AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anxiety: ನಿಮ್ಮ ಆತಂಕವನ್ನು ಮರೆಮಾಚಲು ಏನು ಮಾಡಿ ಗೊತ್ತಾ? ಇಲ್ಲಿದೆ ಮಾಹಿತಿ

ನೋವನ್ನು ಮರೆಮಾಚಲು ನಗುವುದರಿಂದ ಹಿಡಿದು ಚಡಪಡಿಕೆ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವವರೆಗೆ, ಜನರು ಆತಂಕವನ್ನು ಮರೆಮಾಚುವ ಕೆಲವು ಮಾರ್ಗಗಳಿದ್ದು ಈ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರೀತಿ ಭಟ್​, ಗುಣವಂತೆ
| Edited By: |

Updated on: Jun 03, 2023 | 5:36 PM

Share
ನಮ್ಮ ಬೇರೆಲ್ಲಾ ಭಾವನೆಗಳಿಗಿಂತ ಆತಂಕವನ್ನು ಮರೆಮಾಚುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ನಮ್ಮ ಭಾವನೆಗಳು ಹಂಚಿಕೊಳ್ಳಲು ಯೋಗ್ಯವಲ್ಲ ಎಂದು ನಾವು ಭಾವಿಸಿದಾಗ, ಆತಂಕವನ್ನು ಇತರ ಭಾವನೆಗಳೊಂದಿಗೆ ಮರೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಆತಂಕ  ಮುಚ್ಚಿಡಲು ಸಾಧ್ಯವಿಲ್ಲ. ಈ ವಿಷಯವನ್ನು ಉದ್ದೇಶಿಸಿ, ತಜ್ಞರಾದ ಅಂಬರ್ ಸ್ಮಿತ್ ಕೆಲವು ಉಪಯೋಗಕರ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಅದೆನೆಂದರೆ "ಆತಂಕವನ್ನು ಮರೆಮಾಚುವುದು ತುಂಬಾ ದುಃಖಕರವಾಗಿರುತ್ತದೆ. ಜೊತೆಗೆ ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಾವು ಹೆಚ್ಚು ಹೆಚ್ಚು ಪ್ರತಿರೋಧಿಸಿದಷ್ಟೂ ಅದು ಕೆಟ್ಟದಾಗಿ ತೋರಬಹುದು. ನಮ್ಮ ಆತಂಕವನ್ನು ನಿಭಾಯಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಮಾತ್ರ ಇದಕ್ಕೆ ಪರಿಹಾರವನ್ನು ನೀಡಬಹುದು, ಇದರಿಂದ ನಮನ್ನು ಆತಂಕದಿಂದ ನಿಯಂತ್ರಿಸಲ್ಪಡುವುದನ್ನು ನಿಲ್ಲಿಸಬಹುದು" ಎಂದಿದ್ದಾರೆ. ಆತಂಕವನ್ನು ಮರೆಮಾಚಲು ನಾವು ಪ್ರಯತ್ನಿಸುವ ಕೆಲವು ಮಾರ್ಗಗಳ ಬಗ್ಗೆ ಅಂಬರ್ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ನಮ್ಮ ಬೇರೆಲ್ಲಾ ಭಾವನೆಗಳಿಗಿಂತ ಆತಂಕವನ್ನು ಮರೆಮಾಚುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ನಮ್ಮ ಭಾವನೆಗಳು ಹಂಚಿಕೊಳ್ಳಲು ಯೋಗ್ಯವಲ್ಲ ಎಂದು ನಾವು ಭಾವಿಸಿದಾಗ, ಆತಂಕವನ್ನು ಇತರ ಭಾವನೆಗಳೊಂದಿಗೆ ಮರೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಆತಂಕ ಮುಚ್ಚಿಡಲು ಸಾಧ್ಯವಿಲ್ಲ. ಈ ವಿಷಯವನ್ನು ಉದ್ದೇಶಿಸಿ, ತಜ್ಞರಾದ ಅಂಬರ್ ಸ್ಮಿತ್ ಕೆಲವು ಉಪಯೋಗಕರ ಸಂಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಅದೆನೆಂದರೆ "ಆತಂಕವನ್ನು ಮರೆಮಾಚುವುದು ತುಂಬಾ ದುಃಖಕರವಾಗಿರುತ್ತದೆ. ಜೊತೆಗೆ ನಮ್ಮ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ನಾವು ಹೆಚ್ಚು ಹೆಚ್ಚು ಪ್ರತಿರೋಧಿಸಿದಷ್ಟೂ ಅದು ಕೆಟ್ಟದಾಗಿ ತೋರಬಹುದು. ನಮ್ಮ ಆತಂಕವನ್ನು ನಿಭಾಯಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವುದು ಮಾತ್ರ ಇದಕ್ಕೆ ಪರಿಹಾರವನ್ನು ನೀಡಬಹುದು, ಇದರಿಂದ ನಮನ್ನು ಆತಂಕದಿಂದ ನಿಯಂತ್ರಿಸಲ್ಪಡುವುದನ್ನು ನಿಲ್ಲಿಸಬಹುದು" ಎಂದಿದ್ದಾರೆ. ಆತಂಕವನ್ನು ಮರೆಮಾಚಲು ನಾವು ಪ್ರಯತ್ನಿಸುವ ಕೆಲವು ಮಾರ್ಗಗಳ ಬಗ್ಗೆ ಅಂಬರ್ ಮತ್ತಷ್ಟು ಬೆಳಕು ಚೆಲ್ಲಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

1 / 7
ನಮ್ಮಲ್ಲಿರುವ ನೋವನ್ನು ನುಂಗಿಕೊಂಡು ನಗಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತಾರೆ. ನಮ್ಮ ಆತಂಕದ ಭಾವನೆಗಳನ್ನು ಮರೆಮಾಚಲು ಇದೊಂದು ಅತ್ಯುತ್ತಮ ಮಾರ್ಗವಾಗಿರುವುದು ಸುಳ್ಳಲ್ಲ.

ನಮ್ಮಲ್ಲಿರುವ ನೋವನ್ನು ನುಂಗಿಕೊಂಡು ನಗಲು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ಮಾಡುತ್ತಾರೆ. ನಮ್ಮ ಆತಂಕದ ಭಾವನೆಗಳನ್ನು ಮರೆಮಾಚಲು ಇದೊಂದು ಅತ್ಯುತ್ತಮ ಮಾರ್ಗವಾಗಿರುವುದು ಸುಳ್ಳಲ್ಲ.

2 / 7
ನಾವು ಆಗಾಗ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಹೆದರುತ್ತೇವೆ. ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ. ಏಕೆಂದರೆ ಮಾತಾಡಿ ನೆನಪು ಮಾಡಿಕೊಂಡರೆ ನೋವು ಅಧಿಕ.

ನಾವು ಆಗಾಗ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಹೆದರುತ್ತೇವೆ. ಬದಲಿಗೆ ಮೌನವಾಗಿರಲು ಆಯ್ಕೆ ಮಾಡುತ್ತೇವೆ. ಏಕೆಂದರೆ ಮಾತಾಡಿ ನೆನಪು ಮಾಡಿಕೊಂಡರೆ ನೋವು ಅಧಿಕ.

3 / 7
ನಮ್ಮ ನಿಯಂತ್ರಣಕ್ಕೆ ಮೀರಿದ ದೇಹದಲ್ಲಿನ ನರಗಳ ಚಲನೆಗಳನ್ನು ನಾವು ಎದುರಿಸಿದಾಗ ಕೆಲವೊಮ್ಮೆ ಆತಂಕವು ದೈಹಿಕವಾಗಿ ಕಂಡುಬರುತ್ತದೆ. ಉದಾಹರಣೆಗೆ ಚಡಪಡಿಕೆ.

ನಮ್ಮ ನಿಯಂತ್ರಣಕ್ಕೆ ಮೀರಿದ ದೇಹದಲ್ಲಿನ ನರಗಳ ಚಲನೆಗಳನ್ನು ನಾವು ಎದುರಿಸಿದಾಗ ಕೆಲವೊಮ್ಮೆ ಆತಂಕವು ದೈಹಿಕವಾಗಿ ಕಂಡುಬರುತ್ತದೆ. ಉದಾಹರಣೆಗೆ ಚಡಪಡಿಕೆ.

4 / 7
ಆತಂಕವನ್ನು ಮರೆಮಾಚಲು ಅಥವಾ ಅದನ್ನು ಎದುರಿಸದಂತೆ ನಮ್ಮನ್ನು ತಡೆಯಲು ಚಂಚಲತೆ  ಹೆಚ್ಚಾಗಿ ಬಳಕೆಯಾಗುತ್ತದೆ. ಹೇಗೆಂದರೆ ಆ ವಿಷ್ಯದ ಯೋಚನೆ ಬಿಟ್ಟು ಬೇರೆ ಬೇರೆ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಆತಂಕವನ್ನು ಮರೆ ಮಾಡುವ ಒಂದು ಮಾರ್ಗವಾಗಿದೆ.

ಆತಂಕವನ್ನು ಮರೆಮಾಚಲು ಅಥವಾ ಅದನ್ನು ಎದುರಿಸದಂತೆ ನಮ್ಮನ್ನು ತಡೆಯಲು ಚಂಚಲತೆ ಹೆಚ್ಚಾಗಿ ಬಳಕೆಯಾಗುತ್ತದೆ. ಹೇಗೆಂದರೆ ಆ ವಿಷ್ಯದ ಯೋಚನೆ ಬಿಟ್ಟು ಬೇರೆ ಬೇರೆ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಆತಂಕವನ್ನು ಮರೆ ಮಾಡುವ ಒಂದು ಮಾರ್ಗವಾಗಿದೆ.

5 / 7
ನಮ್ಮಲ್ಲಿ ಕೆಲವರು ಸಂದರ್ಭಗಳನ್ನು ಎದುರಿಸಲು  ಭಯ ಪಡುತ್ತಾರೆ. ಆಗ ನಾವು ಪ್ರತಿಯೊಂದಕ್ಕೂ ಕಾರಣ ಕೊಡಲು ಆರಂಭಿಸುತ್ತೇವೆ.

ನಮ್ಮಲ್ಲಿ ಕೆಲವರು ಸಂದರ್ಭಗಳನ್ನು ಎದುರಿಸಲು ಭಯ ಪಡುತ್ತಾರೆ. ಆಗ ನಾವು ಪ್ರತಿಯೊಂದಕ್ಕೂ ಕಾರಣ ಕೊಡಲು ಆರಂಭಿಸುತ್ತೇವೆ.

6 / 7
ನಾವು ಎದುರಿಸುತ್ತಿರುವ ಭಾವನೆಗಳನ್ನು ಆಗಾಗ ಕಡೆಗಣಿಸುತ್ತೇವೆ. ಜೊತೆಗೆ  ಅದನ್ನು ಒಪ್ಪಿಕೊಳ್ಳುತ್ತೇವೆ ಆದರೆ ಅದು ಎಷ್ಟು ದುಃಖಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನಾವು ನಿರಾಕರಿಸುತ್ತೇವೆ.

ನಾವು ಎದುರಿಸುತ್ತಿರುವ ಭಾವನೆಗಳನ್ನು ಆಗಾಗ ಕಡೆಗಣಿಸುತ್ತೇವೆ. ಜೊತೆಗೆ ಅದನ್ನು ಒಪ್ಪಿಕೊಳ್ಳುತ್ತೇವೆ ಆದರೆ ಅದು ಎಷ್ಟು ದುಃಖಕರವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನಾವು ನಿರಾಕರಿಸುತ್ತೇವೆ.

7 / 7
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​