AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದೇ ಪದೇ ಆ್ಯಸಿಡಿಟಿ ಸಮಸ್ಯೆ ಕಾಡುತ್ತಿದೆಯೇ? ಇದು ಕೊಲೊರೆಕ್ಟಲ್ ಕ್ಯಾನ್ಸರ್​ನ ಲಕ್ಷಣವಾಗಿರಬಹುದು

ಕ್ಯಾನ್ಸರ್​ ಮಾರಣಾಂತಿಕ ಕಾಯಿಲೆಯಾಗಿದ್ದು, ಅದನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತಾರೆ. ಲಕ್ಷಣಗಳಿಂದ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಕಷ್ಟ. ಕೊಲೊರೆಕ್ಟಲ್ ಕ್ಯಾನ್ಸರ್ ಎಂಬುದು ಕರುಳಿನಲ್ಲಿ ಸಂಭವಿಸುವ ಕ್ಯಾನ್ಸರ್ ಆಗಿದೆ. ಕರುಳಿನಲ್ಲಿನ ಬದಲಾವಣೆಗಳು, ಹೊಟ್ಟೆಯಲ್ಲಿ ನೋವು ಮತ್ತು ಗುದದ್ವಾರದಿಂದ ರಕ್ತಸ್ರಾವವು ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಜೀವನದಲ್ಲಿ ಕಂಡು ಬರುವ ಅನೇಕ ರೋಗ ಲಕ್ಷಣಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಕರುಳಿನಲ್ಲಿ ನಿರಂತರ ಅಡಚಣೆ, ಪೈಲ್ಸ್, ಕರುಳಿನಲ್ಲಿ ಊತ, ಕರುಳಿನ ಕಾಯಿಲೆ, ಅತಿಯಾದ ಅನಿಲ.

ಪದೇ ಪದೇ ಆ್ಯಸಿಡಿಟಿ ಸಮಸ್ಯೆ ಕಾಡುತ್ತಿದೆಯೇ? ಇದು ಕೊಲೊರೆಕ್ಟಲ್ ಕ್ಯಾನ್ಸರ್​ನ ಲಕ್ಷಣವಾಗಿರಬಹುದು
ಆ್ಯಸಿಡಿಟಿ
ನಯನಾ ರಾಜೀವ್
|

Updated on: Sep 13, 2023 | 3:00 PM

Share

ಕ್ಯಾನ್ಸರ್(Cancer)​ ಮಾರಣಾಂತಿಕ ಕಾಯಿಲೆಯಾಗಿದ್ದು, ಅದನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತಾರೆ. ಲಕ್ಷಣಗಳಿಂದ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ಕಷ್ಟ. ಕೊಲೊರೆಕ್ಟಲ್ ಕ್ಯಾನ್ಸರ್ ಎಂಬುದು ಕರುಳಿನಲ್ಲಿ ಸಂಭವಿಸುವ ಕ್ಯಾನ್ಸರ್ ಆಗಿದೆ. ಕರುಳಿನಲ್ಲಿನ ಬದಲಾವಣೆಗಳು, ಹೊಟ್ಟೆಯಲ್ಲಿ ನೋವು ಮತ್ತು ಗುದದ್ವಾರದಿಂದ ರಕ್ತಸ್ರಾವವು ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಜೀವನದಲ್ಲಿ ಕಂಡು ಬರುವ ಅನೇಕ ರೋಗ ಲಕ್ಷಣಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಕರುಳಿನಲ್ಲಿ ನಿರಂತರ ಅಡಚಣೆ, ಪೈಲ್ಸ್, ಕರುಳಿನಲ್ಲಿ ಊತ, ಕರುಳಿನ ಕಾಯಿಲೆ, ಅತಿಯಾದ ಅನಿಲ.

ಕ್ಯಾನ್ಸರ್‌ನ ಲಕ್ಷಣಗಳಿವೆಯೇ ಅಥವಾ ಕೇವಲ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಈ ರೀತಿಯಾಗುತ್ತಿದೆಯೇ ಎಂದು ತಿಳಿಯುವುದು ಹೇಗೆ? ಕೊಲೊರೆಕ್ಟಲ್ ಕ್ಯಾನ್ಸರ್ ದೊಡ್ಡ ಕರುಳು ಅಥವಾ ಗುದನಾಳದಲ್ಲಿ ಸಂಭವಿಸುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದು ಕ್ಯಾನ್ಸರ್ ಅಲ್ಲದಿರಬಹುದು. ಸ್ವಲ್ಪ ಸಮಯದ ನಂತರ ಅದು ಕ್ಯಾನ್ಸರ್ ರೂಪದಲ್ಲಿ ಹರಡುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಕ್ಯಾನ್ಸರ್ ಕೋಶಗಳು ದೇಹದಾದ್ಯಂತ ಹರಡಲು ಪ್ರಾರಂಭಿಸುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2020 ರಲ್ಲಿ ವಿಶ್ವಾದ್ಯಂತ ಕೊಲೊರೆಕ್ಟಲ್ ಕ್ಯಾನ್ಸರ್‌ನಿಂದ 10 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 9.3 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಭಾರತದಲ್ಲಿ ಪುರುಷರಲ್ಲಿ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ಪ್ರಕರಣಗಳು 100,000 ಕ್ಕೆ 4.4 ಮತ್ತು 4.1 ಎಂದು ICMR ಹೇಳುತ್ತದೆ. ಅವರು ಮತ್ತಷ್ಟು ಹೇಳಿದರು, “ಮಹಿಳೆಯರಲ್ಲಿ ಕರುಳಿನ ಕ್ಯಾನ್ಸರ್ಗೆ AAR 100000 ಗೆ 3.9 ಆಗಿದೆ. ಪುರುಷರಲ್ಲಿ, ಕರುಳಿನ ಕ್ಯಾನ್ಸರ್ 8 ನೇ ಸ್ಥಾನದಲ್ಲಿದೆ ಮತ್ತು ಗುದನಾಳದ ಕ್ಯಾನ್ಸರ್ 9 ನೇ ಸ್ಥಾನದಲ್ಲಿದೆ.

ಮತ್ತಷ್ಟು ಓದಿ: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದಾ?; ಉತ್ತರ ಇಲ್ಲಿದೆ

ಸಾಮಾನ್ಯ ಅನಿಲ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ನಡುವಿನ ವ್ಯತ್ಯಾಸವೇನು?

ಕೊಲೊರೆಕ್ಟಲ್ ಕ್ಯಾನ್ಸರ್ ಒಂದು ಕಾಯಿಲೆಯಾಗಿದ್ದು, ಇದು ಹೆಚ್ಚಾಗಿ 50 ವರ್ಷಕ್ಕಿಂತ ಮೇಲ್ಪಟ್ಟ ಜನರ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈಗ ಈ ರೋಗವು ಯುವಕರಲ್ಲಿಯೂ ವೇಗವಾಗಿ ಹರಡುತ್ತಿದೆ. ಕೊಲೊರೆಕ್ಟಲ್ ಕ್ಯಾನ್ಸರ್​ನ ಲಕ್ಷಣಗಳು ಆರಂಭದಲ್ಲಿ ಗೋಚರಿಸುವುದಿಲ್ಲ. ಅತಿಸಾರ, ಗುದನಾಳದ ರಕ್ತಸ್ರಾವ ಮತ್ತು ತೂಕ ನಷ್ಟದಂತಹವು ಇವುಗಳಲ್ಲಿ ಸಾಮಾನ್ಯವಾಗಿದೆ

IBS ಅತಿಸಾರ ಮತ್ತು ಬಿಳಿ ಮ್ಯೂಕೋಯಿಡ್ ತರಹದ ದ್ರವದ ವಿಸರ್ಜನೆಯನ್ನು ಉಂಟುಮಾಡುತ್ತದೆ, ಇದು ಕೊಲೊರೆಕ್ಟಲ್ ಕ್ಯಾನ್ಸರ್​ನಲ್ಲಿ ಕಂಡುಬರುವುದಿಲ್ಲ. ಇದು ಸಾಮಾನ್ಯವಾಗಿ ಗುದನಾಳದಿಂದ ರಕ್ತಸ್ರಾವವಾಗುವುದಿಲ್ಲ, ಆದರೆ ಸೆಳೆತ ಮತ್ತು ನೋವು ಸಂಭವಿಸಬಹುದು. ಮಲವಿಸರ್ಜನೆಯ ಸಮಯದಲ್ಲಿ ನೋವು ಇಲ್ಲದೆ ರಕ್ತವು ಹೊರಬರುತ್ತದೆ.

ಕೊಲೊರೆಕ್ಟಲ್ ಕ್ಯಾನ್ಸರ್ನ ಲಕ್ಷಣಗಳು

ಗುದನಾಳದ ರಕ್ತಸ್ರಾವ

ಅತಿಸಾರ ಮತ್ತು ಮಲಬದ್ಧತೆ

ಮಲವಿಸರ್ಜನೆಯ ನಂತರವೂ ಬಂದಂತೆ ಭಾಸವಾಗುವುದು

ಹೊಟ್ಟೆ ನೋವು

ತೂಕ ಇಳಿಕೆ

ಆಲಸ್ಯ ಮತ್ತು ಆಯಾಸ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು