Sign In

By signing in or creating an account, you agree with Associated Broadcasting Company's Terms & Conditions and Privacy Policy.

Ragi Cake: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಆರೋಗ್ಯಕರ ಕೇಕ್

ಸಕ್ಕರೆ ಕಾಯಿಲೆ ಇರುವವರು ಮತ್ತು ಸಿಹಿ ತಿನ್ನುವ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗದವರಿಗೆ ವಿಶೇಷವಾಗಿ ಈ ಕೇಕ್ ರೆಸಿಪಿಯನ್ನು ತಿಳಿಸಲಾಗಿದೆ.

Ragi Cake: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ಆರೋಗ್ಯಕರ ಕೇಕ್
Raagi CakeImage Credit source: Healthy Kadai
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 02, 2022 | 12:45 PM

ಸಕ್ಕರೆ ಕಾಯಿಲೆ ಬಂತೆಂದರೆ ಸಾಕು ಸಿಹಿ ತಿಂಡಿಗಳಿಂದ ದೂರವಿರಬೇಕಾದುದು ಅನಿವಾರ್ಯ. ಇದಕ್ಕೆ ಪರಿಹಾರವಾಗಿ ಇಲ್ಲಿದೆ ಆರೋಗ್ಯಕರ ಕೇಕ್ . ಸುಲಭವಾಗಿ ಮನೆಯಲ್ಲೇ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಮಕ್ಕಳಿಗೆ , ವಿಶೇಷವಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು , ಸಿಹಿ ತಿಂಡಿಗಳಿಂದ ದೂರವಿರುವವರಿಗೆ ಮಾಡಿ ಕೊಡಿ.

ಪ್ರತಿಯೊಬ್ಬರೂ ಸಿಹಿತಿಂಡಿಗಳನ್ನು ಇಷ್ಟಪಡುವುದು ಸಹಜ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಮತ್ತು ಸಿಹಿ ತಿನ್ನುವ ಉತ್ಸಾಹವನ್ನು ನಿಯಂತ್ರಿಸಲು ಸಾಧ್ಯವಾಗದವರಿಗೆ ವಿಶೇಷವಾಗಿ ಈ ಕೇಕ್ ರೆಸಿಪಿಯನ್ನು ತಿಳಿಸಲಾಗಿದೆ. ಹೌದು ಇದು ರಾಗಿ ಚಾಕೊಲೇಟ್  ಕೇಕ್. ಇದರ ಪಾಕವಿಧಾನ ಇಲ್ಲಿದೆ, ಇದನ್ನು ಡಯಾಬಿಟಿಕ್ ಕೇಕ್ ಎಂದು ಕೂಡ ಕರೆಯಬಹುದು. ಯಾಕೆಂದರೆ ಇದನ್ನು ಅವರಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಆದ್ದರಿಂದ ಈ ಪಾಕವಿಧಾನವನ್ನು ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಸಾಮಾಗ್ರಿಗಳು: ಮೊಸರು-1/2 ಕಪ್ ಅಡಿಗೆ ಸೋಡಾ-1 ಟೀಚಮಚ ಬೇಕಿಂಗ್ ಪೌಡರ್-1 ಟೀಚಮಚ ಉಪ್ಪು- 1 ಚಿಟಿಕೆ ವೆನಿಲ್ಲಾ ಎಸೆನ್ಸ್ -1 ಚಮಚ ಕೋಕೋ ಪೌಡರ್- 1 ಚಮಚ ರಾಗಿ ಹಿಟ್ಟು -1 1/2 ಕಪ್ ನೀರು – 3/4 ಕಪ್ ಬೆಣ್ಣೆ- 1 ಚಮಚ

ಮಾಡುವ ವಿಧಾನ: ಈ ಕೇಕ್ ಮಾಡಲು, ಗಾಜಿನ ಬೌಲ್ ಅನ್ನು ತೆಗೆದುಕೊಂಡು ಮೊಸರು ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಸ್ಟೀವಿಯಾ, ಉಪ್ಪು, ವೆನಿಲ್ಲಾ ಎಸೆನ್ಸ್ ಅನ್ನು ಮಿಶ್ರಣ ಮಾಡಿ. ಒಮ್ಮೆ ಮಾಡಿದ ನಂತರ, 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಮೊಸರು ಬೆರೆಸಿದ 10 ನಿಮಿಷಗಳ ನಂತರ, ರಾಗಿ ಹಿಟ್ಟು ಮತ್ತು ಎಣ್ಣೆಯೊಂದಿಗೆ ಕೋಕೋ ಪೌಡರ್ ಸೇರಿಸಿ ಸರಿಯಾಗಿ ಗಂಟಾಗದಂತೆ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಮತ್ತು ಕೇಕ್ ಹಿಟ್ಟನ್ನು ತಯಾರಿಸಿ.

ಕೇಕ್ ಟಿನ್ ತೆಗೆದುಕೊಂಡು ಅದಕ್ಕೆ ಬೆಣ್ಣೆಯನ್ನು ಹಚ್ಚಿ. ನಂತರ ಅದಕ್ಕೆ ತಯಾರಿಸಿ ಕೇಕ್ ಹಿಟ್ಟನ್ನು ಹಾಕಿ. ನಂತರ ಓವನ್‌ ನಲ್ಲಿ 180 ಡಿಗ್ರಿ ಸೆಲ್ಸಿಯಸ್ನಲ್ಲಿ 30-40 ನಿಮಿಷಗಳ ಕಾಲ ಇಡಿ. 40 ನಿಮಿಷಗಳ ನಂತರ ಓವನ್‌ನಿಂದ ಕೇಕ್ ಅನ್ನು ತೆಗೆಯುವ ಮೊದಲು ಟೂತ್‌ಪಿಕ್ ಒಮ್ಮೆ ಪರೀಕ್ಷಿಸಿ ನೋಡಿ. ನಂತರ  ಒಣ ದ್ರಾಕ್ಷಿ, ಗೋಡಂಬಿ ಬೀಜಗಳಿಂದ ಅಲಂಕರಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!