AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ತಿಂಗಳು ಅನ್ನ ಸೇವಿಸದಿದ್ದರೆ, ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? ತಜ್ಞರು ಹೇಳುವುದೇನು?

ಅನ್ನ ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ಕೂಡ ಸಾಕಷ್ಟು ಜನರು ಅನ್ನದಿಂದ ದೂರವಿರುತ್ತಾರೆ. ಫಿಟ್​​​ನೆಸ್​​ ಬಗೆಗೆ ಅತಿಯಾಗಿ ಕಾಳಜಿ ವಹಿಸಿ ತಿಂಗಳು ಕಾಲ ಅನ್ನವನ್ನು ಮುಟ್ಟದೇ ಇರುವವರೂ ಇದ್ದಾರೆ. ಆದರೆ ಒಂದು ತಿಂಗಳು ಅನ್ನ ಸೇವಿಸದಿದ್ದರೆ, ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? ತಜ್ಞರು ನೀಡಿರುವ ಉತ್ತರ ಇಲ್ಲಿದೆ.

ಒಂದು ತಿಂಗಳು ಅನ್ನ ಸೇವಿಸದಿದ್ದರೆ, ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? ತಜ್ಞರು ಹೇಳುವುದೇನು?
Skip rice from your meals For a month
ಅಕ್ಷತಾ ವರ್ಕಾಡಿ
|

Updated on:Jun 22, 2023 | 10:50 AM

Share

ಅನೇಕರಿಗೆ ಪ್ರಧಾನ ಆಹಾರವಾಗಿರುವ ಅನ್ನ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ. ಎಷ್ಟೋ ಜನ ಊಟಕ್ಕೆ ಅನ್ನ ಇರಲೇಬೇಕು. ಆದರೆ, ಅಕ್ಕಿಯ ಮೇಲಿನ ಅವಲಂಬನೆಯು ಆರೋಗ್ಯಕ್ಕೆ ಯಾವಾಗಲೂ ಪ್ರಯೋಜನಕಾರಿಯಾಗಿರುವುದಿಲ್ಲ. ಅಕ್ಕಿಯು ಅಗತ್ಯವಾದ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತದೆ, ಆದರೆ ಇದು ಹೆಚ್ಚಿನ ಪಿಷ್ಟವನ್ನು ಹೊಂದಿದೆ ಮತ್ತು ಕೆಲವು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಅಂತೆಯೇ, ಸಂಸ್ಕರಿಸಿದ ಬಿಳಿ ಅಕ್ಕಿ(White Rice)ಯ ಅತಿಯಾದ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು ಎಂದು ಪೌಷ್ಟಿಕತಜ್ಞ ಪ್ರಿಯಾ ಭರ್ಮಾ ಸಲಹೆ ನೀಡುತ್ತಾರೆ.

ಆದ್ದರಿಂದ, ನೀವು ಸಂಪೂರ್ಣವಾಗಿ ನಿಮ್ಮ ಊಟದಿಂದ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಬೇಕೇ? ನೀವು ಒಂದು ತಿಂಗಳ ಕಾಲ ಅನ್ನ ತಿನ್ನದಿದ್ದರೆ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬ ಪ್ರಶ್ನೆಗಳಿಗೆ ಪ್ರಿಯಾ ಭರ್ಮಾ ಉತ್ತರ ನೀಡಿದ್ದಾರೆ. ನೀವು ಒಂದು ತಿಂಗಳ ಕಾಲ ಅನ್ನವನ್ನು ತ್ಯಜಿಸಿದಾಗ , ಕಡಿಮೆ ಕ್ಯಾಲೋರಿ ಸೇವನೆಯಿಂದಾಗಿ ನಿಮ್ಮ ದೇಹವು ತೂಕವನ್ನು ಕಳೆದುಕೊಳ್ಳಬಹುದು. ಅಕ್ಕಿಯಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವಿಲ್ಲದೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸ್ಥಿರವಾಗಬಹುದು ಎಂದು ಭರ್ಮಾ ಹೇಳಿದ್ದಾರೆ.

ವೊಕಾರ್ಡ್ ಹಾಸ್ಪಿಟಲ್ಸ್‌ನ ಹಿರಿಯ ಪೌಷ್ಟಿಕತಜ್ಞರಾದ ರಿಯಾ ದೇಸಾಯಿಯವರ ಪ್ರಕಾರ ಒಂದು ತಿಂಗಳ ಕಾಲ ಅನ್ನವನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ಸ್ವಲ್ಪ ಪ್ರಮಾಣದ ತೂಕ ಕಡಿಮೆಯಾಗಬಹುದು ಆದರೆ ಅಕ್ಕಿಯನ್ನು ಮತ್ತೊಂದು ಧಾನ್ಯದೊಂದಿಗೆ ಬದಲಾಯಿಸದಿದ್ದರೆ ಕ್ಯಾಲೊರಿಗಳು ಮತ್ತು ಒಟ್ಟು ಕಾರ್ಬೋಹೈಡ್ರೇಟ್‌ಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.  ಜೊತೆಗೆ ರಕ್ತದ ಗ್ಲೂಕೋಸ್ ಮಟ್ಟದ ಕಾಳಜಿಯಿರುವಂತೆ, ಅನ್ನವನ್ನು ತ್ಯಜಿಸುವುದು ಊಟದ ನಂತರದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಆಹಾರದಿಂದ ಅನ್ನವನ್ನು ಸಂಪೂರ್ಣವಾಗಿ ತೆಗೆದುಹಾಕಲು ತಜ್ಞರು ಶಿಫಾರಸು ಯಾವಾಗಲು ಶಿಫಾರಸ್ಸು ಮಾಡುವುದಿಲ್ಲ. ಅದಾಗಿಯೂ ಒಂದು ತಿಂಗಳಿಗೆ ಅನ್ನವನ್ನು ತ್ಯಜಿಸಬೇಕೆ ಎಂಬುದು ವೈಯಕ್ತಿಕ ಗುರಿಗಳು ಮತ್ತು ಆರೋಗ್ಯವನ್ನು ಅವಲಂಬಿಸಿರುತ್ತದೆ. ಅಕ್ಕಿ ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ಕಾರ್ಬೋಹೈಡ್ರೇಟ್ ಸೇವನೆಯನ್ನು ನಿರ್ವಹಿಸುವಂತಹ ತಾತ್ಕಾಲಿಕವಾಗಿ ಅದನ್ನು ಹೊರಗಿಡಲು ಕಾರಣಗಳಿರಬಹುದು. ಆದಾಗ್ಯೂ, ವಿವಿಧ ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ, ಭರ್ಮಾ ಹೇಳಿದರು.

ಇದನ್ನೂ ಓದಿ: ಆಹಾರಗಳನ್ನು ಹೆಚ್ಚಿನ ಶಾಖದಲ್ಲಿ ಬೇಯಿಸುವುದು ಕ್ಯಾನ್ಸರ್ ಉಂಟುಮಾಡಬಹುದು; ಅಧ್ಯಯನ

ಆದಾಗ್ಯೂ, ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ, ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಲು ಹೇಳಿದರೆ, ನೀವು ಕೆಲವು ಆರೋಗ್ಯಕರ ಪರ್ಯಾಯಗಳಿಗೆ ಬದಲಾಯಿಸಬಹುದು. “ಅಕ್ಕಿಗೆ ಆರೋಗ್ಯಕರ ಪರ್ಯಾಯಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವ ಕ್ವಿನೋವಾ, ಹೂಕೋಸು ಇತರ ಧಾನ್ಯಗಳಾದ ಬಾರ್ಲಿ, ಪ್ರೋಟೀನ್ ಮತ್ತು ಫೈಬರ್‌ಗಾಗಿ ದ್ವಿದಳ ಧಾನ್ಯಗಳು ಮತ್ತು ಪೋಷಕಾಂಶ-ಭರಿತ ಕಾರ್ಬೋಹೈಡ್ರೇಟ್ ಮೂಲವಾಗಿ ಸಿಹಿ ಆಲೂಗಡ್ಡೆ ಸೇರಿವೆ. ನಿಮ್ಮ ಆಹಾರದ ಅಗತ್ಯತೆಗಳು ಮತ್ತು ಆದ್ಯತೆಗಳೊಂದಿಗೆ ಹೊಂದಿಕೊಳ್ಳುವ ಪರ್ಯಾಯಗಳನ್ನು ಆರಿಸಿ, ಭರ್ಮಾ ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:21 am, Thu, 22 June 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!