಗೆ ಸವಾಲೊಡ್ಡುವ ಕೆಲಸ ನಡೆದಿತ್ತು. ಈ ಟ್ರ್ಯಾಕ್ಟರ್​ಗಳಿಗೆ ‘ಅತ್ಯುತ್ತಮ ಪೋಷಕ ಕಲಾವಿದರು’ ಪ್ರಶಸ್ತಿಯನ್ನು ನೀಡಲಾಗಿದೆ!

ಆಸ್ಕರ್​ ಪ್ರಶಸ್ತಿ ಘೋಷಿಸಿದ ಉಕ್ರೇನ್ ರಕ್ಷಣಾ ಪಡೆ​; ಟ್ರ್ಯಾಕ್ಟರ್​​ಗೂ ಸಿಕ್ತು ಅವಾರ್ಡ್​​
TV9 Web
| Edited By: |

Updated on:Apr 01, 2022 | 11:49 AM

Share

ರಷ್ಯಾ (Russia) ಮತ್ತು ಉಕ್ರೇನ್​ (Ukraine) ನಡುವಿನ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಪ್ರಾಣ ಉಳಿಸಿಕೊಳ್ಳಲು ವಲಸೆ ಹೋಗಿದ್ದಾರೆ. ಆದರೆ, ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಉಕ್ರೇನ್​ನ ಪರಿಸ್ಥಿತಿ ದಿನ ಕಳೆದಂತೆ ಹದಗೆಡುತ್ತಲೇ ಇದೆ. ಈ ಮಧ್ಯೆ ಉಕ್ರೇನ್ ರಕ್ಷಣಾ ಪಡೆ ‘ಮಿಲಿಟರಿ ಆಸ್ಕರ್ ಪ್ರಶಸ್ತಿ’ (Military Oscar Award) ನೀಡುವ ಬಗ್ಗೆ ಘೋಷಣೆ ಮಾಡಿದೆ. ಯುದ್ಧದ ಸನ್ನಿವೇಶವನ್ನು ವಿವರಿಸುವ ವಿಷಯವನ್ನು ಇಟ್ಟುಕೊಂಡು ಒಟ್ಟೂ ಏಳು ವಿಭಾಗಗಳಲ್ಲಿ ಪ್ರಶಸ್ತಿ ನೀಡಿದೆ.  ವಿಚಿತ್ರ ಎಂದರೆ ಟ್ರ್ಯಾಕ್ಟರ್​ಗೂ ಇಲ್ಲಿ ಅವಾರ್ಡ್​ ಸಿಕ್ಕಿದೆ!

ಕಪ್ಪು ಸಮುದ್ರದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ರಷ್ಯಾದ ಯುದ್ಧನೌಕೆಯನ್ನು ಹೊಡೆದುರುಳಿಸಲಾಗಿತ್ತು. ಯುದ್ಧನೌಕೆ ಹೊತ್ತಿ ಉರಿಯುತ್ತಿರುವ ಫೋಟೋಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ನೀಡಲಾಗಿದೆ. ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ದೃಶ್ಯವನ್ನು ಸೆರೆಹಿಡಿದಿದ್ದಕ್ಕೆ ಅತ್ಯುತ್ತಮ ಸಿನಿಮಾಟೋಗ್ರಾಫಿ ಅವಾರ್ಡ್ ನೀಡಲಾಗಿದೆ.

ರಷ್ಯಾ ಸೈನ್ಯದ ವಿರುದ್ಧ ಉಕ್ರೇನ್​​ನ ರೈತರು ತೊಡೆತಟ್ಟಿದ್ದರು. ರಷ್ಯಾದ ಟ್ಯಾಂಕರ್​ಗಳನ್ನು ಟ್ರ್ಯಾಕ್ಟರ್​ ಮೂಲಕ ಎಳೆದುಕೊಂಡು ಹೋಗಿದ್ದರು. ಈ ಮೂಲಕ ರಷ್ಯಾ ಪಡೆಗೆ ಸವಾಲೊಡ್ಡುವ ಕೆಲಸ ಮಾಡಿದ್ದರು. ಈ ಟ್ರ್ಯಾಕ್ಟರ್​ಗಳಿಗೆ ‘ಅತ್ಯುತ್ತಮ ಪೋಷಕ ಕಲಾವಿದರು’ ಪ್ರಶಸ್ತಿಯನ್ನು ನೀಡಲಾಗಿದೆ!

ರಷ್ಯಾ ಸೇನೆ ವಿರುದ್ಧ ಏರ್​ಸ್ಟ್ರೈಕ್ ಮಾಡಲು ಬೈರಕ್ತರ್ ಟಿಬಿ 2 ಡ್ರೋನ್​ಗಳನ್ನು ಬಳಸಿಕೊಳ್ಳಲಾಗಿತ್ತು. ಈ ಮಿಸೈಲ್​ಗೆ ‘ಇಂಟರ್​ನ್ಯಾಷನಲ್​ ಅವಾರ್ಡ್​’ ಕೊಡಲಾಗಿದೆ. ಈ ಮಿಸೈಲ್​ನಿಂದ ಯುದ್ಧ ವಾಹನ​, 9 ಹೆಲಿಕಾಪ್ಟರ್ ಮುಂತಾದವನ್ನು ಈ ಮಿಸೈಲ್​ಗಳ ಮೂಲಕ ಹೊಡೆದುರುಳಿಸಲಾಗಿದೆ.

ಸ್ಟಿಂಗರ್ ಮಿಸೈಲ್​ನಿಂದ ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಫೋಟೋಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಸಿಕ್ಕಿದೆ! ಇದರ ಜತೆಗೆ ಹಲವು ಭಾವನಾತ್ಮಕ ವಿಚಾರಗಳಿಗೂ ಈ ಯುದ್ಧ ಸಾಕ್ಷಿ ಆಗಿದೆ. ಇಲ್ಲಿ ಖಾರ್ಕಿವ್ ಸಂತ್ರಸ್ತ ತಾಣದಲ್ಲಿ ಮಕ್ಕಳು ದೇಶದ ರಾಷ್ಟ್ರಗೀತೆಯನ್ನು ಹಾಡಿದ್ದರು. ಇವರಿಗೆ, ‘ಬೆಸ್ಟ್​ ಸಾಂಗ್​’ ಅವಾರ್ಡ್​ ಸಿಕ್ಕಿದೆ.  ಈ ಪ್ರಶಸ್ತಿಗಳು ವಿಡಂಬನಾತ್ಮಕವಾಗಿದೆ.

ಇದನ್ನೂ ಓದಿ: 33ನೇ ವಯಸ್ಸಿಗೆ ಕ್ಯಾನ್ಸರ್​ನಿಂದ ಖ್ಯಾತ ಸಿಂಗರ್​ ನಿಧನ; ಸಂತಾಪ ಸೂಚಿಸಿದ ಯುವರಾಜ್​ ಸಿಂಗ್  

ಪಡ್ಡೆಗಳ ಕಣ್ಣು ಕುಕ್ಕಿದ ಸಮಂತಾ ಹೊಸ ಅವತಾರ; ಇಲ್ಲಿದೆ ಫೋಟೋ ಗ್ಯಾಲರಿ

Published On - 11:46 am, Fri, 1 April 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ