AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಗರ್ಭಾವಸ್ಥೆ ಹಾಗೂ ಆಹಾರಕ್ಕೆ ಸಂಬಂಧಿಸಿದ ಮಿಥ್ಯಗಳ ಬಗ್ಗೆ ತಿಳಿಯಿರಿ

ಗರ್ಭಾವಸ್ಥೆ(Pregnancy)ಯ ಸಮಯವು ಮಹಿಳೆಯರಿಗೆ ಹೆಚ್ಚು ವಿಶೇಷ ಮತ್ತು ಸುಂದರವಾಗಿರುತ್ತದೆ, ಹಾಗೆಯೇ ಹೆಚ್ಚು ಅಪಾಯಕಾರಿ ಕೂಡ. ಏಕೆಂದರೆ ಗರ್ಭಧಾರಣೆಯ 9 ತಿಂಗಳ ಅವಧಿಯಲ್ಲಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಮಾತ್ರವಲ್ಲದೆ ಹುಟ್ಟುವ ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.

Women Health: ಗರ್ಭಾವಸ್ಥೆ ಹಾಗೂ ಆಹಾರಕ್ಕೆ ಸಂಬಂಧಿಸಿದ ಮಿಥ್ಯಗಳ ಬಗ್ಗೆ ತಿಳಿಯಿರಿ
Pregnancy
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 23, 2022 | 9:34 PM

Share

ಗರ್ಭಾವಸ್ಥೆ(Pregnancy)ಯ ಸಮಯವು ಮಹಿಳೆಯರಿಗೆ ಹೆಚ್ಚು ವಿಶೇಷ ಮತ್ತು ಸುಂದರವಾಗಿರುತ್ತದೆ, ಹಾಗೆಯೇ ಹೆಚ್ಚು ಅಪಾಯಕಾರಿ ಕೂಡ. ಏಕೆಂದರೆ ಗರ್ಭಧಾರಣೆಯ 9 ತಿಂಗಳ ಅವಧಿಯಲ್ಲಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಮಾತ್ರವಲ್ಲದೆ ಹುಟ್ಟುವ ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.

ಈ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂದು ಅಜ್ಜಿ ಸೇರಿದಂತೆ ಕುಟುಂಬದ ಹಿರಿಯ ಸದಸ್ಯರು ಮತ್ತು ಸ್ನೇಹಿತರು ಗರ್ಭಿಣಿಗೆ ಸಲಹೆ ನೀಡುತ್ತಾರೆ.

ಇದಲ್ಲದೆ, ಗರ್ಭಾವಸ್ಥೆಯಲ್ಲಿ ಆಹಾರದ ಬಗ್ಗೆ ಅನೇಕ ಮಿಥ್ಯಗಳಿವೆ. ಅನೇಕ ಮಹಿಳೆಯರು ಈ ಮಿಥ್ಯಗಳನ್ನೇ ಅನುಸರಿಸುತ್ತಾರೆ, ಆದರೆ ಕೆಲವು ಮಹಿಳೆಯರು ಅವುಗಳನ್ನು ನಂಬುವುದಿಲ್ಲ. ಈ ಲೇಖನದಲ್ಲಿ, ಗರ್ಭಾವಸ್ಥೆಯಲ್ಲಿ ಆಹಾರಕ್ಕೆ ಸಂಬಂಧಿಸಿದ ಮಿಥ್ಯಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಗರ್ಭಾವಸ್ಥೆಯಲ್ಲಿ ಆಹಾರದ ಬಗ್ಗೆ ಅನೇಕ ಮಿಥ್ಯಗಳಿವೆ ಎಂದು ತಜ್ಞರು ಹೇಳುತ್ತಾರೆ. ಈ ಮಿಥ್ಯವನ್ನು ನಂಬಬಾರದು. ಆ ಮಿಥ್ಯಗಳ ಬಗ್ಗೆ ತಿಳಿಯೋಣ.

ಹೆಚ್ಚು ಕ್ಯಾಲೊರಿಯುಕ್ತ ಆಹಾರ ಸೇವನೆ ಗರ್ಭಾವಸ್ಥೆಯ ಪ್ರತಿ ಹಂತದಲ್ಲೂ ಕ್ಯಾಲೊರಿಗಳನ್ನು ಸೇವಿಸುವುದು ಒಂದು ಮಿಥ್ಯವಾಗಿದೆ. ತಜ್ಞರ ಪ್ರಕಾರ, ಗರ್ಭಧಾರಣೆಯ ಮೊದಲ 16 ರಿಂದ 20 ವಾರಗಳವರೆಗೆ ಸಾಮಾನ್ಯ ಆಹಾರವನ್ನು ಸೇವಿಸಬೇಕು. 20 ವಾರಗಳ ನಂತರ ಮಾತ್ರ ಹೆಚ್ಚಿನ ಕ್ಯಾಲೋರಿಗಳು ಬೇಕಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಗರ್ಭಧಾರಣೆಯ ಆರಂಭದಲ್ಲಿ ಬಲವಂತವಾಗಿ ಹೆಚ್ಚು ಕ್ಯಾಲೊರಿಗಳನ್ನು ಸೇವಿಸಬಾರದು.

ಇದನ್ನೂ ಓದಿ

ಸೀ ಫುಡ್ ಸೇವಿಸಬಹುದೇ? ಈ ಸಮಯದಲ್ಲಿ ಸೀ ಫುಡ್ ತಿನ್ನಬಹುದೇ ಅಥವಾ ಇಲ್ಲವೇ ಎಂದು ಗರ್ಭಿಣಿಯರು ಹೆಚ್ಚಾಗಿ ಚಿಂತಿಸುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಮಾಂಸಾಹಾರ ಸೇವಿಸಬಹುದು, ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ನೀವು ಮೀನುಗಳನ್ನು ಹೆಚ್ಚಾಗಿ ಸೇವಿಸಬಾರದು. ಇದು ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಲ್ಮನ್ ಮೀನುಗಳನ್ನು ತಿನ್ನಬಹುದು ಏಕೆಂದರೆ ಈ ಮೀನಿನಲ್ಲಿ ಪಾದರಸವು ಸಣ್ಣ ಪ್ರಮಾಣದಲ್ಲಿ ಕಂಡುಬರುತ್ತದೆ. ಅದೇ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ ಕಚ್ಚಾ ಸೀ ಫುಡ್ ಸೇವಿಸುವುದನ್ನು ತಪ್ಪಿಸಬೇಕು.

ಚಹಾ ಅಥವಾ ಕಾಫಿ ಕುಡಿಯಬೇಡಿ

ಗರ್ಭಧರಿಸಿದ ಬಳಿಕ ಮಹಿಳೆಯರು ಸಾಮಾನ್ಯವಾಗಿ ಚಹಾ ಮತ್ತು ಕಾಫಿ ಕುಡಿಯುವಂತಿಲ್ಲ ಎಂದು ಹೇಳುತ್ತಾರೆ, ಟೀ ಕಾಫಿ ಕುಡಿದರೆ ಮಗು ಕಪ್ಪಾಗುತ್ತದೆ ಎಂದು ಹೇಳುತ್ತಾರೆ. ಕೆಫೇನ್ ಅಂಶವಿರುವ ಕಾರಣ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಕಾಫಿ ಚಹಾ ಸೇವಿಸಬಾರದು. ತಜ್ಞರ ಪ್ರಕಾರ, ನೀವು ಗರ್ಭಾವಸ್ಥೆಯಲ್ಲಿ ಚಹಾ ಮತ್ತು ಕಾಫಿಯನ್ನು ಸೇವಿಸಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಹಾನಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದಿನದಲ್ಲಿ ಒಂದು ಸಣ್ಣ ಕಪ್ ಚಹಾ ಅಥವಾ ಕಾಫಿಯನ್ನು ಸೇವಿಸಬಹುದು.

ಈ ಹಣ್ಣುಗಳನ್ನು ತಿಂದರೆ ಗರ್ಭಪಾತವಾಗುತ್ತದೆ ಗರ್ಭಾವಸ್ಥೆಯಲ್ಲಿ, ಅನಾನಸ್, ಪಪ್ಪಾಯ ಹಣ್ಣುಗಳನ್ನು ಸೇವಿಸುವುದರಿಂದ ಗರ್ಭಪಾತವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇದು ಸುಳ್ಳು. ಗರ್ಭಾವಸ್ಥೆಯಲ್ಲಿ ನೀವು ಡ್ರೈ ಫ್ರೂಟ್ಸ್​ಗಳನ್ನು ಸೇವಿಸಬಹುದು. ಅದೇ ಸಮಯದಲ್ಲಿ, ಅವುಗಳನ್ನು ಹೆಚ್ಚು ಸೇವಿಸುವುದರಿಂದ ಕೆಲವೊಮ್ಮೆ ಸಮಸ್ಯೆಗಳು ಉಂಟಾಗುತ್ತದೆ. ಆದರೆ ಇದು ಗರ್ಭಪಾತಕ್ಕೆ ಕಾರಣವಲ್ಲ. ಸೋಂಕು ಅಥವಾ ಕೆಲವು ಕಾಯಿಲೆಗಳಿಂದ ಗರ್ಭಪಾತ ಸಂಭವಿಸುತ್ತದೆ. ಆಹಾರ ಸೇವಿಸುವುದರಿಂದ ಗರ್ಭಪಾತವಾಗುವುದಿಲ್ಲ.

Published On - 8:30 pm, Thu, 23 June 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?