AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2022 ನಿಮ್ಮ ರಾಶಿ ಪ್ರಕಾರ ಧನ ತ್ರಯೋದಶಿಯಂದು ಈ ವಸ್ತು ಖರೀದಿಸಿದರೆ ಮಂಗಳಕರ

ಧನ ತ್ರಯೋದಶಿಯಂದು ಚಿನ್ನ ಮತ್ತು ಬೆಳ್ಳಿಯಲ್ಲಿ ಆಭರಣ ಮತ್ತು ಪಾತ್ರೆಗಳ ರೂಪದಲ್ಲಿ ಹೂಡಿಕೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Deepavali 2022 ನಿಮ್ಮ ರಾಶಿ ಪ್ರಕಾರ ಧನ ತ್ರಯೋದಶಿಯಂದು ಈ ವಸ್ತು ಖರೀದಿಸಿದರೆ ಮಂಗಳಕರ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Oct 21, 2022 | 2:05 PM

Share

ಧನತ್ರಯೋದಶಿ ಅಥವಾ ಧನ್​​​ತೇರಸ್​​ನಂದು (Dhanteras) ಧನ್ವಂತರಿ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರೊಂದಿಗೆ ದೀಪಾವಳಿಯ (Diwali) ಐದು ದಿನಗಳ ಅವಧಿಯ ಹಬ್ಬಗಳ ಆರಂಭವಾಗುತ್ತದೆ. ‘ಧನ್’ ಎಂದರೆ ಸಂಪತ್ತು ಮತ್ತು ‘ತೇರಸ್’ ಎಂದರೆ ಚಂದ್ರನ ಚಕ್ರದ ಹದಿಮೂರನೇ ದಿನ. ಅದೇ ಧನ ತ್ರಯೋದಶಿ, ಈ ದಿನ ಚಿನ್ನ ಮತ್ತು ಬೆಳ್ಳಿಯಲ್ಲಿ ಆಭರಣ ಮತ್ತು ಪಾತ್ರೆಗಳ ರೂಪದಲ್ಲಿ ಹೂಡಿಕೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಚಿನ್ನ, ಬೆಳ್ಳಿ, ಅಥವಾ ಯಾವುದೇ ಪಾತ್ರೆ ಮತ್ತು ಪೊರಕೆ ಖರೀದಿಸುವ ಸಂಪ್ರದಾಯವನ್ನು ನಾವೆಲ್ಲರೂ ಅನುಸರಿಸುತ್ತೇವೆ. ಆದರೆ ನಿಮ್ಮ ರಾಶಿ ಆಧಾರದ ಮೇಲೆ ನೀವು ಕೆಲವು ವಸ್ತುಗಳನ್ನು ಖರೀದಿಸಬಹುದು ಎಂದು ನಿಮಗೆ ತಿಳಿದಿದೆಯೇ?

ರಾಶಿ ಪ್ರಕಾರ ಯಾವ ವಸ್ತು ಖರೀದಿಸಬೇಕು?

ಮೇಷ ರಾಶಿ

ಈ ರಾಶಿಯ ಜನರು ರಾಸಾಯನಿಕಗಳು, ಕಬ್ಬಿಣ ಅಥವಾ ಚರ್ಮದಂತಹ ವಸ್ತುಗಳನ್ನು ಖರೀದಿಸುವುದನ್ನು ಬೇಡ. ಬದಲಿಗೆ ಅವರು ವಜ್ರದ ಆಭರಣಗಳು, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಪಾತ್ರೆಗಳನ್ನು ಖರೀದಿಸಬೇಕು.

ವೃಷಭ ರಾಶಿ

ಚರ್ಮ, ಎಣ್ಣೆ, ಮರ ಮತ್ತು ವಾಹನಗಳನ್ನು ಖರೀದಿಸುವುದು ಬೇಡ. ವಜ್ರಗಳು, ಚಿನ್ನ, ಬೆಳ್ಳಿ, ಕಂಚು ಮತ್ತು ಪಾತ್ರೆಗಳನ್ನು ಖರೀದಿಸಬಹುದು. ಈ ಜನರು ಅದೃಷ್ಟವನ್ನು ಆಹ್ವಾನಿಸಲು ಶ್ರೀಗಂಧ ಮತ್ತು ಕುಂಕುಮವನ್ನು ಖರೀದಿಸಬಹುದು

ಮಿಥುನ

ಇಂದ್ರನೀಲ, ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಮತ್ತು ಮನೆ ಅಥವಾ ಭೂಮಿ ಮತ್ತು ಪೀಠೋಪಕರಣಗಳಂತಹ ಆಸ್ತಿಯನ್ನು ಖರೀದಿಸಲು ಮಿಥುನ ರಾಶಿಯವರಿಗೆ ಇದು ಉತ್ತಮ ಸಮಯ.

ಕರ್ಕಾಟಕ

ಕರ್ಕಾಟಕ ರಾಶಿಯವರು ಈ ಕ್ಷಣದಲ್ಲಿ ಚಿನ್ನ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬೇಡ. ಅವರು ತಮ್ಮ ಹೆಸರಿನಲ್ಲಿ ವಸ್ತು ಖರೀದಿಸುವ ಬದಲು ಅವರು ಅದನ್ನು ತಮ್ಮ ಕುಟುಂಬದ ಹೆಸರಿನಲ್ಲಿ ಖರೀದಸಬೇಕು ನೀವು ನಿಮ್ಮ ಮಕ್ಕಳಿಗೆ ಹೊಸದನ್ನು ಖರೀದಿಸಲು ಬಯಸಿದರೆ, ಈಗ ಉತ್ತಮ ಸಮಯ.

ಸಿಂಹ

ಸಿಂಹ ರಾಶಿಯವರು ವಾಹನಗಳು, ಮರದಿಂದ ಮಾಡಿದ ಪಾತ್ರೆಗಳು, ಎಲೆಕ್ಟ್ರಾನಿಕ್ಸ್, ರಿಯಲ್ ಎಸ್ಟೇಟ್ ಮತ್ತು ಚಿನ್ನ, ಬೆಳ್ಳಿ ಮತ್ತು ಕಂಚುಗಳನ್ನು ಖರೀದಿಸಬಹುದು. ಆದರೆ ಅವರು ಸಿಮೆಂಟ್, ಕಬ್ಬಿಣ ಅಥವಾ ಈ ವಸ್ತುಗಳನ್ನು ಹೊಂದಿರುವ ಯಾವುದೇ ವಸ್ತುಗಳನ್ನು ಖರೀದಿಸುವುದು ಬೇಡ

ಕನ್ಯಾರಾಶಿ

ಈ ರಾಶಿಯವರು ಹೊಸ ಬಿಳಿ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು ಮತ್ತು ಚಿನ್ನ, ಬೆಳ್ಳಿ ಅಥವಾ ವಜ್ರಗಳನ್ನು ಖರೀದಿಸಬಾರದು. ಆದಾಗ್ಯೂ ಅವರು ಭೂಮಿ, ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದು.

ತುಲಾ ರಾಶಿ

ತುಲಾ ರಾಶಿಯವರು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೊದಲು ಅಥವಾ ಇದೀಗ ಚಿನ್ನ ಅಥವಾ ವಜ್ರಗಳನ್ನು ಖರೀದಿಸುವ ಮೊದಲು ಕಾಯಬೇಕು. ನೀವು ಇದನ್ನು ಖರೀದಿಸಲು ಬಯಸಿದರೆ, ಈ ರಾಶಿಯಲ್ಲದ ಇನ್ನೊಬ್ಬ ಕುಟುಂಬದ ಸದಸ್ಯರ ಹೆಸರಿನಲ್ಲಿ ಅದನ್ನು ಖರೀದಿಸಿ.

ವೃಶ್ಚಿಕ ರಾಶಿ

ದೊಡ್ಡ ಆಸ್ತಿ ಷೇರುಗಳಲ್ಲಿ ಹೂಡಿಕೆ ಮಾಡಬಾರದು ಅಥವಾ ಯಾವುದೇ ಪ್ರಮುಖ ವಿತ್ತೀಯ ವಿನಿಮಯವನ್ನು ಮಾಡಬಾರದು. ಅವರು ಚಿನ್ನ, ಬೆಳ್ಳಿ, ಕುಂಬಾರಿಕೆ, ಬಟ್ಟೆ ಮತ್ತು ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಹುದು. ಬ್ರಾಂಡೆಡ್ ವಸ್ತುಗಳನ್ನು ಖರೀದಿಸುವಾಗ ತುಂಬಾ ಜಾಗರೂಕರಾಗಿರಿ.

ಧನು ರಾಶಿ

ಈ ಹಬ್ಬದಲ್ಲಿ ಧನು ರಾಶಿಯವರು ಭೂಮಿ, ಅಮೂಲ್ಯ ಲೋಹಗಳು, ಕಲ್ಲುಗಳು ಮತ್ತು ವಜ್ರಗಳನ್ನು ಖರೀದಿಸಬಹುದು. ನೀವು ಮಾಡುವ ಯಾವುದೇ ಖರೀದಿಯು ನಿಮಗೆ ಮಂಗಳಕರವಾಗಿರುತ್ತದೆ.

ಮಕರ

ಈ ಹಬ್ಬದ ಸಮಯದಲ್ಲಿ ಭೂಮಿ, ಲೋಹಗಳು, ಪಾತ್ರೆಗಳು, ಬಟ್ಟೆಗಳು ಖರೀದಿಸುವುದರಿಂದ ಪ್ರಯೋಜನ ಪಡೆಯಬಹುದು. ಪೂರ್ವಜರ ಸೊತ್ತು ಸಹ ನಿಮಗೆ ಶುಭಕರವಾಗಿವೆ.

ಕುಂಭ ರಾಶಿ

ನೀವು ಪುಸ್ತಕಗಳು, ಎಲೆಕ್ಟ್ರಾನಿಕ್ ವಸ್ತುಗಳು, ಗೃಹಾಲಂಕಾರಗಳು ಮತ್ತು ಪೀಠೋಪಕರಣಗಳನ್ನು ಖರೀದಿಸಬಹುದು. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆದರೆ ಯಾವುದೇ ಸ್ಥಿರ ಆಸ್ತಿಗಳನ್ನು ತಪ್ಪಿಸಿ.

ಮೀನ ರಾಶಿ

ಮೀನ ರಾಶಿಯವರು ಚಿನ್ನ, ಬೆಳ್ಳಿ, ಅಮೂಲ್ಯ ಕಲ್ಲುಗಳು ಮತ್ತು ಲೋಹದ ವಸ್ತುಗಳನ್ನು ಖರೀದಿಸಬಹುದು. ಷೇರು ಹೂಡಿಕೆಯನ್ನು ಹೊರತುಪಡಿಸಿ ಅವರು ತಮಗೆ ಬೇಕಾದ ಯಾವುದೇ ವಸ್ತುಗಳನ್ನು ಖರೀದಿಸಬಹುದು.

Published On - 1:09 pm, Fri, 21 October 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ