AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾನ್ಸ್​ಗೆ ‘ಸಲಾರ್’ ಸಿನಿಮಾ ಬೈಕ್ ಗೆಲ್ಲೋ ಅವಕಾಶ ಕೊಟ್ಟ ಹೊಂಬಾಳೆ ಫಿಲ್ಮ್ಸ್

‘ಸಲಾರ್’ ಸಿನಿಮಾದಲ್ಲಿ ಅವರ ಲುಕ್ ಜೊತೆ ಬೈಕ್ ಸಖತ್ ಇಷ್ಟ ಆಗಿತ್ತು. ಈ ಬೈಕ್ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿತ್ತು. ಈಗ ಈ ಬೈಕ್​ನ ಫ್ಯಾನ್ಸ್​​ಗೆ ನೀಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ‘ಗಿವ್​ಅವೇ ಕ್ಯಾಂಪೇನ್​’ನ ಹೊಂಬಾಳೆ ಫಿಲ್ಮ್ಸ್ ಶುರು ಮಾಡಿದೆ.

ಫ್ಯಾನ್ಸ್​ಗೆ ‘ಸಲಾರ್’ ಸಿನಿಮಾ ಬೈಕ್ ಗೆಲ್ಲೋ ಅವಕಾಶ ಕೊಟ್ಟ ಹೊಂಬಾಳೆ ಫಿಲ್ಮ್ಸ್
ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on: Apr 20, 2024 | 3:27 PM

Share

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಬೈಕ್ ಸಖತ್ ಸದ್ದು ಮಾಡಿತ್ತು. ಭಿನ್ನವಾಗಿ ಡಿಸೈನ್ ಮಾಡಿದ ಈ ಬೈಕ್ ಫ್ಯಾನ್ಸ್​ಗೆ ಇಷ್ಟ ಆಗಿತ್ತು. ಈಗ ಈ ಬೈಕ್ ಗೆಲ್ಲೋ ಅವಕಾಶವನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ. ಈ ಬೈಕ್ ಗೆಲ್ಲೋಕೆ ನೀವು ಮಾಡಬೇಕಾಗಿರೋದು ಏನು ಎಂಬುದನ್ನು ಕೂಡ ಹೊಂಬಾಳೆ ಫಿಲ್ಮ್ಸ್ ಹೇಳಿದೆ.

‘ಸಲಾರ್’ ಸಿನಿಮಾದಲ್ಲಿ ಅವರ ಲುಕ್ ಜೊತೆ ಬೈಕ್ ಸಖತ್ ಇಷ್ಟ ಆಗಿತ್ತು. ಈ ಬೈಕ್ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿತ್ತು. ಈಗ ಈ ಬೈಕ್​ನ ಫ್ಯಾನ್ಸ್​​ಗೆ ನೀಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆ. ‘ಗಿವ್​ಅವೇ ಕ್ಯಾಂಪೇನ್​’ನ ಹೊಂಬಾಳೆ ಫಿಲ್ಮ್ಸ್ ಶುರು ಮಾಡಿದೆ. ಓರ್ವ ಅದೃಷ್ಟಶಾಲಿಗೆ ಈ ಬೈಕ್ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಪ್ರಭಾಸ್ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ನಾಯಕಿ, ಸಿನಿಮಾ ಯಾವುದು? ನಟಿ ಯಾರು?

‘ಸಲಾರ್ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಗೆದ್ದ ಬೈಕ್​ನ ಗೆಲ್ಲೋ ಅವಕಾಶವನ್ನು ಪಡೆದುಕೊಳ್ಳಿ’ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ. ‘ಸ್ಟಾರ್ ಮಾ’ ವಾಹಿನಿಯಲ್ಲಿ ಏಪ್ರಿಲ್ 21ರಂದು ರಾತ್ರಿ 5:30ಕ್ಕೆ ಪ್ರಸಾರ ಕಾಣಲಿದೆ. ಇದನ್ನು ನೋಡಿದ ಬಳಿಕ ವೀಕ್ಷಕರು ಒಂದು ಕೆಲಸ ಮಾಡಬೇಕು. ‘ಸ್ಟಾರ್ ಸುವರ್ಣದಲ್ಲಿ ಸಿನಿಮಾ ಪ್ರಸಾರ ಆಗುವಾಗ ಬೈಕ್ ಚಿತ್ರ ಎಷ್ಟು ಬಾರಿ ಬಂದು ಹೋಗುತ್ತದೆ ಎಂಬುದನ್ನು 9222211199 ಸಂಖ್ಯೆಗೆ ಮೆಸೇಜ್ ಮಾಡಿ’ ಎಂದು ಬರೆಯಲಾಗಿದೆ. ಏಪ್ರಿಲ್ 21ರ ರಾತ್ರಿ 8 ಗಂಟೆಯಿಂದ ಮೆಸೇಜ್ ಮಾಡಬಹುದು. SALAAR ಎಂದು ಬರೆದು ಒಂದು ಸ್ಪೇಸ್ ಕೊಡಬೇಕು. ಆ ಬಳಿಕ ಎಷ್ಟು ಬಾರಿ ಬೈಕ್ ತೆರೆಮೇಲೆ ಬಂತು ಎಂಬ ಸಂಖ್ಯೆಯನ್ನು ಬರೆದುಕಳುಹಿಸಬೇಕು.

‘ಸಲಾರ್’ ಸಿನಿಮಾದಲ್ಲಿ ‘ರಾಯಲ್​ ಎನ್​ಫೀಲ್ಡ್ಡ್’ ಕಸ್ಟಮೈಸ್ಡ್​ ಬೈಕ್ ಆಗಿದೆ. ಹೈದರಾಬಾದ್​ನ ಶಾಪ್ ಒಂದರಲ್ಲಿ ಈ ಬೈಕ್​ನ ಮಾಡಿಫೈ ಮಾಡಲಾಗಿತ್ತು. ಸದ್ಯ ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ