AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diet Tips: ಪ್ರತಿದಿನ ಸೇವಿಸುವ ಆಹಾರದ ಪಟ್ಟಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ

ಇಡೀ ದಿನ ದೇಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಅದಕ್ಕೆ ತಕ್ಕ ಹಾಗೆ ಪ್ರೋಟೀನ್​ ಅಂಶಗಳು ದೊರೆಯಬೇಕು. ಇದಕ್ಕಾಗಿ ಕಡಲೆಕಾಯಿ, ಮೊಸರು, ಬಾದಾಮಿಯಂತಹ ಪ್ರೋಟೀನ್​ಯುಕ್ತ  ಆಹಾರವನ್ನು ಸೇವಿಸಿ

Diet Tips: ಪ್ರತಿದಿನ ಸೇವಿಸುವ ಆಹಾರದ ಪಟ್ಟಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 07, 2022 | 3:50 PM

Share

ಹೊಸ ವರ್ಷ ಬಂದಾಗಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಅಲ್ಲದೆ ಚಳಿಗಾಲವೂ ಬಿಟ್ಟು ಬಿಡದೆ ಕಾಡುತ್ತಿದೆ. ಹೀಗಾಗಿ ದೇಹಕ್ಕೆ ಸರಿಯಾದ ಪೋಷಕಾಂಶಗಳನ್ನು ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ಆಹಾರದ ಆಯ್ಕೆಯಲ್ಲಿ ಎಚ್ಚರವಿರಲಿ.  ಅವುಗಳು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವಂತಿರಬೇಕು ಆಗ ಮಾತ್ರ ಸೇವಿಸುವ ಆಹಾರ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ.  2022 ಆರಂಭದಲ್ಲಿದ್ದೇವೆ. ಈಗಲೇ ಒಂದಷ್ಟು  ಹೊಸ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳಿ ಇದು ನಿಮ್ಮ ದೇಹವನ್ನು ಫಿಟ್​ ಅಗಿಯೂ ಇಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಈ ಪೋಷಕಾಂಶಗಳನ್ನು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ.

ಪ್ರೋಟೀನ್​ ಇಡೀ ದಿನ ದೇಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಅದಕ್ಕೆ ತಕ್ಕ ಹಾಗೆ ಪ್ರೋಟೀನ್​ ಅಂಶಗಳು ದೊರೆಯಬೇಕು. ಇದಕ್ಕಾಗಿ ಕಡಲೆಕಾಯಿ, ಮೊಸರು, ಬಾದಾಮಿಯಂತಹ ಪ್ರೋಟೀನ್​ಯುಕ್ತ  ಆಹಾರವನ್ನು ಸೇವಿಸಿ. ಪ್ರತಿದಿನ 1 ಗ್ರಾಮ್​ನಷ್ಟು ಪ್ರೋಟಿನ್​ಭರಿತ ಆಹಾರವನ್ನು ಸೇವಿನೆ ದೇಹದಲ್ಲಿರುವ ಮಾಂಸಖಂಡಗಳನ್ನು ಬಲಪಡಿಸುತ್ತವೆ. ಇದರ ಜತೆಗೆ ಡೈರಿ ಉತ್ಪನ್ನಗಳಾದ ಹಾಲು, ಮೊಸರಿನ ಸೇವನೆಯೂ ಪ್ರತಿದಿನ ನಿಮ್ಮ ಡಯೆಟ್​ ಆಹಾರದಲ್ಲಿರಲಿ.

ಒಮೆಗಾ 3 ಆಹಾರಗಳು ಮೀನು, ಏಡಿ ಸೇರಿದಂತೆ ಸಮುದ್ರ ಆಹಾರಗಳಲ್ಲಿ ಒಮೆಗಾ3 ಅಂಶ ಯಥೇಚ್ಛವಾಗಿರುತ್ತವೆ. ಇದು ನಿಮ್ಮ  ದೇಹದಲ್ಲಿ ಶಕ್ತಿಯ ವರ್ಧನೆಗೆ ಸಹಾಯ ಮಾಡುತ್ತದೆ ಜತೆಗೆ ನಿಮ್ಮ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ. ಇನ್ನು ಸಸ್ಯಾಹಾರಿಗಳಿಗೆ ಕಡಲೆಕಾಯಿ, ಡ್ರೈಫ್ರೂಟ್ಸ್​ ಹಾಗೂ ತರಕಾರಿಗಳಲ್ಲಿ ಹೆಚ್ಚು ಒಮೆಗಾ 3 ಅಂಶಗಳು ಸಿಗುತ್ತವೆ.  ಆದ್ದರಿಂದ ಒಮೆಗಾ 3 ಅಂಶದ ಆಹಾರಗಳು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿರಲಿ.

ಕ್ಯಾಲ್ಸಿಯಂ ಕ್ಯಾಲ್ಸಿಯಂ ನಿಮ್ಮ ದೇಹದಲ್ಲಿನ ಮೂಳೆಗಳ ಬಲವರ್ಧನೆಗೆ ಸಹಾಯಕವಾಗಿದೆ. ಹಲ್ಲುಗಳ ಆರೋಗ್ಯಕ್ಕೂ ಕ್ಯಾಲ್ಸಿಯಂ ಅತೀ ಅಗತ್ಯವಾಗಿದೆ. ಹೀಗಾಗಿ ನೀವು ಹಾಲು, ಮೊಸರು, ಚೀಸ್​, ಬೀನ್ಸ್​​ನಂತಹ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿ.

ವಿಟಮಿನ್​ ಡಿ ವಿಟಮಿನ್​ ಡಿ ಅಂಶವು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೂರ್ಯನ ಎಳೆಕಿರಣಗಳಿಂದ ಸುಲಭವಾಗಿ ಸಿಗುವ ವಿಟಮಿನ್​ ಡಿ ದೇಹವನ್ನು ಬೆಚ್ಚಗಿರಿಸಿ ಚಯಾಪಯಗಳನ್ನು ಸುಗಮಗೊಳಿಸುತ್ತದೆ. ಸೂರ್ಯನ ಕಿರಣಗಳಿಂದ ಮಾತ್ರವಲ್ಲ, ಅಡುಗೆಯಲ್ಲಿ ಬಳಸುವ ಎಣ್ಣೆ, ಮೊಟ್ಟೆ, ಕಿತ್ತಳೆ ಹಣ್ಣುಗಳಿಂದಲೂ ವಿಟಮಿನ್​ ಡಿ ಅಂಶ ನಿಮಗೆ ದೊರೆಯುತ್ತದೆ.

ವಿಟಮಿನ್​ ಎ,ಇ,ಸಿ ವಿಟಮಿನ್​ ಎ ನಿಮ್ಮ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ರಕ್ಷಣೆ ನೀಡುತ್ತದೆ. ಹೀಗಾಗಿ ಕ್ಯಾರೆಟ್​,ಗೆಣಸಿನಂತಹ ಆಹಾರ ಹೆಚ್ಚು ಸೇವಿಸಿ. ಇನ್ನು ವಿಟಮಿನ್ ಇ ಅಂಶಗಳು ದೇಹದಲ್ಲಿ ರೋಗವನ್ನು ತಡೆಯಲು ಸಹಾಯಕವಾಗಿದೆ. ವಿಟಮಿನ್​ ಇ ಅಂಶವು ಸಾಮಾನ್ಯವಾಗಿ ದಿನನಿತ್ಯ ಸೇವಿಸುವ ಎಲ್ಲ ರೀತಿಯ ಆಹಾರಗಳಲ್ಲಿಯೂ ಇರುತ್ತದೆ. ಉದಾಹರಣೆಗೆ ಅಡುಗೆ ಎಣ್ಣೆ, ಶೇಂಗಾ, ಬಾದಾಮಿಯಂತಹ ಬೀಜಗಳು ವಿಟಮಿನ್​ ಇ ಅಂಶಗಳು ಒಳಗೊಂಡಿರುತ್ತವೆ. ವಿಟಮಿನ್​​ ಸಿ ಅಂಶಗಳು ನಿಮ್ಮ ಡ್ಯಾಮೇಜ್​ ಆದ ಚರ್ಮವನ್ನು ಸರಿಪಡಿಸುತ್ತದೆ.  ಕಿವಿ, ಸ್ಟ್ರಾಬೆರಿಯಂತಹ ಹಣ್ಣುಗಳಿಂದ ವಿಟಮಿನ್​ ಸಿ ಅಂಶವು ದೊರೆಯುತ್ತದೆ.

ಜಿಂಕ್​ /ಸತು ಜಿಂಕ್​ ಇರುವ ಆಹಾರ ಪದಾರ್ಥಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಸುಧಾರಿಸುತ್ತವೆ. ಚಿಕ್ಕಮಕ್ಕಳಿಗೆ ಹಾಗೂ  ಗರ್ಭಿಣಿಯರಿಗೆ ಈ ಜಿಂಕ್​ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಬೇಕು. ಮಾಂಸಹಾರಿಗಳಾಗಿದ್ದರೆ  ಚಿಕನ್​ನಂತಹ ಆಹಾರಗಳಲ್ಲಿ ಜಿಂಕ್​ ಅಂಶ ಸಿಗುತ್ತವೆ. ಸಸ್ಯಾಹಾರಿಗಳಾಗಿದ್ದರೆ ಬೀನ್ಸ್​ , ಕಡಲೆ, ಶೇಂಗಾದಲ್ಲಿ ಹೆಚ್ಚು ಸಿಗುತ್ತದೆ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು