AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ವಿಚಾರದಲ್ಲಿ ನೋವಾಗಬಾರದಿತ್ತೋ ಅದೇ ವಿಚಾರದಲ್ಲಿ ಶುಭಾ ಪೂಂಜಾಗೆ ನೋವಾಗ್ತಿದೆ!

ಗಾರ್ಡನ್​​ ಏರಿಯಾದಿಂದ ಎಲ್ಲರೂ ಮನೆ ಒಳಗೆ ಹೋಗುವಂತೆ ಬಿಗ್​ ಬಾಸ್​ ಸೂಚನೆ ನೀಡಿದರು. ಇದಕ್ಕೆ ಶುಭಾ ಪೂಂಜಾ ಬೇಸರ ಹೊರ ಹಾಕಿ ಒಲ್ಲದ ಮನಸ್ಸಿನಿಂದ ಮನೆ ಒಳಗೆ ಹೋದರು.

ಯಾವ ವಿಚಾರದಲ್ಲಿ ನೋವಾಗಬಾರದಿತ್ತೋ ಅದೇ ವಿಚಾರದಲ್ಲಿ ಶುಭಾ ಪೂಂಜಾಗೆ ನೋವಾಗ್ತಿದೆ!
ಶುಭಾ ಪೂಂಜಾ
ರಾಜೇಶ್ ದುಗ್ಗುಮನೆ
| Edited By: |

Updated on: Apr 17, 2021 | 9:25 AM

Share

ಬಿಗ್​ ಬಾಸ್​ ಮನೆಯಲ್ಲಿರುವ ನಟಿ ಶುಭಾ ಪೂಂಜಾ ತುಂಬಾನೇ ಸೂಕ್ಷ್ಮ. ಯಾವುದೇ ವಿಚಾರವನ್ನು ಹೇಳಿದರೂ ಅವರು ಗಂಭೀರವಾಗಿ ಪರಿಗಣಿಸುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಅವರಿಗೆ ಕಣ್ಣಲ್ಲಿ ನೀರು ಬಂದುಬಿಡುತ್ತದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಅವರಿಗೆ ತುಂಬಾನೇ ನೋವಾಗುವ ಘಟನೆ ಒಂದು ನಡೆದಿದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಅವರು ಕಣ್ಣೀರು ಕೂಡ ಹಾಕಿದ್ದಾರೆ. ಬಿಗ್​ ಬಾಸ್​ ಮನೆಯ ಹೊರ ಭಾಗದಲ್ಲಿ ಧಾರಾಕಾರವಾಗಿ ಮಳೆ ಬರುವ ಸೂಚನೆ ಇತ್ತು. ಹೀಗಾಗಿ, ಗಾರ್ಡನ್​​ ಏರಿಯಾದಿಂದ ಎಲ್ಲರೂ ಮನೆ ಒಳಗೆ ಹೋಗುವಂತೆ ಬಿಗ್​ ಬಾಸ್​ ಸೂಚನೆ ನೀಡಿದರು. ಇದಕ್ಕೆ ಶುಭಾ ಪೂಂಜಾ ಬೇಸರ ಹೊರ ಹಾಕಿ ಒಲ್ಲದ ಮನಸ್ಸಿನಿಂದ ಮನೆ ಒಳಗೆ ಹೋದರು.

ಬಿಗ್​ ಬಾಸ್ ಮನೆ ಒಳಗೆ ಹೋಗುತ್ತಿದ್ದಂತೆ ಬಾಗಿಲನ್ನು ಹಾಕಲಾಯಿತು. ಈ ವೇಳೆ ಜೋರಾಗಿ ಮಳೆ ಸುರಿಯೋಕೆ ಆರಂಭವಾಯಿತು. ಇದನ್ನು ನೋಡಿ ಶುಭಾ ತುಂಬಾನೇ ಬೇಸರ ಹೊರ ಹಾಕಿದರು. ನಿನ್ನೆ ಮಳೆ ಬಂದಿತ್ತು. ಆದರೂ ನೆನೆಯೋಕೆ ಅವಕಾಶ ಕೊಟ್ಟಿಲ್ಲ. ಇಂದು ಕೂಡ ಬಿಗ್​ ಬಾಸ್​ ಮಳೆ ಬರುತ್ತಿದೆ. ಆದರೆ, ಮಳೆಯಲ್ಲಿ ನೆನೆಯೋಕೆ ಬಿಗ್​ ಬಾಸ್​ ಅವಕಾಶ ಕೊಡುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ಮಂಜು ಪಕ್ಕ ಕೂತಿದ್ದ ಶುಭಾ ತಲೆ ಮುಚ್ಚಿಕೊಂಡಿದ್ದರು. ಈ ವೇಳೆ ಏಕಾಏಕಿ ಒಂದೇ ಸಮನೆ ಅವರು ಅಳೋಕೆ ಪ್ರಾರಂಭಿಸಿದರು. ನಿಜವಾಗಲೂ ನೀವು ಅಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಶುಭಾ, ದಿನಾ ಟಾಸ್ಕ್​ ಮಾಡಿ ಸಾಕಾಗಿದೆ. ಒಂದೇ ಒಂದು ದಿನ ಕೂಡ ಮಳೆಯಲ್ಲಿ ನೆನೆಯೋಕೆ ಅವಕಾಶ ಕೊಟ್ಟಿಲ್ಲ. ಈ ಮಳೆ ಮತ್ತೆ ನಾಳೆ ಬರುವುದಿಲ್ಲ ಎಂದು ಬೇಸರ ಹೊರ ಹಾಕಿದರು. ಕೊನೆಗೆ ಅವರಿಗೆ ಮಳೆಯಲ್ಲಿ ಆಡೋಕೆ ಅವಕಾಶ ನೀಡಲಾಯಿತು. ಆ ನಂತರವೇ ಅವರು ಖುಷಿಯಿಂದ ಮಳೆಯಲ್ಲಿ ನೆನೆದರು.

ಇದನ್ನೂ ಓದಿ: ಅಪ್ಪ-ಅಮ್ಮನ ಪತ್ರ ಓದಿ ಬಿಕ್ಕಿಬಿಕ್ಕಿ ಅತ್ತ ದಿವ್ಯಾ; ಆ ಒಂದು ಮಾತಿಗೆ ಗಂಟಲೇ ಕಟ್ಟೋಯ್ತು

Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Follow Us
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!