AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Milk Teeth: ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತೆ? ಎಲ್ಲಾ ಪೋಷಕರಿಗಿರುವ ಆತಂಕ ನಿಮಗೂ ಇದೆಯಾ?

ಮಕ್ಕಳು ಸಾಮಾನ್ಯವಾಗಿ 5-6ರ ವಯಸ್ಸಿಗೆ ಬರುತ್ತಿರುವಂತೆ ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ. ಆ ವಯಸ್ಸಿನಲ್ಲೋ ಪಾಠಕ್ಕಿಂತ ಆಟವೇ ಹೆಚ್ಚು, ಹೀಗಿರುವಾಗ ಅಲುಗಾಡುತ್ತಿರುವ ಹಲ್ಲುಗಳನ್ನು ಆಗಾಗ ಕೈಯಿಂದ ಮುಟ್ಟಿಕೊಳ್ಳುತ್ತಲೇ ಇರುತ್ತಾರೆ

Milk Teeth: ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತೆ? ಎಲ್ಲಾ ಪೋಷಕರಿಗಿರುವ ಆತಂಕ ನಿಮಗೂ ಇದೆಯಾ?
Milk Teeth
TV9 Web
| Updated By: ನಯನಾ ರಾಜೀವ್|

Updated on: Nov 30, 2022 | 11:17 AM

Share

ಮಕ್ಕಳು ಸಾಮಾನ್ಯವಾಗಿ 5-6ರ ವಯಸ್ಸಿಗೆ ಬರುತ್ತಿರುವಂತೆ ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ. ಆ ವಯಸ್ಸಿನಲ್ಲೋ ಪಾಠಕ್ಕಿಂತ ಆಟವೇ ಹೆಚ್ಚು, ಹೀಗಿರುವಾಗ ಅಲುಗಾಡುತ್ತಿರುವ ಹಲ್ಲುಗಳನ್ನು ಆಗಾಗ ಕೈಯಿಂದ ಮುಟ್ಟಿಕೊಳ್ಳುತ್ತಲೇ ಇರುತ್ತಾರೆ. ಹಾಗೆಯೇ ಹಲ್ಲುಗಳನ್ನು ಕೆಲವು ಬಾರಿ ಆಟವಾಡುತ್ತಾ ಗೊತ್ತಿಲ್ಲದೇ ನುಂಗಿಯೂ ಇರಬಹುದು.

ಒಂದೊಮ್ಮೆ ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತದೆ ಎನ್ನುವ ವಿಚಾರದ ಕುರಿತು ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. ಹಲ್ಲು ಅಥವಾ ಹಲ್ಲಿನ ತುಣಕನ್ನು ನುಂಗುವುದು ಅಸಮಾನ್ಯವೇನಲ್ಲ, ಹಲ್ಲುಗಳು ತುಂಬಾ ಚಿಕ್ಕದಾಗಿರುವ ಕಾರಣ ನುಂಗಿಬಿಡಬಹುದು.

ಮಕ್ಕಳು ಯಾವಾಗ ವೈದ್ಯಕೀಯ ಸಹಾಯ ಪಡೆಯಬೇಕು? ಸಾಮಾನ್ಯವಾಗಿ ಹಲ್ಲು ಜೀರ್ಣವಾಗುತ್ತದೆ, ನ್ಯಾಷನಲ್ ಹೆಲ್ತ್​ ಸರ್ವೀಸ್ ವರದಿ ಮಾಡಿದಂತೆ ಬಹುತೇಕ ನುಂಗಿದ ಎಲ್ಲಾ ವಸ್ತುಗಳು, ಚೂಪಾದ ವಸ್ತುಗಳು ಸೇರಿದಮತೆ ಎಲ್ಲವೂ ಯಾವುದೇ ಹಾನಿ ಮಾಡದೇ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುತ್ತವೆ.

ಜೀರ್ಣಾಂಗವ್ಯೂಹದ ಕಿರಿದಾದ ಭಾಗದಿಂದ ಒಂದು ವಸ್ತುವು ಹಾದುಹೋಗಿ, ಅನ್ನನಾಳವು ಹೊಟ್ಟೆಯನ್ನು ಸೇರುತ್ತದೆ. ಅದು ಯಾವುದೇ ತೊಂದರೆ ಇಲ್ಲದೆ ಹಾದುಹೋಗುತ್ತದೆ ಎಂದು ಯುರೋಪಿಯನ್ ಸೊಸೈಟಿ ಆಫ್ ಗ್ಯಾಸ್ಟ್ರೋಇಂಟೆಸ್ಟಿನ್ ಎಂಡೋಸ್ಕೋಪಿ ಹೇಳಿದೆ.

ನೀವು ಯಾವಾಗ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು? ಒಂದೊಮ್ಮೆ ಹಲ್ಲನ್ನು ನುಂಗಿದ ಬಳಿಕ ಆಹಾರ ನುಂಗಲು ತೊಂದರೆ, ಕುತ್ತಿಗೆ ಅಥವಾ ಎದೆನೋವು, ವಾಂತಿ, ಮಲದಲ್ಲಿ ರಕ್ತ, ಹೊಟ್ಟೆನೋವು, ಜ್ವರ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಬೇಕು. ವೈದ್ಯರು ಎಂಡೋಸ್ಕೋಪಿ ಮಾಡಬೇಕಾಗಬಹುದು.

-ಹಲ್ಲುಗಳು ತುಂಬಾ ಸಡಿಲವಾಗಿದೆ ಎನಿಸಿದರೆ ನೀವು ಮಕ್ಕಳ ಹಲ್ಲನ್ನು ಸುಲಭವಾಗಿ ಕೀಳಬಹುದು -ಮಕ್ಕಳಿಗೆ ಹಲ್ಲು ಬೀಳುವ ಕುರಿತು, ಹಾಗೂ ಅದನ್ನು ನುಂಗದಂತೆ ಅರಿವು ಮೂಡಿಸಬೇಕು -ಆಹಾರ ಸೇವಿಸುವಾಗ ಅಥವಾ ಏನನ್ನಾದರೂ ಕಚ್ಚುವಾಗ ತುಂಬಾ ಜಾಗ್ರತೆಯಿಂದ ಇರುವಂತೆ ಸೂಚಿಸಬೇಕು. -ಹಲ್ಲುಜ್ಜುವಾಗ ಸಡಿಲಗೊಂಡಿರುವ ಹಲ್ಲುಗಳ ಜಾಗದಲ್ಲಿ ಒತ್ತಿ ಬ್ರಷ್ ಮಾಡದೇ ಇರುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ