2050ರ ಹೊತ್ತಿಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಕಾಡಲಿದೆ ಸಮೀಪದೃಷ್ಟಿ ದೋಷ

ಸಮೀಪದೃಷ್ಟಿ ಸಮಸ್ಯೆ, 2050 ರ ವೇಳೆಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ ಇದನ್ನು ರೋಗವೆಂದು ವರ್ಗೀಕರಿಸಲಾಗಿದೆ. ಅದಲ್ಲದೆ ಇದನ್ನು ತಡೆಯಲು ಮಕ್ಕಳ ಹೊರಾಂಗಣ ಸಮಯವನ್ನು ಹೆಚ್ಚಿಸಬೇಕು ಎಂದು ಹೊಸ ವರದಿ ಹೇಳುತ್ತದೆ. ಹಾಗಾದರೆ ದೃಷ್ಟಿದೋಷ ಕಾಣಿಸಿಕೊಳ್ಳಲು ಕಾರಣವೇನು? ಲಕ್ಷಣಗಳೇನು? ಯಾವ ರೀತಿ ತಡೆಯಬಹುದು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

2050ರ ಹೊತ್ತಿಗೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಕಾಡಲಿದೆ ಸಮೀಪದೃಷ್ಟಿ ದೋಷ
Follow us
| Updated By: ಅಕ್ಷತಾ ವರ್ಕಾಡಿ

Updated on: Oct 12, 2024 | 6:28 PM

ಇತ್ತೀಚಿನ ವರ್ಷಗಳಲ್ಲಿ ಮಯೋಪಿಯಾ ಊಹೆಗೂ ನಿಲುಕದಷ್ಟು ಹೆಚ್ಚಾಗಿದೆ. ಸಮೀಪದೃಷ್ಟಿ ಅಂದರೆ ದೂರದ ವಸ್ತುಗಳನ್ನು ನೋಡಲು ಕಷ್ಟವಾಗುವ ದೃಷ್ಟಿ ಸಮಸ್ಯೆಗೆ ಮಯೋಪಿಯಾ ಎಂದು ಕರೆಯಲಾಗುತ್ತದೆ ಅಥವಾ ಮಯೋಪಿಯಾ ಎಂದರೆ ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ಹತ್ತಿರದಿಂದ ಸ್ಪಷ್ಟವಾಗಿ ನೋಡುತ್ತಾನೆ ಆದರೆ ಅದು ದೂರದಲ್ಲಿದ್ದರೆ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ದೂರದಲ್ಲಿರುವ ವಸ್ತುಗಳು ಮಸುಕಾಗಿ ಕಾಣುತ್ತದೆ. ಈ ಸಮಸ್ಯೆ ಈಗ ಏಷ್ಯಾದ ಕೆಲವು ದೇಶಗಳಲ್ಲಿ 88 ಪ್ರತಿಶತದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. ನಮ್ಮ ದೇಶದಲ್ಲಿ ಇದು ಹೆಚ್ಚು ತೀವ್ರವಾಗುತ್ತಿದೆಯಾದರೂ ಒಂದು ಅಂದಾಜಿನ ಪ್ರಕಾರ, 2050ರ ಹೊತ್ತಿಗೆ, ಐದು ಶತಕೋಟಿ ಜನರು ಅಂದರೆ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಹತ್ತಿರದ ದೃಷ್ಟಿಯುಳ್ಳವರು ಅಂದರೆ ಸಮೀಪದೃಷ್ಟಿ ಸಮಸ್ಯೆಯಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ. ಈ ಅಂಶಗಳು ಮಹತ್ವದ್ದಾಗಿದೆ. ಏಕೆಂದರೆ ಮಯೋಪಿಯಾ ದೃಷ್ಟಿ ದೌರ್ಬಲ್ಯಕ್ಕೆ ಪ್ರಮುಖ ಕಾರಣವಾಗಿದೆ.

ಈ ಹೆಚ್ಚುತ್ತಿರುವ ಸಮಸ್ಯೆಯನ್ನು ತಡೆಯಲು ಸ್ಪಷ್ಟ ಕ್ರಮಗಳಿಗಾಗಿ ಹುಡುಕಾಟ ನಡೆಯುತ್ತಿದೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಎಂಜಿನಿಯರಿಂಗ್ ಮತ್ತು ಮೆಡಿಸಿನ್ (ಎನ್ಎಎಸ್ಇಎಂ) ನ ತಜ್ಞರ ಸಮಿತಿಯು ಮಯೋಪಿಯಾ ಹೆಚ್ಚುತ್ತಿರಲು ಕಾರಣಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಹಲವಾರು ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಮಯೋಪಿಯಾವನ್ನು ವೈದ್ಯಕೀಯ ರೋಗನಿರ್ಣಯದ ಅಗತ್ಯವಿರುವ ಸಮಸ್ಯೆ ಎಂದು ಮರು ವರ್ಗೀಕರಿಸಲು ಸೆಂಟರ್ಸ್ ಫಾರ್ ಮೆಡಿಕೇರ್ & ಮೆಡಿಕೈಡ್ ಸರ್ವೀಸಸ್ಗೆ ಕರೆ ನೀಡಿದೆ. ಇನ್ನು ಮಯೋಪಿಯಾ ಪ್ರಕರಣಗಳನ್ನು ಇತರ ದೇಶಗಳಿಗೆ ಹೋಲಿಸಿದರೆ ಯುಎಸ್, 1970 ರ ದಶಕದ ಆರಂಭದಲ್ಲಿ 12 ರಿಂದ 54 ವರ್ಷ ವಯಸ್ಸಿನ ಜನರಲ್ಲಿ 25 ಪ್ರತಿಶತದಿಂದ, 2000 ರ ದಶಕದ ಆರಂಭದಲ್ಲಿ 42 ಪ್ರತಿಶತಕ್ಕೆ ಏರಿದೆ ಎಂದು ರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ಪುರುಷರಲ್ಲಿ ಕೆಟ್ಟ ಆಲೋಚನೆ ಬರದಂತೆ ತಡೆಯುವುದು ಹೇಗೆ? ಇಲ್ಲಿದೆ ಸರಳ ಆರೋಗ್ಯ ಸಲಹೆ

ದೃಷ್ಟಿದೋಷ ಕಾಣಿಸಿಕೊಳ್ಳಲು ಕಾರಣವೇನು?

ದೃಷ್ಟಿಯ ಸೂಕ್ಷ್ಮತೆಗೆ ಕೃಷ್ಣಪಟಲ (ಕಾರ್ನಿಯಾ) ಹಾಗೂ ಕಣ್ಣಿನ ಪರದೆಯ (ರೆಟಿನಾ), ಆಪ್ಟಿಕ್‌ ನರಗಳ ಸುಸ್ಥಿತಿಯ ಕಾರ್ಯನಿರ್ವಹಣೆ ಅಗತ್ಯವಾಗಿದೆ. ಇವುಗಳ ವಕ್ರೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳು ಇದ್ದರೆ ದೃಷ್ಟಿದೋಷ ಕಾಣಿಸಿಕೊಳ್ಳುತ್ತದೆ. ಇದರಿಂದ ಮಂದ ದೃಷ್ಟಿ ಉಂಟಾಗುತ್ತದೆ. ಮುನ್ನೆಚ್ಚರಿಕೆ ವಹಿಸಿಸುವುದಲ್ಲದೆ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

ದೃಷ್ಟಿ ಸಮಸ್ಯೆಗಳ ಲಕ್ಷಣಗಳು:

  • ಮಸುಕಾದ ದೃಷ್ಟಿ
  • ಕಡಿಮೆ ಬೆಳಕಿನಲ್ಲಿ ನೋಡಲು ಕಷ್ಟ
  • ಕಣ್ಣಿನ ಆಯಾಸ ಅಥವಾ ಅಸ್ವಸ್ಥತೆ
  • ತಲೆನೋವು
  • ದೀಪಗಳ ಸುತ್ತ ಹಾಲೋಸ್
  • ಕೆಂಪು ಅಥವಾ ಕಿರಿಕಿರಿಗೊಂಡ ಕಣ್ಣುಗಳು
  • ರಾತ್ರಿ ದೃಷ್ಟಿ ಕಡಿಮೆಯಾಗುವುದು
  • ಬೆಳಕಿಗೆ ಸೂಕ್ಷ್ಮತೆ

ಅದರಲ್ಲಿಯೂ ಮಕ್ಕಳಲ್ಲಿ ಈ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದ್ದು ತಜ್ಞರು ಹೇಳುವ ಪ್ರಕಾರ, ಮಕ್ಕಳನ್ನು ಪ್ರತಿದಿನ ಒಂದರಿಂದ ಎರಡು ಗಂಟೆಗಳ ಕಾಲ ಹೊರಾಂಗಣದಲ್ಲಿ ಕಳೆಯಲು ಪೋಷಕರು ಅನುವುಮಾಡಿ ಕೊಡಬೇಕು ಎನ್ನುತ್ತಾರೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ, ಮಕ್ಕಳು ಯಾವಾಗಲೂ ಮನೆಯೊಳಗೆ ಇರುತ್ತಾರೆ ಅದಲ್ಲದೆ ಅವರು ಹೆಚ್ಚು ಹೊರಾಂಗಣ ಆಟ ಆಡುವುದಿಲ್ಲ. ಹೊರಗಿನ ಬೆಳಕು ಕೂಡ ಮಕ್ಕಳ ಮೇಲೆ ಬೀಳುವುದಿಲ್ಲ. ಇವೆಲ್ಲವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಜನತೆ ಈ ಬಗ್ಗೆ ಎಚ್ಚೆತ್ತುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್