AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hookah: ಕರ್ನಾಟಕದಲ್ಲಿ ಹುಕ್ಕಾ ನಿಷೇಧ; ಇದು ಸಿಗರೇಟ್​ಗಿಂತ ಅಪಾಯಕಾರಿಯಾ?

Health Tips: ಇತ್ತೀಚಿನ ದಿನಗಳಲ್ಲಿ ಹುಕ್ಕಾ ಸೇವನೆಯ ಪ್ರಮಾಣ ಜಾಸ್ತಿಯಾಗಿತ್ತು. WHO ವರದಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು ಶೇ. 23ರಷ್ಟು ಜನರು ತಂಬಾಕು ಸೇವಿಸುತ್ತಾರೆ. ಇವುಗಳಲ್ಲಿ ಸುಮಾರು ಶೇ. 10ರಷ್ಟು ಧೂಮಪಾನ ಮಾಡುವವರಾದರೆ ಹುಕ್ಕಾ ಸೇದುವವರ ಸಂಖ್ಯೆಯೇ ಹೆಚ್ಚು. ಹುಕ್ಕಾ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಅಡ್ಡಪರಿಣಾಮಗಳು ಏನು?

Hookah: ಕರ್ನಾಟಕದಲ್ಲಿ ಹುಕ್ಕಾ ನಿಷೇಧ; ಇದು ಸಿಗರೇಟ್​ಗಿಂತ ಅಪಾಯಕಾರಿಯಾ?
ಹುಕ್ಕಾ Image Credit source: iStock
ಸುಷ್ಮಾ ಚಕ್ರೆ
|

Updated on: Feb 10, 2024 | 11:49 AM

Share

ಹೆಚ್ಚುತ್ತಿರುವ ಹುಕ್ಕಾ (Hookah) ಸೇವನೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ (Hookah Ban in Karnataka) ಹುಕ್ಕಾವನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಯುವಜನತೆ ಹುಕ್ಕಾಗೆ ಹೆಚ್ಚು ಅಡಿಕ್ಟ್​ ಆಗಿದ್ದರು. ನಗರ ಪ್ರದೇಶಗಳಲ್ಲೂ ಹುಕ್ಕಾ ಬಾರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಹುಕ್ಕಾ ಒಂದು ರೀತಿಯ ಮಾದಕವಸ್ತುವಾಗಿದ್ದು, ಅದರ ವ್ಯಸನವು ಹೆಚ್ಚುತ್ತಿದೆ. ಹೀಗಾಗಿ, ಹುಕ್ಕಾ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ಜನರು ತಿಳಿದುಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ಹುಕ್ಕಾ ಸೇವನೆಯಿಂದ ದೇಹ ಹೊಗೆಯನ್ನು ಹೀರಿಕೊಳ್ಳುತ್ತದೆ. ಇದು ಶ್ವಾಸಕೋಶದಲ್ಲಿ ಸೋಂಕನ್ನು ಉಂಟುಮಾಡುತ್ತದೆ. ಇದರಿಂದ ಅಸ್ತಮಾ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಕ್ಯಾನ್ಸರ್ (Cancer)  ಕೂಡ ಉಂಟಾಗಬಹುದು.

ಹುಕ್ಕಾ ಆರೋಗ್ಯಕ್ಕೆ ಎಷ್ಟು ಹಾನಿಕಾರಕ?:

ಆರೋಗ್ಯ ತಜ್ಞರ ಪ್ರಕಾರ, ಪ್ರಾಚೀನ ಕಾಲದಿಂದಲೂ ಜನರು ಹುಕ್ಕಾ ಸೇದುತ್ತಿದ್ದಾರೆ. ಆಗ ಗ್ರಾಮೀಣ ಪ್ರದೇಶದ ಜನರು ಇದನ್ನು ಹೆಚ್ಚು ಬಳಸುತ್ತಿದ್ದರು. ಜನರು ತಂಬಾಕು ಹಾಕುವ ಮೂಲಕ ಹುಕ್ಕಾ ಸೇದುತ್ತಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ, ನಗರಗಳಲ್ಲಿ ಹುಕ್ಕಾ ವೇಗವಾಗಿ ಹೆಚ್ಚಾಗಿದೆ. ಸಿಗರೇಟಿನಂತೆಯೇ, ಇದು ನಿಕೋಟಿನ್ ಮತ್ತು ಟಾರ್ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಿಕೋಟಿನ್ ಇರುವ ಕಾರಣ ಹುಕ್ಕಾ ಕೂಡ ಸಿಗರೇಟಿನಂತೆ ಚಟವಾಗಿ ಪರಿವರ್ತನೆಯಾಗುತ್ತದೆ. ಹುಕ್ಕಾ ಸೇದುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ.

ಇದನ್ನೂ ಓದಿ: ಕರ್ನಾಟಕದಲ್ಲಿ ಹುಕ್ಕಾ ಬಾರ್ ನಿಷೇಧ: ಅಧಿಕೃತ ಆದೇಶ ಹೊರಡಿಸಿದ ಆರೋಗ್ಯ ಇಲಾಖೆ

ಇತ್ತೀಚಿನ ದಿನಗಳಲ್ಲಿ ರುಚಿಯ ಹುಕ್ಕಾ ಕೂಡ ಮಾರುಕಟ್ಟೆಗೆ ಬಂದಿದೆ. ಹೆಚ್ಚಿನ ಜನರು ಇದು ಹಾನಿಕಾರಕವಲ್ಲ ಎಂದು ಭಾವಿಸಿದ್ದಾರೆ. ಆದರೆ ಸುವಾಸನೆಯ ಹುಕ್ಕಾದಲ್ಲಿರುವ ಹೊಗೆ ಶ್ವಾಸಕೋಶವನ್ನು ಪ್ರವೇಶಿಸಿ ಕ್ಯಾನ್ಸರ್​ಗೆ ಕಾರಣವಾಗಬಹುದು. ಅನೇಕ ಜನರು ಹುಕ್ಕಾ ಜೊತೆಗೆ ಮದ್ಯಪಾನ ಮಾಡುತ್ತಾರೆ. ಇದು ಇನ್ನೂ ಅತ್ಯಂತ ಅಪಾಯಕಾರಿಯಾಗಿದೆ. ಕೆಲವು ಸಂದರ್ಭಗಳಲ್ಲಿ, ಹುಕ್ಕಾ ಹೃದ್ರೋಗ ಮತ್ತು ಹೃದಯ ಅಪಧಮನಿಗಳ ತಡೆಗಟ್ಟುವಿಕೆಗೆ ಕಾರಣವಾಗಬಹುದು. ಹುಕ್ಕಾದಲ್ಲಿ ಬಳಸಲಾಗುವ ಕೆಲವು ರುಚಿಗಳು ಕ್ಯಾನ್ಸರ್​ಗೆ ಕಾರಣವಾಗಬಹುದು.

ಆರೋಗ್ಯ ತಜ್ಞರ ಪ್ರಕಾರ, ಅನೇಕ ಜನರು ಒಂದೇ ಹುಕ್ಕಾವನ್ನು ಸೇದುತ್ತಾರೆ. ಇದರಿಂದಾಗಿ ಒಬ್ಬರಿಂದ ಒಬ್ಬರಿಗೆ ವಿವಿಧ ರೀತಿಯ ಬ್ಯಾಕ್ಟೀರಿಯಾದ ಕಾಯಿಲೆಗಳು ಹರಡುವ ಅಪಾಯವಿದೆ. ಶಿಶಾ ಅಥವಾ ವಾಟರ್‌ಪೈಪ್ ಎಂದೂ ಕರೆಯಲ್ಪಡುವ ಹುಕ್ಕಾ ತಂಬಾಕು ಸೇವನೆಯ ಸಾಂಪ್ರದಾಯಿಕ ವಿಧಾನವಾಗಿದ್ದು, ಇದು ಪ್ರಪಂಚದಾದ್ಯಂತ ವಿಶೇಷವಾಗಿ ಯುವ ವಯಸ್ಕರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಕೆಲವು ವ್ಯಕ್ತಿಗಳು ಹುಕ್ಕಾ ಧೂಮಪಾನವನ್ನು ಸಿಗರೇಟ್ ಸೇದುವುದಕ್ಕಿಂತ ಕಡಿಮೆ ಹಾನಿಕಾರಕವೆಂದು ಗ್ರಹಿಸುತ್ತಾರೆ. ಆದರೆ, ಇದು ಕೂಡ ಸಿಗರೇಟ್​ನಷ್ಟೇ ಅಪಾಯಕಾರಿ.

ಇದನ್ನೂ ಓದಿ: Mouth Cancer: ಧೂಮಪಾನ ಮಾಡದವರಿಗೂ ಬಾಯಿಯ ಕ್ಯಾನ್ಸರ್ ಬರಲು ಕಾರಣ ಇಲ್ಲಿದೆ

ಹುಕ್ಕಾ ವಾಟರ್‌ಪೈಪ್ ಮೂಲಕ ಹೊಗೆಯನ್ನು ಉಸಿರಾಡುವುದನ್ನು ಒಳಗೊಂಡಿರುತ್ತದೆ. ಇದು ಶ್ವಾಸಕೋಶವನ್ನು ಹಾನಿಕಾರಕ ವಿಷಗಳು ಮತ್ತು ಉದ್ರೇಕಕಾರಿಗಳಿಗೆ ಒಡ್ಡುತ್ತದೆ. ಹೊಗೆಯು ಹಲವಾರು ಕಾರ್ಸಿನೋಜೆನ್‌ಗಳು, ಟಾರ್, ಹೆವಿ ಲೋಹಗಳು ಮತ್ತು ಇತರ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಅದು ಶ್ವಾಸಕೋಶದ ಅಂಗಾಂಶವನ್ನು ಹಾನಿಗೊಳಿಸುತ್ತದೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಂತಹ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ