AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನಿಗೆ ಸೇರಬೇಕಿದ್ದ 2,603 ಕೋಟಿ ರೂ ಆಸ್ತಿಯನ್ನು ಜಾಕಿ ಚಾನ್ ಚಾರಿಟಿಗೆ ನೀಡಿದ್ದೇಕೆ?

ಡ್ರಗ್​ ಪ್ರಕರಣದಲ್ಲಿ ಜಾಕಿ ಚಾನ್ ಮಗ ಜೈಸಿ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್​ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಬೇಸರ ಹೊರ ಹಾಕಿದ್ದರು.

ಮಗನಿಗೆ ಸೇರಬೇಕಿದ್ದ 2,603 ಕೋಟಿ ರೂ ಆಸ್ತಿಯನ್ನು ಜಾಕಿ ಚಾನ್ ಚಾರಿಟಿಗೆ ನೀಡಿದ್ದೇಕೆ?
ರಾಜೇಶ್ ದುಗ್ಗುಮನೆ
|

Updated on: Apr 16, 2021 | 9:36 PM

Share

ನಟ ಜಾಕಿ ಚಾನ್​ ಇತ್ತೀಚೆಗೆ 67ನೇ ವಯಸ್ಸಿಗೆ ಕಾಲಿಟ್ಟಿದ್ದರು. ಇವರು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ ತುಂಬಾನೇ ದೊಡ್ಡ ಮೊತ್ತದ್ದು. ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಜಾಕಿ ಚಾನ್​ ಮೊದಲ ಸ್ಥಾನದಲ್ಲಿದ್ದಾರೆ. ಅಚ್ಚರಿ ಎಂದರೆ, ಇವರು ತಮ್ಮ 2603 ಕೋಟಿ ರೂಪಾಯಿ ಆಸ್ತಿಯನ್ನು ಮಗನ ಹೆಸರಿಗೆ ಬರೆಯದೆ ಚಾರಿಟಿಗೆ (ದತ್ತಿ) ಕೊಟ್ಟಿದ್ದಾರೆ.

2019ರಲ್ಲಿ ಜಾಕಿ ಚಾನ್​ ಬರೋಬ್ಬರಿ 267 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರತಿ ವರ್ಷ ಅವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ, ಇವರು ತಮ್ಮೆಲ್ಲ ಆಸ್ತಿಯನ್ನು ಚಾರಿಟಿಗೆ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಹೀಗೆ ಮಾಡುವುದಕ್ಕೂ ಒಂದು ಬಲವಾದ ಕಾರಣವಿದೆ. ಜಾಕಿ ಚಾನ್​ ಮಗನ ಹೆಸರು ಜೈಸಿ ಚಾನ್​. ವೃತ್ತಿಯಲ್ಲಿ ಮ್ಯೂಸಿಷಿಯನ್​ ಹಾಗೂ ನಟ. 2014ರಲ್ಲಿ ಜೈಸಿ ಡ್ರಗ್​ ಪ್ರಕರಣವೊಂದಲ್ಲಿ ಸಿಲುಕಿದ್ದರು. ಅರೆಸ್ಟ್​ ಕೂಡ ಆಗಿದ್ದರು. ಆ ಸಮಯದಲ್ಲಿ ಮಗನ ಪರವಾಗಿ ಜಾಕಿ ಚಾನ್​ ಕ್ಷಮೆ ಕೇಳಿದ್ದರು.

ಡ್ರಗ್​ ಪ್ರಕರಣದಲ್ಲಿ ಜೈಸಿ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್​ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಜಾಕಿ ಚಾನ್ ಬೇಸರ ಹೊರ ಹಾಕಿದ್ದರು.

ನನ್ನ ಮಗ ಸಮರ್ಥನಾಗಿದ್ದರೆ ಸ್ವಂತ ಹಣವನ್ನು ಸಂಪಾದಿಸಬಹುದು. ಇಲ್ಲದಿದ್ದರೆ, ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ ಎಂದು ಅವರು ಹೇಳಿಕೊಂಡಿದ್ದರು. ಮಗ ತಪ್ಪು ಹಾದಿ ಹಿಡಿದ್ದಾನೆ ಎನ್ನುವ ಕಾರಣಕ್ಕೆ ತಮ್ಮ ಆಸ್ತಿಯನ್ನು ಜಾಕಿ ಚಾನ್​ ಚಾರಿಟಿಗೆ ನೀಡಿದ್ದಾರೆ.

ಇದನ್ನೂ ಓದಿ: Bigg Boss Elimination: ತಲೆಕೆಳಗಾದ ಬಿಗ್ ಬಾಸ್ ಲೆಕ್ಕಾಚಾರ? ಅಂದುಕೊಂಡಿದ್ದೇ ಒಬ್ರು, ಹೋಗಿದ್ದೇ ಇನ್ನೊಬ್ರು! ‌ಸುದೀಪ್ ಬಿಗ್ ಟ್ವಿಸ್ಟ್

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?