AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಸದೃಢವಾಗುತ್ತವೆ, ವಿವರ ಇಲ್ಲಿದೆ

Leafy Greens: ಎಲೆಗಳುಳ್ಳ ಹಸಿರು ಸೊಪ್ಪು ತರಕಾರಿಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಹಸಿರು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಎಲೆಗಳುಳ್ಳ ತರಕಾರಿಗಳಾದ ದಂಟಿನ ಸೊಪ್ಪು, ಮೆಂತ್ಯೆ ಸೊಪ್ಪೊ, ನುಗ್ಗೆಕಾಯಿ ಸೊಪ್ಪು, ಅಗಸೆ ಸೊಪ್ಪು, ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಡಿ ಮತ್ತು ಕೆ ಮುಂತಾದ ಪೋಷಕಾಂಶಗಳು ಈ ಸೊಪ್ಪುಗಳಲ್ಲಿ ಲಭ್ಯವಿವೆ.

ಈ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ಮೂಳೆಗಳು ಸದೃಢವಾಗುತ್ತವೆ, ವಿವರ ಇಲ್ಲಿದೆ
ಹಸಿರು ಸೊಪ್ಪು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ
ಸಾಧು ಶ್ರೀನಾಥ್​
|

Updated on: Aug 15, 2023 | 6:06 AM

Share

ಮೂಳೆಗಳು ಬಲವಾಗಿದ್ದರೆ, ನಮ್ಮ ಒಳಗಿನ ಅಸ್ಥಿಪಂಜರವು ಸದೃಢವಾಗಿರುತ್ತದೆ. ನಮ್ಮ ಮೂಳೆಗಳು ಉತ್ತಮವಾದ್ದರಷ್ಟೇ ನಾವು ಉತ್ತಮವಾಗಿ ನಮ್ಮ ಕಾಲ ಮೇಲೆ ನಾವು ಬಲಶಾಲಿಯಾಗಿ ನಿಲ್ಲುತ್ತೇವೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸಲು ಅತ್ಯವಶ್ಯ. ಆರೋಗ್ಯಕರ ಮೂಳೆಗಳಿಗಾಗಿ ಇವೆರಡೂ ಅತ್ಯಗತ್ಯ. ಇವುಗಳ ಜೊತೆಗೆ ದೈನಂದಿನ ವ್ಯಾಯಾಮವೂ ಅಷ್ಟೇ ಮುಖ್ಯ. ವ್ಯಾಯಾಮ ಮಾಡದಿದ್ದರೆ.. ದೇಹದ ಚಲನೆ ಅಥವಾ ಮೂಳೆಗಳ ಆರೋಗ್ಯ ಹಾಳಾಗುತ್ತದೆ. ಸಣ್ಣ ಏಟಿನಿಂದಲೂ ಮೂಳೆ ಮುರಿಯುವ ಅಪಾಯವಿರುತ್ತದೆ. ನಿಮಗೆ ವಿಟಮಿನ್ ಡಿ ಕೊರತೆ (Vitamin D Deficiency) ಇದೆ ಎಂದು ಗೊತ್ತಾದರೆ.. ನೀವು ಮುಂಜಾನೆ ಬಿಸಿಲಿನಲ್ಲಿ ಇರಬೇಕು. ಅಲ್ಲದೆ ವಿಟಮಿನ್ ಡಿ ಇರುವ ಆಹಾರಗಳನ್ನು (Leafy Greens) ಸೇವಿಸಿ.

ಈ ಹಸಿರು ಸೊಪ್ಪು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ:

ವಿಶೇಷವಾಗಿ ಎಲೆಗಳುಳ್ಳ ಹಸಿರು ಸೊಪ್ಪು ತರಕಾರಿಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ವಾರಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಹಸಿರು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಎಲೆಗಳುಳ್ಳ ತರಕಾರಿಗಳಾದ ದಂಟಿನ ಸೊಪ್ಪು, ಮೆಂತ್ಯೆ ಸೊಪ್ಪೊ, ನುಗ್ಗೆಕಾಯಿ ಸೊಪ್ಪು, ಅಗಸೆ ಸೊಪ್ಪು, ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಡಿ ಮತ್ತು ಕೆ ಮುಂತಾದ ಪೋಷಕಾಂಶಗಳು ಈ ಸೊಪ್ಪುಗಳಲ್ಲಿ ಲಭ್ಯವಿವೆ. ಹಸಿರು ಸೊಪ್ಪು ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಹಾಗೂ ಮೂಳೆಗಳಿಗೆ ಒಳ್ಳೆಯದೇ. ಆದ್ದರಿಂದ ನೀವು ಸೊಪ್ಪನ್ನು ಸೇವಿಸಿದರೆ ಅದರಿಂದ ಪ್ರಯೋಜನಗಳೇ ಹೊರತು, ಯಾವುದೇ ಹಾನಿಯಾಗುವುದಿಲ್ಲ.

ದಿನವೂ ವ್ಯಾಯಾಮ ಮಾಡಿ:

ಮೂಳೆಗಳು ಗಟ್ಟಿಯಾಗಿರಲು ವ್ಯಾಯಾಮ ಕೂಡ ತುಂಬಾ ಒಳ್ಳೆಯದು. ದಿನನಿತ್ಯದ ವ್ಯಾಯಾಮವು ಸ್ನಾಯುಗಳನ್ನು ಚಲಿಸುವಂತೆ ಮಾಡುತ್ತದೆ ಮತ್ತು ನೈಟ್ರಿಕ್ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಮೂಳೆ ಅಂಗಾಂಶಕ್ಕೆ ರಕ್ತ ಪರಿಚಲನೆಯು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತದೆ. ಅದಕ್ಕಾಗಿಯೇ ವೈದ್ಯರು ದಿನಕ್ಕೆ ಒಂದರಿಂದ ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡಲು ಸೂಚಿಸುತ್ತಾರೆ. ಅಲ್ಲದೆ, ದೈನಂದಿನ ವ್ಯಾಯಾಮವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಮೂಳೆಗಳು ಆರೋಗ್ಯಕರವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ವಿಟಮಿನ್ ಡಿ ಪರೀಕ್ಷೆಗಳನ್ನು ಮಾಡಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ