AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೈಲ್ಸ್ ಅಥವಾ ಫಿಸ್ಟುಲಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು, ಉಪಚಾರ

Piles, Fissures, Fistula: ಮೂಲವ್ಯಾಧಿ ಅಂದರೆ ಪೈಲ್ಸ್ ಅಥವಾ ಫಿಸ್ಟೂಲಾ ಸಮಸ್ಯೆ ಇರುವವರು ಪಡುವ ಪಾಡು ಅಷ್ಟಿಷ್ಟಲ್ಲ. ಅವರು ಇದಕ್ಕೆ ಆಪರೇಶನ್ ಮಾಡಿಸಿಕೊಂಡರೆ ಕಾಯಂ ಆಗಿ ವಾಸಿಯಾಗುತ್ತದೆ ಎನ್ನುವ ಹಾಗಿಲ್ಲ. ಆಪರೇಶನ್ ಮಾಡಿಸಿಕೊಂಡವರೂ ತುಂಬಾನೇ ಬಾಧೆ ಪಡುತ್ತಿರುತ್ತಾರೆ.

ಪೈಲ್ಸ್ ಅಥವಾ ಫಿಸ್ಟುಲಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು, ಉಪಚಾರ
ಮೂಲವ್ಯಾಧಿ ಅಂದರೆ ಪೈಲ್ಸ್ ಅಥವಾ ಫಿಸ್ಟೂಲಾ ಸಮಸ್ಯೆ ಇರುವವರು ಪಡುವ ಪಾಡು ಅಷ್ಟಿಷ್ಟಲ್ಲ.
TV9 Web
| Edited By: |

Updated on: Jun 24, 2022 | 6:06 AM

Share

ಮೂಲವ್ಯಾಧಿ ಅಂದರೆ ಪೈಲ್ಸ್ ಅಥವಾ ಫಿಸ್ಟೂಲಾ ಸಮಸ್ಯೆ ಇರುವವರು (Piles, Fissures, Fistula) ಪಡುವ ಪಾಡು ಅಷ್ಟಿಷ್ಟಲ್ಲ. ಅವರು ಇದಕ್ಕೆ ಆಪರೇಶನ್ ಮಾಡಿಸಿಕೊಂಡರೆ ಕಾಯಂ ಆಗಿ ವಾಸಿಯಾಗುತ್ತದೆ ಎನ್ನುವ ಹಾಗಿಲ್ಲ. ಆಪರೇಶನ್ ಮಾಡಿಸಿಕೊಂಡವರೂ ತುಂಬಾನೇ ಬಾಧೆ ಪಡುತ್ತಿರುತ್ತಾರೆ. ಮೂಲವ್ಯಾಧಿ ಕಾಯಿದೆಯಿಂದ ಬಳಲುತ್ತಿರುವವರಿಗೆ ಮಲ ವಿಸರ್ಜನೆಗೆ ಹೋಗುವುದೆಂದರೆ ಬಹು ದೊಡ್ಡ ನೋವಿನ ಸಂಗತಿ. ಹಾಗಂತ ಹೋಗದೆ ಇದ್ದರೆ ಮತ್ತಷ್ಟು ಆಪತ್ತು ತಂದೊಡ್ಡುತ್ತದೆ. ಅವರಿಗೆ ಕೂತು ಕೊಳ್ಳವುದಕ್ಕೂ ಆಗುವುದಿಲ್ಲ. ನಿಂತು ಕೊಳ್ಳಲು ಕೂಡ ಕಷ್ಟ ಕಷ್ಟ. ಮೂಲವ್ಯಾಧಿ ಸಮಸ್ಯೆ ಇರುವವರು ಪಡುವ ಪಾಡು ಅಷ್ಟಿಷ್ಟಲ್ಲ.

ಸಾಮಾನ್ಯವಾಗಿ ಮೂಲವ್ಯಾಧಿ ಅಂದರೆ ಪೈಲ್ಸ್ ಕಾಯಿಲೆ ಬಂದರೆ ಸಾಕು ಅಂತಹವರು ಊಹಿಸಿ ಕೊಳ್ಳಲೂ ಆಗದೇ ಇರುವಷ್ಟು ನೋವು ಅನುಭವಸಿತ್ತಿರುತ್ತಾರೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿ ಬೇರೆ ಬೇರೆ ಬಗೆಯಲ್ಲಿ ಕಂಡು ಬರುತ್ತದೆ. ಕೆಲವರಿಗೆ ಗುದದ್ವಾರದಲ್ಲಿ ಸ್ವಲ್ಪ ಹೊರಗಡೆ ಭಾಗದಲ್ಲಿ ಪೈಲ್ಸ್ ಉಂಟಾದರೆ, ಇನ್ನು ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ ಅಂದರೆ ಫಿಸ್ಟುಲಾ, ಫಿಷರ್ಸ್ (ಬಿರುಕುಗಳು) ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಬಹು ಮುಖ್ಯ ಕಾರಣವೆಂದರೆ ಮಲಬದ್ಧತೆ. ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡು ಬರುತ್ತದೆ. ವ್ಯಾಯಾಮ ಮತ್ತು ದೈಹಿಕ ಚಟುವಿಕೆಗಳಲ್ಲಿ ತೊಡಗದೆ ಇರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ತಜ್ಞರು ಹೇಳುವ ಪ್ರಕಾರ ಕೆಲವು ವ್ಯಾಯಾಮ ಮತ್ತು ಮನೆಮದ್ದುಗಳನ್ನು ಬಳಕೆ ಮಾಡುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬಹುದು.

ಹಾಗಾದ್ರೆ ಆ ಮನೆಮದ್ದುಗಳು ಯಾವುವು ನೋಡೋಣ. ಈ ಲೇಖನದಲ್ಲಿ ಅದರ ಬಗ್ಗೆಯೇ ಚರ್ಚೆ ಮಾಡೋಣ. ಈ ಮನೆಮದ್ದು ತಯಾರಿಗೆ ಬೇಕಾದ ಸಾಮಗ್ರಿ ಎಂದರೆ ಮೆಹಂದಿ ಎಲೆಗಳು ಮತ್ತು ನೆಲ್ಲಿಕಾಯಿ ಪುಡಿ. 25ರಿಂದ 30 ಮೆಹಂದಿ ಎಲೆಗಳನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತ್ರ ಒಂದು ಚಮಚದಷ್ಟು ನೆಲ್ಲಿಕಾಯಿ ಪುಡಿಯನ್ನು ಹಾಕಿ. ಅದರ ಜೊತೆಗೆ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ರಾತ್ರಿ ಇದನ್ನು ಕಲಸಿ ರಾತ್ರಿ ಪೂರ್ತಿ ನೆನೆಸಿಡಿ.

ಮರು ದಿನ ಬೆಳಿಗ್ಗೆ ಈ ನೀರನ್ನು ಮತ್ತೆ ಕಲಿಸಿಕೊಂಡು ಒಂದು ಲೋಟದಲ್ಲಿ ಶೋಧಿಸಿ ಕೊಂಡು ಖಾಲಿ ಹೊಟ್ಟೆಯಲ್ಲಿ ಬ್ರಷ್ ಮಾಡಿದ ನಂತರ ಕುಡಿಯಬೇಕು. ಈ ರೀತಿ ಎರಡು ವಾರ ಮಾಡಿದರೆ ಪೈಲ್ಸ್ ಸಮಸ್ಯೆ ನಿವಾರಣೆ ಆಗುತ್ತದೆ. ಲೋಳೆ ರಸದ ತಿರುಳನ್ನು ಒಂದು ಚಮಚದಷ್ಟು ಮೂರು ಬಾರಿ ದಿನದಲ್ಲಿ ಸೇವಿಸಿ. ಇದರಿಂದ ಮೂಲವ್ಯಾಧಿ ಗುಣವಾಗುವುದು. ಮುಟ್ಟಿದರೆ ಮುನಿ ಇಡೀ ಸಸ್ಯವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ, ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಬೇಕು.

ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತಿ ರಾತ್ರಿ ಹೊತ್ತು ನೆನೆಸಿಟ್ಟು ಬೆಳಿಗ್ಗೆ ಹಾಲಿನ ಸಮೇತ ತಿನ್ನಬೇಕು. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ತುಪ್ಪದಲ್ಲಿ ಹುರಿದು ಮೊದಲ ಅನ್ನದೊಂದಿಗೆ ಸೇವಿಸಬೇಕು. ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. ಈ ಮನೆಮದ್ದುಗಳು ಕೇವಲ ಪೈಲ್ಸ್ ಅಥವಾ ಫಿಸ್ಟೂಲಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಮಾತ್ರವಲ್ಲದೆ ದೇಹದಲ್ಲಿ ಇನ್ಸುಲಿನ್ ಕಣಗಳ ಉತ್ಪತ್ತಿಗೂ ನೆರವಾಗುತ್ತದೆ. ಜೊತೆಗೆ ಶುಗರ್ ಕಾಯಿಲೆ ಇರುವವರು ನಿತ್ಯವೂ ಒಂದು ಲೋಟ ಕುಡಿಯುವುದರಿಂದ ಶುಗರ್ ಕಡಿಮೆ ಆಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು. ಬಿಪಿ ಕಡಿಮೆ ಮಾಡಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸುಸ್ತು ಆಯಾಸ ನಿರ್ಜಲೀಕರಣ ಸಮಸ್ಯೆಗಳು ಈ ಒಂದು ಡ್ರಿಂಕ್ ನಿಂದ ಹೋಗಲಾಡಿಸಬಹುದು.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು