AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?

Stroke Symptoms: ಭಾರತದಲ್ಲಿ ಪ್ರತಿ ವರ್ಷ 1.44ರಿಂದ 1.64 ಮಿಲಿಯನ್ ಪಾರ್ಶ್ವವಾಯು ಪ್ರಕರಣಗಳು ಪತ್ತೆಯಾಗುತ್ತಿದೆ. ಕೆಲವೊಮ್ಮೆ ನಾವು ಪಾರ್ಶ್ವವಾಯುವಿನ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸದಿದ್ದರೆ, ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ.

Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?
ಪಾರ್ಶ್ವವಾಯು
TV9 Web
| Edited By: |

Updated on: Nov 09, 2021 | 5:27 PM

Share

ಪಾರ್ಶ್ವವಾಯು ರೋಗ ಹೊಂದಿರುವವರಿಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ವಿನಾಶಕಾರಿಯಾದುದಾಗಿದೆ. ಈ ರೋಗ ಅಕಾಲಿಕ ಮರಣ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗಬಹುದು. ಭಾರತದಲ್ಲಿ ಪಾರ್ಶ್ವವಾಯು (Stroke) ಸಂಭವಿಸುವ ಪ್ರಮಾಣ 1,00,000 ಜನರಿಗೆ 119ರಿಂದ145 ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಪ್ರತಿ ವರ್ಷ 1.44ರಿಂದ 1.64 ಮಿಲಿಯನ್ ಪಾರ್ಶ್ವವಾಯು ಪ್ರಕರಣಗಳು ಪತ್ತೆಯಾಗುತ್ತಿದೆ. ಕೆಲವೊಮ್ಮೆ ನಾವು ಪಾರ್ಶ್ವವಾಯುವಿನ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸದಿದ್ದರೆ, ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಅಂತಹ ಒಂದು ಚಿಹ್ನೆಯು ಟ್ರಾನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್ (TIA) ಅಥವಾ ಮಿನಿ-ಸ್ಟ್ರೋಕ್ ಆಗಿದೆ. TIA ನಂತರ ಮೊದಲ ಮೂರು ತಿಂಗಳಲ್ಲಿ ಸ್ಟ್ರೋಕ್ ಅಪಾಯವು 2ರಿಂದ 17 ಪ್ರತಿಶತ ಎಂದು ಗಮನಿಸಲಾಗಿದೆ. TIAಯ ಇತಿಹಾಸ ಹೊಂದಿರುವ ಸುಮಾರು ಶೇ. 33ರಷ್ಟು ಜನರು ಯಾವುದೇ ಚಿಕಿತ್ಸೆಯಿಲ್ಲದೆ ಸ್ಟ್ರೋಕ್​ಗೆ ಬಲಿಯಾಗುತ್ತಿದ್ದಾರೆ.

ಮೆದುಳಿಗೆ ರಕ್ತದ ಹರಿವು ಸ್ವಲ್ಪ ಸಮಯದವರೆಗೆ (5 ನಿಮಿಷಗಳಿಗಿಂತ ಕಡಿಮೆ) ಕಡಿತಗೊಂಡಾಗ ಅದು ಪಾರ್ಶ್ವವಾಯುವಿನಲ್ಲಿ ಕಂಡುಬರುವ ಅಸ್ಥಿರ ನರವೈಜ್ಞಾನಿಕ ರೋಗಲಕ್ಷಣವನ್ನು ಉಂಟುಮಾಡುತ್ತದೆ. ಇದನ್ನು ಟಿಐಎ ಎಂದು ಕರೆಯಲಾಗುತ್ತದೆ. TIAಯನ್ನು ಮಿನಿ-ಸ್ಟ್ರೋಕ್ ಎಂದೂ ಕರೆಯಲಾಗುತ್ತದೆ. TIAಯ ಲಕ್ಷಣಗಳು ಸಾಮಾನ್ಯವಾಗಿ ಒಂದು ಗಂಟೆಯೊಳಗೆ ಕಡಿಮೆಯಾಗುತ್ತವೆ (ಸಾಮಾನ್ಯವಾಗಿ 15 ನಿಮಿಷಗಳಿಗಿಂತ ಕಡಿಮೆ). ಆದರೆ ಕೆಲವು ಸಂದರ್ಭಗಳಲ್ಲಿ 24 ಗಂಟೆಗಳವರೆಗೆ ಇರುತ್ತದೆ.

ವಯಸ್ಸು ಮತ್ತು ಕುಟುಂಬದ ಇತಿಹಾಸದಂತಹ ನಮ್ಮ ನಿಯಂತ್ರಣದಲ್ಲಿಲ್ಲದ ಅಪಾಯಗಳ ಹೊರತಾಗಿ, ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ಪಾರ್ಶ್ವವಾಯು/ಟಿಐಎ ಅಪಾಯವಿದೆ. ಸ್ಥೂಲಕಾಯತೆ, ಶೀರ್ಷಧಮನಿ ಅಪಧಮನಿ ಕಾಯಿಲೆ, ಅಧಿಕ ಬಿಪಿ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಹೃದಯದ ಸ್ಥಿತಿಗತಿಗಳಂತಹ ಇತರ ಆರೋಗ್ಯ ಪರಿಸ್ಥಿತಿಗಳು ಸ್ಟ್ರೋಕ್/ TIAಯ ಆಡ್ಸ್ ಅನ್ನು ಹೆಚ್ಚಿಸುತ್ತವೆ.

ಅತಿಯಾದ ಧೂಮಪಾನ, ಮದ್ಯಪಾನ, ಅಧಿಕ ಕೊಲೆಸ್ಟ್ರಾಲ್ ಇರುವ ಆಹಾರಗಳನ್ನು ಸೇವಿಸುವುದು ಮತ್ತು ಆಂಫೆಟಮೈನ್‌ಗಳು, ಕೊಕೇನ್ ಮತ್ತು ಹೆರಾಯಿನ್‌ನಂತಹ ಮಾದಕ ದ್ರವ್ಯಗಳನ್ನು ಬಳಸುವುದರಿಂದ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ. ಕೆಲವು ಕಾಯಿಲೆಗಳು ಯಾವ ಸೂಚನೆ ಕೊಡದೆ ಬರುತ್ತವೆ. ಅಂತಹ ಕಾಯಿಲೆಗಳಲ್ಲಿ ಪಾರ್ಶ್ವವಾಯು ಅಥವಾ ಲಕ್ವ ಕೂಡ ಒಂದು. ಆದರೂ ಅದು ಕೆಲವು ಸೂಚನೆಗಳನ್ನು ಕೊಡುತ್ತದೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ಧಾವಿಸಲು ಮರೆಯಬೇಡಿ.

ಮೆದುಳಿನ ರಕ್ತ ಸಂಚಾರ ಕಡಿಮೆಯಾಗಿ ಮೆದುಳಿನ ಕಾರ್ಯ ಕಡಿತಗೊಳ್ಳುವುದನ್ನು ಮೆದುಳು ಲಕ್ವ ಎನ್ನಲಾಗುತ್ತದೆ. ಪಾರ್ಶ್ವವಾಯು ಬರುವ 8 ಸೂಚನೆಗಳು ಹೀಗಿವೆ. ಮುಖ ಒಂದು ಕಡೆ ಇಳಿ ಬೀಳುವಂತೆ ಅನ್ನಿಸಿದರೆ ಅಥವಾ ಒಂದು ಕಡೆ ಸಂಪೂರ್ಣ ಜೋಮು ಹಿಡಿದಿರುವಂತೆ ಅನ್ನಿಸಿದರೆ ತಕ್ಷಣ ವೈದ್ಯರ ಬಳಿ ಹೋಗಬೇಕು. ಪಾರ್ಶ್ವವಾಯು ಆಗುವ ಸೂಚನೆ ಇದ್ದರೆ ಮೊದಲು ಅವಳ ಅಥವಾ ಅವನ ತೋಳುಗಳು ಮರಗಟ್ಟಿದ ಅನುಭವವಾಗುತ್ತದೆ. ನೀವು ಅವರಲ್ಲಿ ಕೈಯನ್ನು ಮೇಲಕ್ಕೆ ಎತ್ತುವಂತೆ ಹೇಳಬೇಕು, ಲಕ್ವ ರೋಗಿಗಳಿಗೆ ಕೈ ತಕ್ಷಣ ಕೆಳಗೆ ಇಳಿ ಬಿದ್ದುಬಿಡುತ್ತದೆ. ಪಾರ್ಶ್ವವಾಯು ರೋಗಿಗಳಿಗೆ ಮಾತು ತೊದಲುತ್ತದೆ. ಪಾರ್ಶ್ವವಾಯುವಿನ ಸೂಚನೆಗಳಲ್ಲಿ ದೇಹವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟ ಎನಿಸುತ್ತದೆ. ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಳ್ಳುತ್ತದೆ. ದೃಷ್ಟಿ ದುರ್ಬಲಗೊಳ್ಳಬಹುದು. ತಲೆ ತಿರುಗುವುದು ಮತ್ತು ಸಮತೋಲನ ತಪ್ಪುವುದು ಪಾರ್ಶ್ವವಾಯುವಿನ ಸೂಚನೆ.

ಪಾರ್ಶ್ವವಾಯುವಿನಿಂದ ಪಾರಾಗಲು ಹೀಗೆ ಮಾಡಿ: – ಧೂಮಪಾನವನ್ನು ತ್ಯಜಿಸುವುದು ಮತ್ತು ತಂಬಾಕಿನಿಂದ ದೂರ ಉಳಿಯುವುದು ಮುಖ್ಯ. – ಸಾಕಷ್ಟು ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ತಿನ್ನಿ. – ಉಪ್ಪು ಮತ್ತು ಕೊಬ್ಬಿನ ಅತಿಯಾದ ಸೇವನೆಯ ಮೇಲೆ ನಿಗಾ ಇಡುವುದು – ನಿಯಮಿತವಾಗಿ ವ್ಯಾಯಾಮ ಮಾಡುವುದು – ಮನರಂಜನಾ ಔಷಧಿಗಳಿಂದ ದೂರವಿಡುವುದು. – ದೇಹದ ತೂಕವನ್ನು ಕಾಪಾಡಿಕೊಳ್ಳುವುದು. – ಹೃದ್ರೋಗ, ಮಧುಮೇಹ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳಿಗೆ ಸಕಾಲಿಕ ಚಿಕಿತ್ಸೆಯ ಯೋಜನೆಯನ್ನು ಅನುಸರಿಸಿ – ರೋಗನಿರ್ಣಯ ಮತ್ತು ನಿರ್ವಹಣೆ

ಇದನ್ನೂ ಓದಿ: Health Tips: ಕೈ ಸೆಳೆತ ಸಮಸ್ಯೆ ಕಾಡುತ್ತಿದೆಯಾ? ಕಾರಣಗಳೇನು ಗೊತ್ತಾ?

Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್