AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health News: ಎದೆ ನೋವು ಕಾಣಿಸಿಕೊಂಡಾಕ್ಷಣ ಅದು ಗ್ಯಾಸ್ಟ್ರಿಕ್‌ ಅಥವಾ ಹೃದಯಾಘಾತವೋ ಎಂದು ಗುರುತಿಸುವುದು ಹೇಗೆ?

ಎದೆಯಲ್ಲಿನ ನೋವು ಹೊಟ್ಟೆಯ ಅನಿಲಕ್ಕೆ ಸಂಬಂಧಿಸಿದ ಸಮಸ್ಯೆಯೇ ಅಥವಾ ಅದು ಹೃದಯದಲ್ಲಿ ಯಾವುದಾದರೂ ಸಮಸ್ಯೆಯ ಸಂಕೇತವೇ ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

Health News: ಎದೆ ನೋವು ಕಾಣಿಸಿಕೊಂಡಾಕ್ಷಣ ಅದು ಗ್ಯಾಸ್ಟ್ರಿಕ್‌ ಅಥವಾ ಹೃದಯಾಘಾತವೋ ಎಂದು ಗುರುತಿಸುವುದು ಹೇಗೆ?
ಅಕ್ಷತಾ ವರ್ಕಾಡಿ
|

Updated on:Jun 09, 2024 | 4:29 PM

Share

ಕಳೆದ ಕೆಲವು ವರ್ಷಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆಯೂ ಜನರು ಚಿಂತಿತರಾಗಿದ್ದಾರೆ. ಕೆಲವರು ಎದೆನೋವಿನ ಸಮಸ್ಯೆಯನ್ನು ಹೃದ್ರೋಗ ಎಂದು ಪರಿಗಣಿಸಿ ಆಸ್ಪತ್ರೆಗೆ ಹೋಗಿ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡುತ್ತಾರೆ. ಆದರೆ ನಂತರ ನೋವು ಸಾಮಾನ್ಯ ಗ್ಯಾಸ್ ಸಮಸ್ಯೆಯೇ ಹೊರತು ಹೃದಯಾಘಾತವಲ್ಲ ಎಂದು ವೈದ್ಯರು ಹೇಳಿದಾಗ ಮಾತ್ರ ಮನಸ್ಸಿಗೆ ಸಮಧಾನ. ಅಂತಹ ಪರಿಸ್ಥಿತಿಯಲ್ಲಿ, ಎದೆಯಲ್ಲಿನ ನೋವು ಹೊಟ್ಟೆಯ ಅನಿಲಕ್ಕೆ ಸಂಬಂಧಿಸಿದ ಸಮಸ್ಯೆಯೇ ಅಥವಾ ಅದು ಹೃದಯದಲ್ಲಿ ಯಾವುದಾದರೂ ಸಮಸ್ಯೆಯ ಸಂಕೇತವೇ ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

ಈ ರೋಗಲಕ್ಷಣಗಳನ್ನು ನೋಡಿಕೊಳ್ಳಿ:

ಹೃದಯದಲ್ಲಿ ಯಾವುದೇ ಸಮಸ್ಯೆಯಾದರೆ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಅದರೊಂದಿಗೆ ಬೆವರು, ಉಸಿರಾಟದ ತೊಂದರೆ, ಎಡಗೈಯಲ್ಲಿ ನೋವು ಮತ್ತು ದವಡೆಯಲ್ಲಿ ನೋವು ಕೂಡ ಇರುತ್ತದೆ ಎಂದು ಡಾ.ಜೈನ್ ವಿವರಿಸುತ್ತಾರೆ. ಗ್ಯಾಸ್ ನೋವಿನ ಸಂದರ್ಭದಲ್ಲಿ ಇದು ವಿರಳವಾಗಿ ಸಂಭವಿಸುತ್ತದೆ. ಗ್ಯಾಸ್ ನೋವು ಉಂಟಾದಾಗ, ಎದೆಯ ಮಧ್ಯದಲ್ಲಿ ನೋವು ಜೊತೆಗೆ ಹೊಟ್ಟೆಯಲ್ಲಿ ಸೌಮ್ಯವಾದ ನೋವು ಉಂಟಾಗುತ್ತದೆ. ಹೃದಯಾಘಾತದ ಸಂದರ್ಭಗಳಲ್ಲಿ, ನೋವು ಎದೆಯಿಂದ ಎಡಗೈಗೆ ವಿಸ್ತರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಈ ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿ, ಮೂತ್ರಪಿಂಡದ ಕಲ್ಲು ಕರಗುತ್ತವೆ!

ಧೂಮಪಾನ ಮಾಡುವವರು ಮತ್ತು ಕುಟುಂಬದಲ್ಲಿ ಯಾರಾದರೂ ಹೃದ್ರೋಗ ಹೊಂದಿದ್ದರೆ ಅಥವಾ ಹೆಚ್ಚಿನ ಮಾನಸಿಕ ಒತ್ತಡದಲ್ಲಿದ್ದರೆ, ಅವರು ಇತರರಿಗಿಂತ ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಅಂತಹವರಿಗೆ ಎದೆನೋವು ಮತ್ತು ಅದರೊಂದಿಗೆ ಇತರ ಲಕ್ಷಣಗಳು ಕಂಡುಬಂದರೆ, ಅವರು ತಕ್ಷಣ ಆಸ್ಪತ್ರೆಗೆ ಹೋಗಬೇಕು. ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬಾರದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:16 pm, Sun, 9 June 24

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ