Sign In

By signing in or creating an account, you agree with Associated Broadcasting Company's Terms & Conditions and Privacy Policy.

ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್

ಇವರ ಗೆಳೆತನದಲ್ಲಿ ಬಿರುಕು ಬರಲು ಕಾರಣ ಆಗಿದ್ದು ಪತ್ರಿಕೆ ಮಾಡಿದ್ದ ವರದಿ. ‘ನೀ ತಂದ ಕಾಣಿಕೆ’ ಸಿನಿಮಾ ಆಗತಾನೇ ಸೋತಿತ್ತು. ಈ ನೋವು ದ್ವಾರಕೀಶ್ ಅವರಲ್ಲಿ ಇತ್ತು. ಹೀಗಿರುವಾಗಲೇ ಪೇಪರ್ ಒಂದರಲ್ಲಿ ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣು ಹೇಳಿದ್ದಾಗಿ ವರದಿ ಆಗಿತ್ತು. ಇದನ್ನು ನಂಬಿಯೇ ಬಿಟ್ಟರು ದ್ವಾರಕೀಶ್.

ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್
ದ್ವಾರಕೀಶ್-ವಿಷ್ಣು
Follow us
ರಾಜೇಶ್ ದುಗ್ಗುಮನೆ
|

Updated on:Aug 03, 2024 | 11:57 AM

ಚಿತ್ರರಂಗದಲ್ಲಿ ಒಳ್ಳೆಯ ಗೆಳೆಯರಾಗಿ ನಂತರ ದೂರ ದೂರ ಆದ ಗೆಳೆಯರಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕೂಡ ಒಬ್ಬರು. ಇವರು ತುಂಬಾನೇ ಅನ್ಯೋನ್ಯವಾಗಿ ಇದ್ದರು. ಆದರೆ, ಇವರ ಗೆಳೆತನ ಹೆಚ್ಚು ವರ್ಷ ಬಾಳಲಿಲ್ಲ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದ ದ್ವಾರಕೀಶ್ ಅವರು ಮಾಡಿದ ಒಂದು ತಪ್ಪಿನಿಂದ ಇವರ ಗೆಳೆತನ ಮುರಿದು ಬಿತ್ತು. ಇಬ್ಬರೂ ಬೇರೆ ಆಗಲು ಕಾರಣ ಆದ ಅಂಶದ ಬಗ್ಗೆ ಇಲ್ಲಿದೆ ಮಾಹಿತಿ.

ವಿಷ್ಣುವರ್ಧನ್ ಅವರ ‘ನಾಗರಹಾವು’ ಸಿನಿಮಾ ನೋಡಿ ದ್ವಾರಕೀಶ್ ಫಿದಾ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಿಕ್ಕ ಎಂದು ಖುಷಿಪಟ್ಟಿದ್ದರು. 1975ರಲ್ಲಿ ರಿಲೀಸ್ ಆದ ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ಈ ಇಬ್ಬರು ಒಟ್ಟಾಗಿ ನಟಿಸಿದರು. ಆ ಬಳಿಕ ಇಬ್ಬರೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿದರು. ‘ಕಿಟ್ಟು ಪುಟ್ಟು’, ‘ಗುರು ಶಿಷ್ಯರು’ ಸೇರಿ ಅನೇಕ ಚಿತ್ರಗಳು ರಿಲೀಸ್ ಆದವು. ಈ ಮಧ್ಯೆ ಇವರ ಗೆಳೆತನದ ಮೇಲೆ ಕೆಟ್ಟ ದೃಷ್ಟಿ ಬಿತ್ತು.

ಇವರ ಗೆಳೆತನದಲ್ಲಿ ಬಿರುಕು ಬರಲು ಕಾರಣ ಆಗಿದ್ದು ಪತ್ರಿಕೆ ಮಾಡಿದ್ದ ವರದಿ. ‘ನೀ ತಂದ ಕಾಣಿಕೆ’ ಸಿನಿಮಾ ಆಗತಾನೇ ಸೋತಿತ್ತು. ಈ ನೋವು ದ್ವಾರಕೀಶ್ ಅವರಲ್ಲಿ ಇತ್ತು. ಹೀಗಿರುವಾಗಲೇ ಪೇಪರ್ ಒಂದರಲ್ಲಿ ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣು ಹೇಳಿದ್ದಾಗಿ ವರದಿ ಆಗಿತ್ತು. ಇದನ್ನು ಮಾತನಾಡಿ ಬಗೆಹರಿಸಿಕೊಂಡರೆ ಎಲ್ಲವೂ ಸರಿ ಆಗುತ್ತಿತ್ತೇನೋ. ವಿಷ್ಣುವರ್ಧನ್ ಅವರನ್ನು ಬೆಳೆಸಿದ್ದು ನಾನು ಎನ್ನುವ ಭಾವನೆ ದ್ವಾರಕೀಶ್​ಗೆ ಇತ್ತು. ಈ ಕಾರಣದಿಂದಲೇ ವಿಷ್ಣುವರ್ಧನ್​ಗೆ ದ್ವಾರಕೀಶ್ ತಿರುಗೇಟು ಕೊಡುವ ಪ್ರಯತ್ನ ಮಾಡಿದರು.

ವಿಷ್ಣುವರ್ಧನ್ ಮೊದಲು ದ್ವಾರಕೀಶ್ ಅವರನ್ನು ಅಂಕಲ್ ಎನ್ನುತ್ತಿದ್ದರು. ಆ ಬಳಿಕ ಸರ್ ಎಂದರು. ನಂತರ ಇಬ್ಬರ ಮಧ್ಯೆ ಗೆಳೆತನ ಬೆಳೆದು ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈ ಪತ್ರಿಕೆಯ ವರದಿ ನಂತರ ಎಲ್ಲವೂ ಬದಲಾಯಿತು. ‘ವಿಷ್ಣುವಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು. ‘ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ’ ಎಂದು ಚಾಲೆಂಜ್ ಮಾಡಿದ್ದರು ದ್ವರಕೀಶ್.

ಇದನ್ನೂ ಓದಿ: ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ

ಇಷ್ಟಕ್ಕೆ ದ್ವಾರಕೀಶ್ ನೀಂತಿಲ್ಲ. ವಿಷ್ಣುವರ್ಧನ್ ಮಾಡಿದ ದ್ರೋಹದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ದ್ವಾರಕೀಶ್ ಮುಂದಾಗಿದ್ದರು. ಅವರು ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು. ಆ ಬಳಿಕ ಇಬ್ಬರೂ ದೂರ ಆದರು. ‘ಆಪ್ತಮಿತ್ರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದರು. ಆದರೆ, ಇವರ ಗೆಳೆತನ ಒಡೆದ ಕನ್ನಡಿ ರೀತಿಯೇ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:50 am, Sat, 3 August 24

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು