AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಿಂತು ಹಾಲು ಕುಡಿದರೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆಯೇ?: ತಜ್ಞರು ಏನಂತಾರೆ?

ಈ ರೀತಿ ಹಾಲು ಕುಡಿಯುವುದರಿಂದ ದೇಹಕ್ಕೆ ನಿಜವಾಗಿಯೂ ಹೆಚ್ಚಿನ ಲಾಭ ಸಿಗುತ್ತದೆಯೇ?. ಈ ಬಗ್ಗೆ ನಾವು ನಿಜ ತಿಳಿಯಲು ತಜ್ಞರನ್ನು ಕೇಳಿದಾಗ, ಇದು ಸುಳ್ಳು ಎಂಬುದು ಅವರ ಉತ್ತರವಾಗಿತ್ತು. ಎದ್ದು ನಿಂತು ಹಾಲು ಕುಡಿದರೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆ ಎಂಬ ಮಾಹಿತಿ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಆಯುರ್ವೇದ ವೈದ್ಯೆ ಸುಮಾ ಶಾಸ್ತ್ರೀ ಅವರು ಹೇಳಿದ್ದಾರೆ.

Health Tips: ನಿಂತು ಹಾಲು ಕುಡಿದರೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆಯೇ?: ತಜ್ಞರು ಏನಂತಾರೆ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Dec 18, 2024 | 6:00 PM

Share

ಪ್ರತಿದಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಹಾಲು ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ರೋಗಗಳು ಬರದಿರುವಂತೆ ತಡೆಯುವ ಶಕ್ತಿಯೂ ಇದಕ್ಕಿದೆ. ಆದರೆ ಹಾಲಿನ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ನಿಂತಿರುವಾಗ ಹಾಲು ಕುಡಿದರೆ ಉತ್ತಮ ಎಂದು ಕೆಲವು ಭಾವಿಸಿದ್ದಾರೆ. ಅಂದರೆ ನಿಂತು ಕೋಡು ಹಾಲು ಕುಡಿದರೆ ನಮಗೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆ ಎಂಬ ಭಾವನೆ ಕೆಲವರಲ್ಲಿದೆ.

ಈ ರೀತಿ ಹಾಲು ಕುಡಿಯುವುದರಿಂದ ದೇಹಕ್ಕೆ ನಿಜವಾಗಿಯೂ ಹೆಚ್ಚಿನ ಲಾಭ ಸಿಗುತ್ತದೆಯೇ?. ಈ ಬಗ್ಗೆ ನಾವು ನಿಜ ತಿಳಿಯಲು ತಜ್ಞರನ್ನು ಕೇಳಿದಾಗ, ಇದು ಸುಳ್ಳು ಎಂಬುದು ಅವರ ಉತ್ತರವಾಗಿತ್ತು. ಎದ್ದು ನಿಂತು ಹಾಲು ಕುಡಿದರೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆ ಎಂಬ ಮಾಹಿತಿ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಆಯುರ್ವೇದ ವೈದ್ಯೆ ಸುಮಾ ಶಾಸ್ತ್ರೀ ಅವರು ಹೇಳಿದ್ದಾರೆ.

ನಿಂತು ಕೋಡು ಹಾಲು ಕುಡಿದರೆ ನಮಗೆ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆ ಎಂಬ ವಿಡಿಯೋ:

ಯೂಟ್ಯೂಬ್ ವಿಡಿಯೋದಲ್ಲಿ, ನಿಂತಿರುವಾಗ ಹಾಲು ಕುಡಿಯಿರಿ ಎಂಬ ಸಲಹೆ ನೀಡಲಾಗಿದೆ. ನಿಂತಿರುವಾಗ ಹಾಲು ಏಕೆ ಕುಡಿಯಬೇಕು ಎಂಬುದು ಮೊದಲ ಪ್ರಶ್ನೆ. ಈ ರೀತಿ ಮಾಡುವುದರಿಂದ ಹಾಲು ದೇಹದ ಪ್ರತಿಯೊಂದು ಭಾಗಕ್ಕೂ ಚೆನ್ನಾಗಿ ತಲುಪುತ್ತದೆ ಮತ್ತು ಹೀರಿಕೊಳ್ಳಲು ಪ್ರಾರಂಭಿಸುತ್ತದೆ ಎಂಬ ಉತ್ತರ ಬರುತ್ತದೆ. ಆಗ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸುಲಭವಾಗಿ ದೊರೆಯುತ್ತದೆ. ಆದರೆ ಕುಳಿತು ಹಾಲು ಕುಡಿಯುವುದು ಸ್ಪೀಡ್ ಬ್ರೇಕರ್ ಆಗಿ ಕೆಲಸ ಮಾಡುತ್ತದೆ. ಹಾಲಿನ ಪೌಷ್ಠಿಕಾಂಶದ ಪ್ರಕ್ರಿಯೆಯು ಪ್ರತಿಯೊಂದು ಭಾಗಕ್ಕೆ ತಲುಪಲು ನಿಧಾನಗೊಳ್ಳುತ್ತದೆ.

ವೈದ್ಯರು ಏನು ಹೇಳುತ್ತಾರೆ?:

ದಕ್ಷಿಣ ಕನ್ನಡದ ಧನ್ವಂತರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯೆ ಡಾ. ಸುಮಾ ಶಾಸ್ತ್ರೀ ಈ ವಿಡಿಯೋದಲ್ಲಿನ ಮಾಹಿತಿಯನ್ನು ತಳ್ಳಿ ತಳ್ಳಿಹಾಕಿದ್ದಾರೆ. ಯಾವುದೇ ರೀತಿಯ ಆಹಾರ ಪದಾರ್ಥವನ್ನು ಕುಳಿತು ತಿನ್ನುವುದರಿಂದ ಅಥವಾ ಕುಡಿಯುವುದರಿಂದ ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ. ಅಲ್ಲದೆ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ ಎಂದು ಅವರು ಹೇಳಿದ್ದಾರೆ

ನಿಂತಿರುವಾಗ ಹಾಲು ಕುಡಿಯುವುದು ಪ್ರಯೋಜನಕಾರಿಯಲ್ಲ. ಇದು ಖಂಡಿತವಾಗಿಯೂ ಹಾನಿ ಉಂಟುಮಾಡಬಹುದು. ಇದು ಅನ್ನನಾಳದ ಕೆಳಭಾಗದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ನಂತರ ಹೊಟ್ಟೆಯನ್ನು ಅನ್ನನಾಳಕ್ಕೆ ಸಂಪರ್ಕಿಸುವ ಸ್ಪಿಂಕ್ಟರ್ ವಿಶ್ರಾಂತಿ ಪಡೆಯುತ್ತದೆ. ಇದು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಗೆ ಕಾರಣವಾಗಬಹುದು.

ಆಯುರ್ವೇದದಲ್ಲೂ ಇದನ್ನು ನಿಷೇಧಿಸಲಾಗಿದೆ:

ಆಯುರ್ವೇದದಲ್ಲಿಯೂ ನಿಂತು ಹಾಲು ಕುಡಿಯುವುದನ್ನು ನಿಷೇಧಿಸಲಾಗಿದೆ. ಇದು ಉಬ್ಬುವುದು ಮತ್ತು ನಂತರ ನೋವು ಉಂಟುಮಾಡಬಹುದು. ಆದ್ದರಿಂದ ಕುಳಿತುಕೊಂಡು ನಿಧಾನವಾಗಿ ಹಾಲು ಕುಡಿಯುವುದು ಉತ್ತಮ. ಇದರೊಂದಿಗೆ, ಹಾಲು ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ಪೋಷಕಾಂಶಗಳು ಉತ್ತಮ ರೀತಿಯಲ್ಲಿ ಹೀರಲ್ಪಡುತ್ತವೆ.

ವಿಡಿಯೋದಲ್ಲಿ ನೀಡಲಾದ ಸಲಹೆಯು ಸಂಪೂರ್ಣ ಸುಳ್ಳಗಾಗಿದೆ. ಕುಳಿತು ಹಾಲು ಕುಡಿಯುವುದೇ ದೇಹಕ್ಕೆ ಉತ್ತಮ ಮಾರ್ಗವಾಗಿದೆ. ಇಂತಹ ವಿಡಿಯೋ ನೋಡಿ ನೀವೂ ಅದನ್ನು ಮಾಡಲು ಹೊರಡುವ ಮುನ್ನ ಯಾವಾಗಲೂ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.

ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು:

1. ಹಾಲಿನ ನಿಯಮಿತ ಸೇವನೆಯು ದೇಹದಲ್ಲಿ ವಿಟಮಿನ್ ಕೊರತೆಯಿಂದ ಉಂಟಾಗುವ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

2. ಹಾಲನ್ನು ಸೇವಿಸುವುದರಿಂದ ದೇಹವು ಸಾಕಷ್ಟು ಕ್ಯಾಲ್ಸಿಯಂ ಪಡೆಯಲು ಸಹಾಯ ಮಾಡುತ್ತದೆ ಮತ್ತು ಮೂಳೆ ರೋಗಗಳನ್ನು ತಡೆಯುತ್ತದೆ.

3. ಹಾಲಿನ ಮೂಲಕವೂ ದೇಹಕ್ಕೆ ಕಬ್ಬಿಣಾಂಶ ದೊರೆಯುತ್ತದೆ. ಇದರಿಂದ ರಕ್ತ ಸಂಬಂಧಿ ಕಾಯಿಲೆಗಳೂ ಬರುವುದಿಲ್ಲ.

4. ಎಸ್ಜಿಮಾ, ಸೋರಿಯಾಸಿಸ್ ಮತ್ತು ಇತರ ಸೋಂಕುಗಳಂತಹ ಚರ್ಮ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ. ದಿನನಿತ್ಯ ಹಾಲು ಕುಡಿಯುವವರಿಗೆ ಇಂತಹ ಕಾಯಿಲೆಗಳು ಬರುವುದಿಲ್ಲ.

5. ವೃದ್ಧಾಪ್ಯವು ದೇಹದ ಮೇಲೆ ಪ್ರಾಬಲ್ಯ ಸಾಧಿಸುವುದಿಲ್ಲ. ನಿತ್ಯ ಹಾಲು ಕುಡಿಯುವವರಿಗೆ ಬೇಕಾದ ಪ್ರೊಟೀನ್ ಸಿಗುತ್ತದೆ. ಹಾಲಿನ ಮೂಲಕ ಚರ್ಮದ ಜೀವಕೋಶಗಳು ಸಾಕಷ್ಟು ತೇವಾಂಶವನ್ನು ಪಡೆಯುತ್ತವೆ. ಹಾಗಾಗಿ ಸುಕ್ಕುಗಳ ಸಮಸ್ಯೆ ಇಲ್ಲ.

6. ದೇಹವು ಫಿಟ್ ಮತ್ತು ಸ್ಲಿಮ್ ಆಗಿರುತ್ತದೆ ದೇಸಿ ಹಸುವಿನ ಹಾಲು ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಗೆ ಅವಕಾಶ ನೀಡುವುದಿಲ್ಲ. ಅಲ್ಲದೆ ಈ ಹಾಲಿನಲ್ಲಿ ಹೆಚ್ಚು ಕೊಬ್ಬು ಇರುವುದಿಲ್ಲ. ಇದರಿಂದಾಗಿ ನಿತ್ಯವೂ ಹಸುವಿನ ಹಾಲನ್ನು ಸೇವಿಸುವವರು ಫಿಟ್ ಮತ್ತು ಸುಂದರವಾಗಿರುತ್ತಾರೆ.

7. ಹಾಲು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಯಾವುದೇ ಸೋಂಕಿನ ವಿರುದ್ಧ ಹೋರಾಡಲು ನಿಮಗೆ ಸಾಧ್ಯವಾಗುತ್ತದೆ.

Follow Us
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
ಬೇರೆ ವಿದ್ಯಾರ್ಥಿಯ ಹಾಸಿಗೆಯಲ್ಲಿ ಮಲಗಿದ್ದಕ್ಕೆ ವಿದ್ಯಾರ್ಥಿಗೆ ಥಳಿತ